ಸ್ನೇಹನಾ ಪ್ರೀತಿನಾ ಚಿತ್ರದ ನಿರ್ದೇಶಕ ಶಾಹುರಾಜ್‌ ಶಿಂಧೆ ಇನ್ನಿಲ್ಲ

Suvarna News   | Asianet News
Published : Nov 19, 2020, 01:10 PM IST
ಸ್ನೇಹನಾ ಪ್ರೀತಿನಾ ಚಿತ್ರದ ನಿರ್ದೇಶಕ ಶಾಹುರಾಜ್‌ ಶಿಂಧೆ ಇನ್ನಿಲ್ಲ

ಸಾರಾಂಶ

ಹೃದಯಾಘಾತದಿಂದ ಇಂದು ಬೆಳಗ್ಗೆ ನಿರ್ದೇಶಕ ಶಾಹುರಾಜ್‌ ಶಿಂಧೆ ಕೊನೆ ಉಸಿರೆಳೆದಿದ್ದಾರೆ.   

2007ರ ಸೂಪರ್ ಹಿಟ್ ಕನ್ನಡ ಸಿನಿಮಾ 'ಸ್ನೇಹನಾ ಪ್ರೀತಿನಾ' ನಿರ್ದೇಶಕ ಶಾಹುರಾಜ್‌ ಶಿಂಧೆ ಹೃದಯಾಘಾತದಿಂದ ಇಂದು (19 ನವೆಂಬರ್) ಬೆಳಗ್ಗೆ ಅಗಲಿದ್ದಾರೆ. ಈ ವಿಚಾರದ ಬಗ್ಗೆ ಗಾಯಕ ಅಜನೀಶ್ ಲೋಕನಾಥ್ ಸೋಷಿಯಲ್ ಮೀಡಿಯಾದಲ್ಲಿ ದುಃಖ ತೋಡಿಕೊಂಡು, ಕಂಬನಿ ಮಿಡಿದಿದ್ದಾರೆ. 

ಹಿರಿಯ ಕಲಾವಿದ ಡಾ. ಟಿ.ಬಿ. ಸೊಲಬಕ್ಕನವರ ಇನ್ನಿಲ್ಲ 

'ಶಾಕ್ ಆಗುತ್ತಿದೆ ನಿರ್ದೇಶಕ ಶಾಹುರಾಜ್‌ ಇನ್ನಿಲ್ಲ ಎಂಬುದನ್ನು ಕೇಳಿ. ಸ್ನೇಹನಾ ಪ್ರೀತಿನಾ, ಚಾಂಪಿಯನ್ ಸೇರಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.  ಅವರ ಕುಟುಂಬಕ್ಕೆ ದೇವರು ದುಃಖ ಮರೆಸುವ ಶಕ್ತಿ ನೀಡಲಿ ಎಂದು ಪಾರ್ಥಿಸುತ್ತೇನೆ,' ಎಂದು ಟ್ಟೀಟ್ ಮಾಡಿದ್ದಾರೆ. 

 

ಬರೋಬ್ಬರಿ 9 ವರ್ಷದ ಬಳಿಕೆ ಮತ್ತೊಮ್ಮೆ ನಿರ್ದೇಶಕ್ಕೆ ಎಂಟ್ರಿ ಕೊಟ್ಟು 'ರಂಗ ಮಂದಿರ' ಸಿನಿಮಾ ನಿರ್ದೇಶನ  ಮಾಡಿದರು. ಸಿನಿಮಾ ಫೋಸ್ಟ್‌ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, 2021ರಲ್ಲಿ ತೆರೆ ಕಾಣಬೇಕಿತ್ತು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಸಿನಿಮಾ ರಿಲೀಸ್ ಆಗುವ ಮುನ್ನವೇ ಪ್ರತಿಭಾನ್ವಿತ ನಿರ್ದೇಶಕರು ಇಹಲೋಕ ತ್ಯಜಿಸಿದ್ದಾರೆ.

ನಟ ಮಂಡ್ಯ ರಮೇಶ್‌ಗೆ ಪಿತೃ ವಿಯೋಗ 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ