ಬೆಂಗ್ಳೂರಲ್ಲಿ ಕೊಹ್ಲಿ ಪಡೆ ಬಿರುಸಿನ ಅಭ್ಯಾಸ

Published : Sep 21, 2019, 10:55 AM IST
ಬೆಂಗ್ಳೂರಲ್ಲಿ ಕೊಹ್ಲಿ ಪಡೆ ಬಿರುಸಿನ ಅಭ್ಯಾಸ

ಸಾರಾಂಶ

ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟಿ20 ಪಂದ್ಯಕ್ಕಾಗಿ ಟೀಂ ಇಂಡಿಯಾ ಸಾಕಷ್ಟು ಬೆವರು ಹರಿಸುತ್ತಿದೆ. ಈ ವೇಳೆ ರಾಹುಲ್ ದ್ರಾವಿಡ್ ಭೇಟಿ ನೀಡಿ ಆಟಗಾರರಿಗೆ ಕೆಲವೊಂದು ಉಪಯುಕ್ತ ಟಿಪ್ಸ್ ನೀಡಿದರು. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಬೆಂಗ​ಳೂ​ರು[ಸೆ.21]: ದಕ್ಷಿಣ ಆಫ್ರಿಕಾ ವಿರು​ದ್ಧದ 2ನೇ ಟಿ20 ಪಂದ್ಯ​ದಲ್ಲಿ ಭರ್ಜರಿ 7 ವಿಕೆಟ್‌ಗ​ಳಿಂದ ಗೆದ್ದ ಭಾರ​ತ, ಭಾನುವಾರ ಇಲ್ಲಿನ ಚಿ​ನ್ನ​ಸ್ವಾಮಿ ಕ್ರೀಡಾಂಗ​ಣ​ದಲ್ಲಿ ನಡೆ​ಯ​ಲಿ​ರುವ 3ನೇ ಟಿ-20 ಪಂದ್ಯ​ಕ್ಕಾಗಿ ಶುಕ್ರ​ವಾರ ಬೆಳ​ಗಿ​ನಿಂದಲೇ ಕಠಿಣ ಅಭ್ಯಾಸ ನಡೆ​ಸಿತು. 

ದೆಹಲಿ ತಂಡ ತೊರೆದ ಮತ್ತೊರ್ವ ಸ್ಟಾರ್ ಕ್ರಿಕೆಟರ್!

ಈ ವೇಳೆ ರಾಷ್ಟ್ರೀಯ ಕ್ರಿಕೆಟ್‌ ಅಕಾ​ಡೆಮಿ (ಎನ್‌​ಸಿ​ಎ) ಕ್ರಿಕೆಟ್‌ ಮುಖ್ಯಸ್ಥ ರಾಹುಲ್‌ ದ್ರಾವಿಡ್‌ ಮೈದಾ​ನಕ್ಕೆ ಭೇಟಿ ನೀಡಿ ಭಾರತ ತಂಡದ ಕೋಚ್‌ ರವಿ​ಶಾಸ್ತ್ರಿ, ನಾಯಕ ವಿರಾಟ್‌ ಕೊಹ್ಲಿ ಹಾಗೂ ಇತರ ಆಟ​ಗಾ​ರರ ಜೊತೆ ಸಮಾ​ಲೋ​ಚನೆ ನಡೆ​ಸಿ​ದ​ರು. ಎರಡೂ ತಂಡಗಳ ಆಟಗಾರರು ಅಭ್ಯಾಸ ನಡೆಸಿದರು. ನಾಯಕ ಕೊಹ್ಲಿ, ಬುಮ್ರಾ, ಶಿಖರ್‌ ಧವನ್‌, ಮನೀಶ್‌ ಪಾಂಡೆ, ರೋಹಿತ್‌ ಶರ್ಮಾ ಸೇರಿದಂತೆ ಇತರೆ ಆಟಗಾರರು ನೆಟ್ಸ್‌ನಲ್ಲಿ ಬೆವರು ಸುರಿಸಿದರು. 

ದಿಗ್ಗಜ ದ್ರಾವಿಡ್‍‌ ಜೊತೆ ರವಿ ಶಾಸ್ತ್ರಿ ಹೋಲಿಸಬೇಡಿ; BCCIಗೆ ಅಭಿಮಾನಿಗಳ ಕ್ಲಾಸ್!

3 ಪಂದ್ಯ​ಗಳ ಟಿ20 ಸರ​ಣಿ​ಯಲ್ಲಿ ಧರ್ಮ​ಶಾ​ಲಾ​ದಲ್ಲಿದ್ದ ಮೊದಲ ಪಂದ್ಯ ಮಳೆ​ಯಿಂದಾಗಿ ರದ್ದಾ​ಗಿತ್ತು. ಮೊಹಾ​ಲಿ​ಯಲ್ಲಿ ನಡೆದ 2ನೇ ಪಂದ್ಯ ಗೆದ್ದ ಭಾರತ ಸರಣಿಯಲ್ಲಿ 1-0 ಮುನ್ನ​ಡೆ​ ಪಡೆ​ದಿದ್ದು, ಕೊನೆಯ ಪಂದ್ಯ​ವನ್ನು ಗೆದ್ದು, ಸರಣಿ ಗೆಲ್ಲುವ ವಿಶ್ವಾ​ಸ​ದ​ಲ್ಲಿ ಭಾರತ ತಂಡವಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!