
‘ನಮ್ಮ ‘ಸಂಘರ್ಷ’ ಧಾರಾವಾಹಿಯ ಮದುವೆ ದೃಶ್ಯಾವಳಿಗಳನ್ನು ಶ್ರೀರಂಗಪಟ್ಟಣ ಸಮೀಪದ ಗೋಸಾಯಿ ಘಾಟ್ ನದೀ ತೀರದಲ್ಲಿ ಪ್ರಕೃತಿಗೆ ಹತ್ತಿರವಾಗಿರುವಂತೆ ಚಿತ್ರೀಕರಿಸಲಾಗಿದೆ’ ಎಂದು ಸಂಘರ್ಷ ಸೀರಿಯಲ್ನ ನಿರ್ಮಾಪಕಿ ಶ್ರುತಿ ನಾಯ್ಡು ಹೇಳುತ್ತಾರೆ.
‘ಮದುವೆ ಮಂಟಪವನ್ನು ಸಾಂಪ್ರದಾಯಿಕ ಮಾದರಿಯಲ್ಲಿ ಅದ್ದೂರಿಯಾಗಿ ವಿನ್ಯಾಸ ಮಾಡಲಾಗಿದೆ. ತಾವರೆ, ಆ ಪ್ರಕೃತಿಗೆ ಹೊಂದುವ ಬಣ್ಣದ ಹೂಗಳಿಂದ ಅಲಂಕರಿಸಲಾಗಿದ್ದು, ಇಡೀ ಪರಿಸರ ಕಲರ್, ಎಮೋಶನ್, ಎನ್ಜಾಯ್ಮೆಂಟ್ಗಳ ಒಟ್ಟು ಮೊತ್ತದ ಹಾಗಿದೆ. ಮದುಮಕ್ಕಳು ಹೂವಿಂದ ಅಲಂಕರಿಸಲಾದ ತೆಪ್ಪದಲ್ಲಿ ಬರುವುದು ಮತ್ತೊಂದು ವಿಶೇಷ. 5 ದಿನಗಳ ಕಾಲ ಮದುವೆಯ ಚಿತ್ರೀಕರಣ ನಡೆದಿದೆ. ಮುಂದಿನ ವಾರದಿಂದ 10 ದಿನಗಳ ಕಾಲ ಈ ಎಪಿಸೋಡ್ ಪ್ರಸಾರವಾಗಲಿದೆ’ ಎಂದು ಅವರು ತಿಳಿಸಿದ್ದಾರೆ.
ತೇಜಸ್ವಿನಿ ಶೇಖರ್, ರೋಹಿತ್ ರಂಗಸ್ವಾಮಿ, ವನಿತಾ ವಾಸು ಈ ಧಾರಾವಾಹಿಯ ಮುಖ್ಯಪಾತ್ರಗಳಲ್ಲಿದ್ದಾರೆ. ‘ಸಂಘರ್ಷ’ ಧಾರಾವಾಹಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸೋಮವಾರದಿಂದ ಶನಿವಾರ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.