ಮೈಸೂರಿನ ವುಡ್ ಲ್ಯಾಂಡ್ಸ್ ಚಿತ್ರಮಂದಿರಕ್ಕೆ ಭೇಟಿ ನೀಡಿದ ಲಂಕೆ ಚಿತ್ರತಂಡ: ಯೋಗಿ ಕಂಡು ಪ್ರೇಕ್ಷಕರು ದಿಲ್ ಖುಷ್

By Kannadaprabha NewsFirst Published Sep 13, 2021, 2:39 PM IST
Highlights

ಲೂಸ್ ಮಾದ ಯೋಗಿ ಅಭಿನಯದ 'ಲಂಕೆ' ಸಿನಿಮಾ ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಸಿಗುತ್ತಿರುವ ಅಪೂರ್ವ ಬೆಂಬಲ ಕಂಡು ಚಿತ್ರತಂಡ ಕೂಡ ಥ್ರಿಲ್ ಆಗಿದೆ. ಇದೇ ಖುಷಿಯಲ್ಲಿ ಮೈಸೂರಿನ ಪ್ರಖ್ಯಾತ ಚಿತ್ರಮಂದಿರಕ್ಕೆ ಲಂಕೆ ತಂಡ ವಿಸಿಟ್ ನೀಡಿದೆ. 
 

ಮೈಸೂರಿನ ವುಡ್ ಲ್ಯಾಂಡ್ಸ್  ಚಿತ್ರಮಂದಿರಕ್ಕೆ ಲೂಸ್ ಮಾದ ಯೋಗಿ, ನಿರ್ದೇಶಕ ರಾಮ್ ಪ್ರಸಾದ್, ಕೃಷಿ ತಾಪಂಡ ಭೇಟಿ ನೀಡಿದ್ದಾರೆ. ಚಿತ್ರತಂಡವನ್ನು  ಕಂಡು ಪ್ರೇಕ್ಷಕರು ಕೂಡ ಸಂತಸಗೊಂಡಿದ್ದು ಶಿಳ್ಳೆ ಹಾಕಿ ಸಂಭ್ರಮಿಸಿದ್ದಾರೆ. ಯೋಗಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಗೊಂಡಿದ್ದಾರೆ. ಪ್ರೇಕ್ಷಕರು ತೋರಿದ‌ ಪ್ರೀತಿಗೆ 'ಲಂಕೆ' ಚಿತ್ರತಂಡ ದಿಲ್ ಖುಷ್ ಆಗಿದೆ‌.
ಈ ಬಗ್ಗೆ ಸಂತಸ ಹಂಚಿಕೊಂಡಿರುವ ನಿರ್ದೇಶಕ ರಾಮ್ ಪ್ರಸಾದ್ ಮೈಸೂರಿನ ವುಡ್ ಲ್ಯಾಂಡ್ಸ್ ಚಿತ್ರಮಂದಿರದಲ್ಲಿ ಪ್ರೇಕ್ಷಕರು ತೋರಿದ ಪ್ರೀತಿ ಬಹಳ ದೊಡ್ಡದು. ಯೋಗಿ ಅವರನ್ನು ಚಿತ್ರದಲ್ಲಿ ತೋರಿಸಿದ ರೀತಿಗೆ ಯೋಗಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಸಿನಿಮಾ ಕಥೆ ಬಗ್ಗೆಯೂ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಚಿತ್ರದ ಬಗ್ಗೆ ಕೇಳಿ ಬರುತ್ತಿರುವ ಮಾತುಗಳು ನಮ್ಮ ಸಂತಸವನ್ನು ಇನ್ನಷ್ಟು ಹೆಚ್ಚು ಮಾಡಿದೆ.  ಮುಂದಿನ ದಿನಗಳಲ್ಲಿ ಬೇರೆ ಬೇರೆ ಜಿಲ್ಲೆಗಳಿಗೂ ಭೇಟಿ ನೀಡುವ ಪ್ಲ್ಯಾನ್ ಕೂಡ ಮಾಡಿಕೊಂಡಿದ್ದೇವೆ ಎಂದಿದ್ದಾರೆ‌.

ಸತ್ಯ ಘಟನೆ ಆಧಾರಿತ ಈ ಚಿತ್ರದಲ್ಲಿ ಲೈಂಗಿಕ‌ ಕಾರ್ಯಕರ್ತೆಯರ ಸಮುದಾಯದಿಂದ ಬಂದ ಹುಡುಗನ ಸುತ್ತ ಕಥೆ‌ ಹೆಣೆಯಲಾಗಿದೆ. ಮಾಸ್ ಆಕ್ಷನ್ ಕಥಾಹಂದರ ಚಿತ್ರದಲ್ಲಿದ್ದು ಯೋಗಿ ಮಾಸ್ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಬಹು ತಾರಾಗಣದ ಈ ಚಿತ್ರದಲ್ಲಿ ಸಂಚಾರಿ ವಿಜಯ್, ಶರತ್ ಲೋಹಿತಾಶ್ವ, ಸುಚೇಂದ್ರ ಪ್ರಸಾದ್, ಶೋಬರಾಜ್, ಪ್ರಶಾಂತ್ ಸಿದ್ದಿ, ಡ್ಯಾನಿ ಕುಟ್ಟಪ್ಪ, ಗಾಯಿತ್ರಿ ಜೈರಾಮ್  ಅಭಿನಯಿಸಿದ್ದು. ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಎಸ್ಟರ್ ನರೋನಾ ನಾಯಕಿಯರಾಗಿ ಮಿಂಚಿದ್ದಾರೆ.

ಒಳ್ಳೆಯ ಸಿನಿಮಾವನ್ನು ಕನ್ನಡಿಗರು ಕೈ ಬಿಡಲ್ಲ: ರಾಮಪ್ರಸಾದ್‌

ದಿ ಗ್ರೇಟ್ ಎಂಟಟೈನ್ಮೆಂಟ್ ಬ್ಯಾನರ್ ನಲ್ಲಿ ಅದ್ದೂರಿಯಾಗಿ ನಿರ್ಮಾಣವಾದ ಈ ಚಿತ್ರಕ್ಕೆ ಪಟೇಲ್ ಶ್ರೀನಿವಾಸ್ ಹಾಗೂ ಸುರೇಖಾ ರಾಮ್ ಪ್ರಸಾದ್ ಬಂಡವಾಳ ಹೂಡಿದ್ದಾರೆ.
 

click me!