ದುಲೀಪ್‌ ಟ್ರೋಫಿ 2019: ಭಾರತ ರೆಡ್‌ ಚಾಂಪಿಯನ್‌

Published : Sep 08, 2019, 11:07 AM IST
ದುಲೀಪ್‌ ಟ್ರೋಫಿ 2019: ಭಾರತ ರೆಡ್‌ ಚಾಂಪಿಯನ್‌

ಸಾರಾಂಶ

ಆದಿತ್ಯ ಸರ್ವಾಟೆ ಮಾರಕ ದಾಳಿಗೆ ತತ್ತರಿಸಿದ ಇಂಡಿಯಾ ಗ್ರೀನ್ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. 2019ನೇ ಆವೃತ್ತಿಯ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಇಂಡಿಯಾ ಗ್ರೀನ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಬೆಂಗ​ಳೂರು(ಸೆ.08): 2019-20ರ ದೇಸಿ ಕ್ರಿಕೆಟ್‌ ಋುತು​ವಿನ ಮೊದಲ ಟೂರ್ನಿ ದುಲೀಪ್‌ ಟ್ರೋಫಿ​ಯಲ್ಲಿ ಭಾರತ ರೆಡ್‌ ತಂಡ ಚಾಂಪಿ​ಯನ್‌ ಆಗಿ ಹೊರ​ಹೊ​ಮ್ಮಿದೆ. ಇಲ್ಲಿನ ಚಿನ್ನ​ಸ್ವಾಮಿ ಕ್ರೀಡಾಂಗಣದಲ್ಲಿ ಶನಿ​ವಾರ ಮುಕ್ತಾ​ಯ​ಗೊಂಡ ಫೈನಲ್‌ ಪಂದ್ಯ​ದಲ್ಲಿ, ಭಾರತ ಗ್ರೀನ್‌ ವಿರುದ್ಧ ಇನ್ನಿಂಗ್ಸ್‌ ಹಾಗೂ 38 ರನ್‌ಗಳ ಗೆಲುವು ಸಾಧಿ​ಸಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ರೆಡ್‌ಗೆ 157 ರನ್‌ ಮುನ್ನಡೆ ಬಿಟ್ಟು​ಕೊಟ್ಟು 2ನೇ ಇನ್ನಿಂಗ್ಸ್‌ ಆರಂಭಿ​ಸಿದ್ದ ಭಾರ​ತ ಗ್ರೀನ್‌ ತಂಡ, ಕೇವಲ 119 ರನ್‌ಗಳಿಗೆ ಆಲೌಟ್‌ ಆಯಿತು. ಪಂದ್ಯದ 4ನೇ ದಿನ​ವಾದ ಶನಿ​ವಾರ, 6 ವಿಕೆಟ್‌ಗೆ 345 ರನ್‌ಗಳಿಂದ ಮೊದಲ ಇನ್ನಿಂಗ್ಸ್‌ ಮುಂದು​ವ​ರಿ​ಸಿದ ಭಾರತ ರೆಡ್‌, 388 ರನ್‌ಗಳಿ​ಗೆ ಆಲೌಟ್‌ ಆಯಿತು.

ದುಲೀಪ್‌ ಟ್ರೋಫಿ ಫೈನಲ್: ಭಾರ​ತ ರೆಡ್‌ಗೆ ಇನ್ನಿಂಗ್ಸ್‌ ಮುನ್ನ​ಡೆ

ದ್ವಿತೀ​ಯ ಇನ್ನಿಂಗ್ಸ್‌ ಆರಂಭಿ​ಸಿದ ಭಾರತ ಗ್ರೀನ್‌, ಆರಂಭಿಕ ಆಘಾತ ಅನು​ಭ​ವಿ​ಸಿತು. ವೇಗಿ ಆವೇಶ್‌ ಖಾನ್‌ ಮಾರಕ ಬೌಲಿಂಗ್‌ ದಾಳಿ ಮೂಲಕ ಅಗ್ರ ಕ್ರಮಾಂಕ​ವನ್ನು ಪೆವಿ​ಲಿ​ಯನ್‌ಗಟ್ಟಿದರು. ವಿದ​ರ್ಭದ ಸ್ಪಿನ್ನರ್‌ ಆದಿತ್ಯ ಸರ್ವಾಟೆ ಮಧ್ಯಮ ಕ್ರಮಾಂಕವನ್ನು ಉರು​ಳಿ​ಸಿ​ದರು. ಸಿದ್ದೇಶ್‌ ಲಾಡ್‌ (42) ಹಾಗೂ ಅಕ್ಷತ್‌ ರೆಡ್ಡಿ (33) ಹೊರ​ತು​ಪ​ಡಿಸಿ ಉಳಿ​ದ್ಯಾವ ಬ್ಯಾಟ್ಸ್‌ಮನ್‌ ಸಹ ಹೋರಾಟ ಪ್ರದ​ರ್ಶಿ​ಸಲಿಲ್ಲ. ಆದಿತ್ಯ 5.5 ಓವ​ರಲ್ಲಿ 15 ರನ್‌ಗೆ 5 ವಿಕೆಟ್‌ ಕಬ​ಳಿ​ಸಿ​ದರು. ಆವೇಶ್‌ 3 ವಿಕೆಟ್‌ ಕಿತ್ತರು. ಕೇವಲ 39.5 ಓವರ್‌ಗಳಲ್ಲಿ ಭಾರತ ಗ್ರೀನ್‌ ಆಲೌಟ್‌ ಆಯಿತು.

ಪಂದ್ಯ​ದಲ್ಲಿ ಟಾಸ್‌ ಗೆದ್ದು ಮೊದ​ಲು ಬ್ಯಾಟ್‌ ಮಾಡಿದ್ದ ಭಾರತ ಗ್ರೀನ್‌, ಮೊದಲ ಇನ್ನಿಂಗ್ಸ್‌ನಲ್ಲಿ 231 ರನ್‌ ಗಳಿ​ಸಿತ್ತು. ಅಭಿ​ಮನ್ಯು ಈಶ್ವ​ರನ್‌ರ ಅಮೋಘ 153 ರನ್‌ಗಳ ಆಟದ ನೆರ​ವಿ​ನಿಂದ ಭಾರ​ತ ರೆಡ್‌, ಮೊದಲ ಇನ್ನಿಂಗ್ಸ್‌ನಲ್ಲಿ 388 ರನ್‌ ಗಳಿಸಿ ದೊಡ್ಡ ಮೊತ್ತದ ಮುನ್ನಡೆ ಪಡೆ​ದು​ಕೊಂಡಿತ್ತು.

ಸ್ಕೋರ್‌:

ಭಾರತ ಗ್ರೀನ್‌ 231 ಹಾಗೂ 119/10

(ಸಿ​ದ್ದೇಶ್‌ 42, ಅಕ್ಷತ್‌ 33, ಆದಿತ್ಯ 5-15, ಆವೇಶ್‌ 3-38),

ಭಾರತ ರೆಡ್‌ 388/10.

ಪಂದ್ಯ ಶ್ರೇಷ್ಠ: ಅಭಿ​ಮನ್ಯು ಈಶ್ವ​ರನ್‌
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?