Mahanati ವೇದಿಕೆಯಲ್ಲಿ ಭಾವುಕ ಕ್ಷಣ: ತರುಣ್​-ಸೋನಲ್ ವಿವಾಹ ವಾರ್ಷಿಕೋತ್ಸವದ ಸರ್​ಪ್ರೈಸ್​

Published : Aug 06, 2025, 06:25 PM IST
Tharun Sudhir and Sonal Monteiro

ಸಾರಾಂಶ

ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ವಿವಾಹವಾಗಿ ಒಂದು ವರ್ಷವಾಗಿದ್ದು, ಇವರಿಗೆ ಮಹಾನಟಿ ವೇದಿಕೆಯಲ್ಲಿ ಸರ್​ಪ್ರೈಸ್​ ನೀಡಲಾಗಿದೆ. ಅದರ ವಿಡಿಯೋ ಇಲ್ಲಿದೆ... 

ನಿರ್ದೇಶಕ ತರುಣ್ ಸುಧೀರ್ (Tharun Sudhir) ಮತ್ತು ನಟಿ ಸೋನಲ್ ಮೊಂಥೆರೋ ಅವರ ಅದ್ಧೂರಿ ವಿವಾಹ 2024 ಆಗಸ್ಟ್​ 11ರಂದು ನಡೆದಿದೆ. ಇನ್ನು ಕೆಲವೇ ದಿನಗಳಲ್ಲಿ ಜೋಡಿ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ತಿದೆ. ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಈ ಜೋಡಿ ತಮ್ಮ ನಾಲ್ಕು ವರ್ಷದ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಿದ್ದಾರೆ. ಹಿಂದೂ ಸಂಪ್ರದಾಯದಂತೆ ಮೊದಲಿಗೆ ಮದುವೆ ನಡೆದಿತ್ತು. ಸೋನಲ್​ ಅವರ ಹುಟ್ಟುಹಬ್ಬದಂದೇ ಮದುವೆಯಾಗಿದ್ದು ವಿಶೇಷವೇ. ಕೊನೆಗೆ ಜೋಡಿ ಮಂಗಳೂರಿನಲ್ಲಿ ಕ್ರೈಸ್ತ ಸಮುದಾಯದಂತೆ ಮದುವೆ ಮಾಡಿಕೊಂಡಿತು. ಇದಕ್ಕೆ ಕಾರಣ ಸೋನಲ್​ ಅವರು ಕ್ರೈಸ್ತ ಸಮುದಾಯಕ್ಕೆ ಸೇರಿದವರು. ಈ ದಂಪತಿ ತಮ್ಮ ವೈವಾಹಿಕ ಜೀವನವನ್ನು ಸಂತಸದಿಂದ ಕಳೆಯುತ್ತಿದ್ದಾರೆ.

ಜೀ ಕನ್ನಡದ ಮಹಾನಟಿ ಷೋಗೆ ತರುಣ್​ ಸುಧೀರ್​ ಅವರು ತೀರ್ಪುಗಾರರಾಗಿದ್ದಾರೆ. ಇದೇ ಕಾರಣಕ್ಕೆ ವಾಹಿನಿಯ ಕಡೆಯಿಂದ ಇವರ ವಿವಾಹ ವಾರ್ಷಿಕೋತ್ಸವವನ್ನು ವೇದಿಕೆ ಮೇಲೆ ಅದ್ಧೂರಿಯಾಗಿ ಆಚರಿಸಲಾಗಿದೆ. ಇದೇ ವೇಳೆ ಸಂಗೀತದ ಆಲ್ಬಂ ನೀಡುವ ಮೂಲಕ ತರುಣ್​ಗೆ ಸರ್​ಪ್ರೈಸ್​ ನೀಡಿದ್ದಾರೆ ಸೋನಲ್​. ಇದೇ ವೇಳೆ ಸೋನಲ್​ ಅವರಿಗೆ ಸೀರೆಯ ಉಡುಗೊರೆಯನ್ನು ನೀಡಿದ್ದಾರೆ. ಈ ಕ್ಷಣದಲ್ಲಿ ಪರಸ್ಪರ ಭಾವುಕರಾಗಿದೆ ಜೋಡಿ. ಇವರ ಈ ಪ್ರೀತಿಗೆ ಸಂಪೂರ್ಣ ವೇದಿಕೆ ಫಿದಾ ಆಗಿದೆ.

ಈ ಹಿಂದೆ ಸೋನಲ್​ (Sonal Monteiro) ಅವರು ತಮ್ಮ ಮದುವೆಯ ಬಗ್ಗೆ ಅನುಭವ ಹಂಚಿಕೊಂಡಿದ್ದರು. ಮದುವೆಯಾದ ಮೇಲೆ ಹೇಗಿರುತ್ತೋ ಎನ್ನುವ ಭಯವಿತ್ತು. ಆದರೆ ಅದೆಲ್ಲಾ ನಮ್ಮ ಮೈಂಡ್​ಸೆಟ್​ನಲ್ಲಿ ಇರುತ್ತೆ ಅಷ್ಟೇ. ನನ್ನ ವಿಚಾರದಲ್ಲಂತೂ ತುಂಬಾ ಲಕ್ಕಿ. ನನಗೆ ಮದುವೆ ಆಗಿದೆ ಎಂದೇ ಅನ್ನಿಸ್ತಿಲ್ಲ. ಮೊದಲು ಲೈಫ್​ ಹೇಗಿತ್ತೋ ಈಗಲೂ ಹಾಗೆಯೇ ಇದೆ ಎಂದಿದ್ದರು. ನಾವು ಚೆನ್ನಾಗಿ ಕೆಲಸ ಮಾಡಿಕೊಂಡು ಹೋಗಬೇಕು ಅಷ್ಟೇ. ಹಾಗಿದ್ರೆ ಜನ ನಮ್ಮ ಕೈಹಿಡಿಯುತ್ತಾರೆ. ಪತಿ ತರುಣ್​ ಅವರೂ ಸಿನಿಮಾದವರೇ ಆಗಿರುವುದರಿಂದ ತುಂಬಾ ಸಪೋರ್ಟಿವ್​ ಆಗಿದ್ದಾರೆ. ಈ ಚಿತ್ರಕ್ಕೆ ನನಗಿಂತ ಹೆಚ್ಚಿಗೆ ಅವರೇ ಪ್ರೊಮೋಷನ್​ ಮಾಡುತ್ತಿದ್ದಾರೆ. ನಿಜ ಹೇಳಬೇಕು ಎಂದ್ರೆ ಅವರು ನಿಜ ಜೀವನದಲ್ಲಿ ಡೈರೆಕ್ಟರ್​ ಆಗಿದ್ರೂ, ಫ್ಯಾಮಿಲಿ ವಿಷ್ಯಕ್ಕೆ ಬಂದ್ರೆ ನಾನೇ ಅವರಿಗೆ ಡೈರೆಕ್ಟರ್​ ಎಂದು ತಮಾಷೆ ಮಾಡಿದ್ದರು.

ಇವರಿಬ್ಬರ ನಡುವೆ ಪ್ರೀತಿಗೆ ನಟ ದರ್ಶನ್​ ಕಾರಣ ಎನ್ನುವುದೂ ಈ ಹಿಂದೆ ರಿವೀಲ್​ ಆಗಿತ್ತು. ರಾಬರ್ಟ್‌ ಸಿನಿಮಾ ಸೆಟ್‌ನಲ್ಲಿಯೇ ದರ್ಶನ್‌ ಹಲವು ಬಾರಿ ತರುಣ್‌ ಸುಧೀರ್‌ಗೆ ಮದುವೆ ಮಾಡಿಸಬೇಕು. ಒಳ್ಳೆಯ ಹುಡುಗಿ ಇದ್ದರೆ ಹೇಳಿ ಎನ್ನುತ್ತಿದ್ದಂತೆ. ಇದೇ ವೇಳೆ ಶೂಟಿಂಗ್‌ ಸೆಟ್‌ನಲ್ಲಿದ್ದ ತರುಣ್‌-ಸೋನಲ್‌ ಇಬ್ಬರನ್ನೂ ಇದೇ ವಿಚಾರವಾಗಿ ರೇಗಿಸುತ್ತಿದ್ದರು. ಕೊನೆಗೆ ಇಬ್ಬರ ನಡುವೆ ಪ್ರೀತಿ ಹುಟ್ಟಲು ಇದೇ ಅಂಶ ಕಾರಣವಾಗಿದೆ ಎನ್ನಲಾಗಿದೆ. ಇವರ ಮದುವೆಯ ದಿನ ದರ್ಶನ್​ ಜೈಲಿನಲ್ಲಿ ಇದ್ದರು. ಅವರು ಜೈಲಿನಿಂದ ಹೊರಕ್ಕೆ ಬಂದ ಮೇಲೆ ಜೋಡಿ ಅವರಿಂದ ಆಶೀರ್ವಾದ ಪಡೆದು ಬಂದಿತ್ತು.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ