ಕುಂಭಮೇಳದಲ್ಲಿ ಅಪರೂಪದ ಖಗೋಳ ವಿದ್ಯಮಾನ, ಮತ್ತೆ ಒಟ್ಟಾಗಿ ಕಾಣಿಸಲಿವೆ 7 ಗ್ರಹಗಳು!

Published : Feb 21, 2025, 04:32 AM ISTUpdated : Feb 21, 2025, 04:01 PM IST
ಕುಂಭಮೇಳದಲ್ಲಿ ಅಪರೂಪದ ಖಗೋಳ ವಿದ್ಯಮಾನ, ಮತ್ತೆ ಒಟ್ಟಾಗಿ ಕಾಣಿಸಲಿವೆ 7 ಗ್ರಹಗಳು!

ಸಾರಾಂಶ

ಪ್ರಯಾಗ್‌ರಾಜ್‌ನ ಮಹಾಕುಂಭಮೇಳವು ಶಿವರಾತ್ರಿಯಂದು ಮುಕ್ತಾಯವಾಗಲಿದ್ದು, ಅಂದು ಭಾರತದಿಂದ ಸೌರವ್ಯೂಹದ 7 ಗ್ರಹಗಳು ಗೋಚರಿಸಲಿವೆ. ಈ ಅಪರೂಪದ ಖಗೋಳ ವಿದ್ಯಮಾನವು ಆಧ್ಯಾತ್ಮಿಕ ಶಕ್ತಿಯನ್ನು ವೃದ್ಧಿಸುತ್ತದೆ ಎಂಬ ನಂಬಿಕೆಯಿದೆ.

ನವದೆಹಲಿ (ಫೆ.21): ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ, ಜಗತ್ತಿನ ಅತಿ ದೊಡ್ಡ ಧಾರ್ಮಿಕ ಉತ್ಸವವೆಂದೇ ಖ್ಯಾತವಾಗಿರುವ ಮಹಾಕುಂಭ ಮೇಳ ಫೆ.26ರ ಶಿವರಾತ್ರಿಯಂದು ಮುಕ್ತಾಯವಾಗಲಿದ್ದು, ಆ ಸಂದರ್ಭದಲ್ಲಿ ಆಕಾಶದಲ್ಲಿ ಅಪರೂಪದ ಖಗೋಳ ವಿದ್ಯಮಾನವೊಂದು ಘಟಿಸಲಿದೆ. ಅಂದು ಭಾರತದಿಂದ ಸೌರವ್ಯೂಹದ ಎಲ್ಲಾ 7 ಗ್ರಹಗಳು ಗೋಚರಿಸಲಿವೆ. ಈ ಹಿನ್ನೆಲೆಯಲ್ಲಿ ಮಹಾಕುಂಭಕ್ಕೆ ವೈಜ್ಞಾನಿಕತೆಯೂ ಜೋಡಿಸಿಕೊಂಡಿದ್ದು, ಜನರಲ್ಲಿ ಆಧ್ಯಾತ್ಮಿಕ ಶಕ್ತಿ ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.

ಈ ವರ್ಷ ಜನವರಿಯಲ್ಲಿ ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್‌ ಗ್ರಹಗಳ ಗೋಚರತೆ ಆರಂಭವಾಯಿತು. ಫೆಬ್ರವರಿಯಲ್ಲಿ ಇವುಗಳ ಸಾಲಿಗೆ ಬುಧಗ್ರಹವೂ ಸೇರಲಿದ್ದು, ಫೆ.28ರಂದು ಎಲ್ಲಾ 7 ಗ್ರಹಗಳು ಸೂರ್ಯನ ಒಂದು ಬದಿಯಲ್ಲಿ ಜೋಡಿಸಲ್ಪಡುತ್ತವೆ.

ಇದನ್ನೂ ಓದಿ: 'ಮಹಾಕುಂಭ ಅಲ್ಲ, ಮೃತ್ಯುಕುಂಭ..' ಮಮತಾ ಬ್ಯಾನರ್ಜಿ ಹೇಳಿಕೆ ಬೆಂಬಲಿಸಿದ ಅವಿಮುಕ್ತೇಶ್ವರಾನಂದ ಶ್ರೀ

ಅಂದು ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿಗಳನ್ನು ಬರಿಗಣ್ಣಿನಿಂದ ನೋಡಬಹುದು. ಆದರೆ ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳು ಮಂಕಾಗಿರುವುದರಿಂದ ಬೈನಾಕ್ಯುಲರ್ ಅಗತ್ಯ. ಸೂರ್ಯಾಸ್ತದ ನಂತರ ಅಥವಾ ಸೂರ್ಯೋದಯಕ್ಕೆ ಮೊದಲು ವೀಕ್ಷಣೆಗೆ ಉತ್ತಮ ಸಮಯ. ಖಗೋಳಶಾಸ್ತ್ರಜ್ಞರ ಪ್ರಕಾರ, 2025ರ ಆಗಸ್ಟ್ ಮಧ್ಯಭಾಗದಲ್ಲಿ ಹಗಲಿನ ವೇಳೆ ಇದೇ ರೀತಿ ದೃಶ್ಯವನ್ನು ನೋಡಲು ಮತ್ತೊಂದು ಅವಕಾಶ ಸಿಗಲಿದೆ. ಆಗ ಆಕಾಶದಲ್ಲಿ 6 ಗ್ರಹಗಳು ಗೋಚರಿಸಲಿವೆ. 

ಇದನ್ನೂ ಓದಿ: ಸಂಗಮ ನೀರು ಕಲುಷಿತವಲ್ಲ, ಆಚಮನಕ್ಕೆ ಯೋಗ್ಯ : 'ಮಲದ ಬ್ಯಾಕ್ಟೀರಿಯಾ' ಆರೋಪ ತಳ್ಳಿಹಾಕಿದ ಸಿಎಂ ಯೋಗಿ ಆದಿತ್ಯನಾಥ್‌ 

ಕುಂಭ: ಯುವತಿಯರ ಸ್ನಾನ ದೃಶ್ಯ ಸೆರೆ ಹಿಡಿದು ಮಾರಿದರೆ ಕೇಸ್‌

ಲಖನೌ: ಮಹಾಕುಂಭದಲ್ಲಿ ಮಹಿಳೆಯರು ಸ್ನಾನ ಮಾಡುತ್ತಿರುವ ವೀಡಿಯೊಗಳನ್ನು ಖರೀದಿಸುವವರನ್ನು ಮತ್ತು ಅಂತಹ ವೀಡಿಯೊಗಳನ್ನು ಮಾರಾಟ ಮಾಡುವವರನ್ನು ಬಂಧಿಸಲಾಗುವುದು ಎಂದು ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಈ ಕುರಿತು ಮಾಹಿತಿ ನೀಡಿದ ಡಿಐಜಿ ವೈಭವ್ ಕೃಷ್ಣ ‘ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳು ಕುಂಭದಲ್ಲಿ ಸ್ನಾನ ಮಾಡುವ ಯುವತಿಯರ ಖಾಸಗಿ ಚಿತ್ರಗಳನ್ನು ಸೆರೆ ಹಿಡಿದು ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿವೆ. ಅವುಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ. ಇದುವರೆಗೆ ಕ್ರಮಕ್ಕಾಗಿ 103 ಖಾತೆಗಳನ್ನು ಗುರುತಿಸಲಾಗಿದೆ. ಮಹಿಳೆಯರ ಖಾಸಗಿತನ ಮತ್ತು ಗೌರವಕ್ಕೆ ಧಕ್ಕೆ ತರುವುದು ಕ್ರಿಮಿನಲ್ ಅಪರಾಧ’ ಎಂದು ತಿಳಿಸಿದ್ದಾರೆ.

 

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ