ದುಲೀಪ್‌ ಟ್ರೋಫಿ ಫೈನಲ್‌: ಭಾರತ ರೆಡ್‌ ಮೇಲು​ಗೈ

Published : Sep 05, 2019, 10:31 AM IST
ದುಲೀಪ್‌ ಟ್ರೋಫಿ ಫೈನಲ್‌: ಭಾರತ ರೆಡ್‌ ಮೇಲು​ಗೈ

ಸಾರಾಂಶ

ಮಳೆ ಹಾಗೂ ಮಂದ ಬೆಳಕಿನ ಅಡಚಣೆಯ ಹೊರತಾಗಿಯು ಮಿಂಚಿನ ಪ್ರದರ್ಶನ ತೋರಿದ ಇಂಡಿಯಾ ರೆಡ್ ತಂಡದ ವೇಗಿ ಜಯದೇವ್ 4 ವಿಕೆಟ್ ಕಬಳಿಸುವ ಮೂಲಕ ಇಂಡಿಯಾ ಗ್ರೀನ್ ಎದುರು ಮೇಲುಗೈ ಸಾಧಿಸಲು ನೆರವಾದರು. ಈ ಕುರಿತಾದ ವರದಿ ಇಲ್ಲಿದೆ ನೊಡಿ..

ಬೆಂಗಳೂರು[ಸೆ.05]: ಜಯದೇವ್ ಉನಾದ್ಕತ್ ಅಮೋಘ ಬೌಲಿಂಗ್ ನೆರವಿನಿಂದ ದುಲೀಪ್‌ ಟ್ರೋಫಿ ಫೈನಲ್‌ ಮೊದಲ ದಿನದಾಟದಲ್ಲಿ ಭಾರತ ಗ್ರೀನ್‌ ವಿರುದ್ಧ ಭಾರತ ರೆಡ್‌ ಮೇಲುಗೈ ಸಾಧಿಸಿದೆ. 

ದುಲೀಪ್‌ ಟ್ರೋಫಿ ಫೈನಲ್‌: ಟಾಸ್ ಗೆದ್ದ ಇಂಡಿಯಾ ಗ್ರೀನ್ ಬ್ಯಾಟಿಂಗ್ ಆಯ್ಕೆ

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆ​ಯು​ತ್ತಿ​ರುವ ಪಂದ್ಯದ ಮೊದಲ ದಿನ​ದಾಟದಲ್ಲಿ ಕೇವಲ 49 ಓವರ್‌ ಆಟ ಮಾತ್ರ ಸಾಧ್ಯ​ವಾ​ಯಿತು. ಮಳೆ ಹಾಗೂ ಮಂದ ಬೆಳ​ಕು ಆಟಕ್ಕೆ ಅಡ್ಡಿ​ಯಾ​ಯಿತು. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿ​ಕೊಂಡ ಭಾರತ ಗ್ರೀನ್‌, ಮೊದಲ ದಿನ​ದಂತ್ಯಕ್ಕೆ 8 ವಿಕೆಟ್‌ ನಷ್ಟಕ್ಕೆ 147 ರನ್‌ ಗಳಿ​ಸಿದೆ. 

ಪಾಕ್ ಕ್ರಿಕೆಟ್ ತಂಡಕ್ಕೆ ನೂತನ ಕೋಚ್ ನೇಮಕ..

ವೇಗಿ ಜೈದೇವ್‌ ಉನಾ​ದ್ಕತ್‌ 4 ವಿಕೆಟ್‌ ಕಿತ್ತು ಮಿಂಚಿ​ದರು. ಸ್ಪಿನ್ನರ್‌ ಮಯಾಂಕ್‌ ಮರ್ಕಂಡೆ 32 ರನ್‌ ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದು​ಕೊಂಡಿ​ದ್ದಾರೆ.

ಸ್ಕೋರ್‌:

ಭಾರತ ಗ್ರೀನ್‌ 49 ಓವರಲ್ಲಿ 147/8

(ಮೊದಲ ದಿನದಂತ್ಯಕ್ಕೆ)
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?