ಸೋಷಿಯಲ್ ಮೀಡಿಯಾದಲ್ಲಿ #poetryreadingchallenge ಟ್ರೆಂಡ್ ಆಗ್ತಾ ಇದೆ. ಕ್ರಿಕೆಟಿಗ ಅನಿಲ್ ಕುಂಬ್ಳೆ ಈ ಚಾಲೆಂಜನ್ನು ಸ್ನೇಹಿತರಾದ ಅನಿಲ್ ಕುಂಬ್ಳೆ, ಪುನೀತ್ ರಾಜ್ಕುಮಾರ್ ಹಾಗೂ ಕಿಚ್ಚ ಸುದೀಪ್ಗೆ ನೀಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಒಂದೊಂದು ಅಭಿಯಾನ ಟ್ರೆಂಡ್ ಆಗ್ತಾ ಇರುತ್ತದೆ. ನವೆಂಬರ್ ತಿಂಗಳು ಕನ್ನಡ ರಾಜ್ಯೋತ್ಸವದ ಹಿನ್ನಲೆಯಲ್ಲಿ ಈಗ #poetryreadingchallenge ಎಲ್ಲಾ ಕಡೆ ಟ್ರೆಂಡ್ ಆಗ್ತಾಯಿದೆ. ಒಬ್ಬರು ಅವರಿಷ್ಟದ ಕವಿಯ ಕವನಗಳನ್ನು ವಾಚಿಸಿ ಅದನ್ನು ಇನ್ನೊಬ್ಬರಿಗೆ ಕೋ ಕೊಡ್ತಾ ಹೋಗುವುದೇ ಇದರ ವಿಶೇಷ.
ಕೋ ಕೊಟ್ಟವರು ಯಾವುದಾದರೊಂದು ಕನ್ನಡ ಪದ್ಯವನ್ನು ಹೇಳಬೇಕು. ಗೋಲ್ಡನ್ ಸ್ಟಾರ್ ಗಣೇಶ್ ಕ್ರಿಕೆಟಿಗ ಅನಿಲ್ ಕುಂಬ್ಳೆಗೆ ಈ ಚಾಲೆಂಜನ್ನು ಕೊಟ್ಟಿದ್ದಾರೆ. ಚಾಲೆಂಜ್ ಸ್ವೀಕರಿಸಿದ ಕುಂಬ್ಳೆ ರಾಷ್ಟ್ರಕವಿ ಕುವೆಂಪು ಅವರ 'ಎಲ್ಲಾದರೂ ಇರು. ಎಂತಾದರೂ ಇರು' ಕವನವನ್ನು ವಾಚಿಸಿದ್ದಾರೆ.
. Hope you all like it. Passing this challenge to 🙏🏽 pic.twitter.com/N7JsMFKAec
— Anil Kumble (@anilkumble1074)ಇದನ್ನು ಮುಂದುವರೆಸಲು ಕಿಚ್ಚ ಸುದೀಪ್, ಪುನೀತ್ ರಾಜ್ಕುಮಾರ್ ಹಾಗೂ ವಿಜಯ್ ಪ್ರಕಾಶ್ಗೆ ಕೋ ಕೊಟ್ಟಿದ್ದಾರೆ. ವಿಜಯ್ ಪ್ರಕಾಶ್ ಡಿವಿಜಿಯವರ ಮಂಕುತಿಮ್ಮನ ಕಗ್ಗವನ್ನು ಹಾಡಿನ ಮೂಲಕ ಹೇಳಿದ್ದಾರೆ.
ಧನ್ಯವಾದಗಳು ಆತ್ಮೀಯ , ಡಿವಿಜಿಯವರ ಕಗ್ಗವನ್ನು ಬಹಳ ಸೊಗಸಾಗಿ ಹಾಡಿದ್ದೀರಿ! https://t.co/GhBXOmJnXq
— Anil Kumble (@anilkumble1074)Accepted sir...
Soon... 🤗 https://t.co/B468gRxgid
ಗೋಲ್ಡರ್ ಸ್ಟಾರ್ ಗಣೇಶ್ ಬೇಂದ್ರೆಯವರ 'ನೀ ಹಿಂಗ ನೋಡಬ್ಯಾಡ ನಿನ್ನ' ಕವನವನ್ನು ವಾಚಿಸಿದ್ದಾರೆ.
,This is my favourite poem,n pass this challenge to sir sir,and Mantralaya Sri Sri subudhendra teertha Swamji 🙏 pic.twitter.com/c3ont6ErqY
— Ganesh (@Official_Ganesh)