ತೆರೆಯ ಮೇಲೆ ಕೊಡೆಮುರುಗ... ಭರಪೂರ ಮನರಂಜನೆ ನಿಮ್ಮದು!

Published : Apr 06, 2021, 03:57 PM ISTUpdated : Apr 06, 2021, 04:02 PM IST
ತೆರೆಯ ಮೇಲೆ ಕೊಡೆಮುರುಗ... ಭರಪೂರ ಮನರಂಜನೆ ನಿಮ್ಮದು!

ಸಾರಾಂಶ

ಈ ವಾರ ತೆರೆ ಮೇಲೆ ‘ಕೊಡೆಮುರುಗ’ - ಸುಬ್ರಹಣ್ಯ ಪ್ರಸಾದ್ ನಿರ್ದೇಶನದ ಸಿನಿಮಾ/ ಶೂಟಿಂಗ್ ಹೊರಡುವ ಮೊದಲೇ ಸಿನಿಮಾದ ಇಂಟ್ರಸ್ಟಿಂಗ್ ಟ್ರೇಲರ್ ರಿಲೀಸ್ ಮಾಡಿ ಗಮನ ಸೆಳೆದ ಸಿನಿಮಾ/ ಈಗಾಗಲೇ ಕಲರ್​ಫುಲ್ ಸ್ಯಾಂಪಲ್​​ಗಳ ಮೂಲಕ ಸಿನಿರಸಿಕರ ಮನಗೆದ್ದಿರುವ ಈ ಚಿತ್ರ

ಬೆಂಗಳೂರು(ಏ.  06) ಶೂಟಿಂಗ್ ಹೊರಡುವ ಮೊದಲೇ ಸಿನಿಮಾದ ಇಂಟ್ರಸ್ಟಿಂಗ್ ಟ್ರೇಲರ್ ರಿಲೀಸ್ ಮಾಡಿ ಗಮನ ಸೆಳೆದ  'ಕೊಡೆಮುರುಗ ಈ ವಾರ ತೆರೆಗೆ ಬರಲಿದೆ.  ಸುಬ್ರಮಣ್ಯ ಪ್ರಸಾದ್ ನಿರ್ದೇಶನದ 'ಕೊಡೆಮುರುಗ' ಎಂಬ  ಏಪ್ರಿಲ್ 9ರಂದು ಬಿಡುಗಡೆಯಾಗಲಿದೆ.  ರವಿಕುಮಾರ್, ಕೆ ಆರ್ ಕೆ ಬ್ಯಾನರ್ ನಡಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಈ ಚಿತ್ರದಲ್ಲಿ ಸುಬ್ರಮಣ್ಯ ಪ್ರಸಾದ್ ಮತ್ತು ಮುನಿಕೃಷ್ಣ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪಲ್ಲವಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾ ಟ್ರೈಲರ್ ಬಿಡುಗಡೆ ಮಾಡಲಾಗಿತ್ತು. ಈ ಟ್ರೈಲರ್ ಗೆ ಸಿನಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳು ದೊರೆತಿದ್ದವು. ರಾಕ್ ಲೈನ್ ಸುಧಾಕರ್, ಸ್ವಾತಿ ಗುರುದತ್, ಕುರಿ ಪ್ರತಾಪ್, ತುಮಕೂರು ಮೋಹನ್ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಯುವರತ್ನ ಹೇಗಿದೆ? ಜೋಗಿ ವಿಮರ್ಶೆ

ಈಗಾಗಲೇ ಕಲರ್​ಫುಲ್ ಸ್ಯಾಂಪಲ್​​ಗಳ ಮೂಲಕ ಸಿನಿರಸಿಕರ ಮನಗೆದ್ದಿರುವ ಈ ಚಿತ್ರ ನಿರೀಕ್ಷೆ ಹುಟ್ಟುಹಾಕಿದೆ. ಏಪ್ರಿಲ್ 9ಕ್ಕೆ ‘ಕೊಡೆಮುರುಗ’ನ ದರ್ಶನ ಚಿತ್ರಮಂದಿರದಲ್ಲಿ ಆಗೋದು ಫಿಕ್ಸ್ ಆಗಿದೆ.  ಇದೊಂದು ಕಾಮಿಡಿ ಎಂಟಟೈನ್ಮೆಂಟ್ ಸಿನಿಮಾವಾಗಿದ್ದು, ಸಾಕಷ್ಟು ಇಂಟ್ರಸ್ಟಿಂಗ್​ ಫ್ಯಾಕ್ಟರ್​​ಗಳನ್ನು ಈ ಸಿನಿಮಾ ಒಳಗೊಂಡಿದೆ. ನಿರ್ದೇಶಕ ಸುಬ್ರಮಣ್ಯ ಪ್ರಸಾದ್​​ಗಿದು ಮೊದಲ ಸಿನಿಮಾ. ಹಲವು ಧಾರಾವಾಹಿಗಳಲ್ಲಿ ದುಡಿದ ಅನುಭವವುಳ್ಳ ಇವರು ಮೊದಲ ಬಾರಿ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಎಲ್ಲಾ ಜವಾಬ್ದಾರಿಯನ್ನು ಹೊತ್ತಿರುವ ಇವರು ನಟನೆ ಕೂಡ ಮಾಡಿದ್ದಾರೆ.

ಈಗಾಗಲೇ ಸಖತ್ ಬಝ್ ಕ್ರಿಯೇಟ್​​ ಮಾಡಿರುವ ಈ ಸಿನಿಮಾ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಲಿದೆ ಎನ್ನುತ್ತೆ ಚಿತ್ರತಂಡ. ದಿವಂಗತ ನಟ ರಾಕ್​ಲೈನ್ ಸುಧಾಕರ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಸ್ವಾತಿ ಗುರುದತ್, ಕುರಿ ಪ್ರತಾಪ್, ತುಮಕೂರು ಮೋಹನ್ ಸೇರಿದಂತೆ ಹಲವು ಕಲಾವಿದರು ತಾರಾಬಳಗದಲ್ಲಿದ್ದಾರೆ. ಕೆ.ಆರ್.ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು ಕೆ.ರವಿಕುಮಾರ್ ಹಾಗೂ ಅಶೋಕ್ ಶಿರಾಲಿ ಈ ಸಿನಿಮಾ ನಿರ್ಮಾಪಕರು. ಎಂ.ಎಸ್. ತ್ಯಾಗರಾಜ ಸಂಗೀತ ಸಂಯೋಜನೆ, ರುದ್ರಮುನಿ ಬೆಳಗೆರೆ ಛಾಯಾಗ್ರಹಣ ಈ ಕಾಮಿಡಿ ಎಂಟಟೈನ್ಮೆಂಟ್ ಸಿನಿಮಾಕ್ಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?