
ದಿ ಕಲರ್ ಆಫ್ ಟೊಮೆಟೋ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಹಿರಿಯ ಲೇಖಕ ಕೋಟಿಗಾನಹಳ್ಳಿ ರಾಮಯ್ಯ, ‘ಹಿಂಸೆಯ ವ್ಯಾಖ್ಯಾನ ಬದಲಾಗ್ತಿದೆ, ಅದಕ್ಕೆ ಹೊಸ ಡೈಮೆನ್ಶನ್ ಬಂದಿದೆ. ದಿ ಕಲರ್ ಆಫ್ ಟೊಮೆಟೊ ಈಗಿರುವ ಸಿನಿಮಾ ವ್ಯಾಖ್ಯಾನ, ವ್ಯಾಕರಣ ಬದಲಿಸುವ, ಕಿಮ್ ಕಿ ಡುಕ್ ಮಾದರಿಯ ಚಿತ್ರ’ ಎಂದರು.
ನಿರ್ದೇಶಕ ತಾಯ್ ಲೋಕೇಶ್ ಮಾತನಾಡಿ, ‘ಏಷ್ಯಾದ ಅತಿದೊಡ್ಡ ಟೊಮೆಟೊ ಮಾರುಕಟ್ಟೆ ಕೋಲಾರದಲ್ಲಿದೆ. ಇಲ್ಲಿನ ಆರ್ಥಿಕತೆ ನೆಲದ ಅಧಃಪತನಕ್ಕೆ ಸಂಕೇತದಂತಿದೆ. ಜೊತೆಗೆ ಏಳೆಂಟು ಗುಡ್ಡಗಾಡು ಹಳ್ಳಿಗಳು, ಅಲ್ಲಿನ ಜನರು, ಹಿಂಸೆ, ಕೌರ್ಯದ ಚಿತ್ರಣ ಇದರಲ್ಲಿದೆ. ಮೂರು ಕತೆಗಳು ಒಟ್ಟು ಸೇರಿ ಒಂದು ಚಿತ್ರವಾಗಿದೆ’ ಎಂದರು.
ಮುಖ್ಯ ಪಾತ್ರದಲ್ಲಿರುವ ಪ್ರತಾಪ್ ನಾರಾಯಣ್, ‘ನನ್ನ ಹಿಂದಿನ ಚಿತ್ರ ಬೆಂಕಿ ಪಟ್ಣದಲ್ಲಿ ಮಿಸ್ ಆದ ಅಂಶಗಳು ಈ ಪಾತ್ರದಲ್ಲಿ ಸಿಗುತ್ತವೆ’ ಎಂದರು. ನಿರ್ಮಾಪಕರಾದ ಸ್ವಾತಿ ಕುಮಾರ್, ಕೋಲಾರದ ಕಲಾವಿದರು, ತಂತ್ರಜ್ಞರು ಉಪಸ್ಥಿತರಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.