ಗಾಯಕ್ ವಿಜಯ್ ಪ್ರಕಾಶ್‌ಗೆ ಗೌರವ ಡಾಕ್ಟರೇಟ್ ನೀಡಿದ ಕೆನಡಾ 'ರಿಚ್ಮಂಡ್ ಗ್ರಾಬ್ರಿಯಲ್ ಯುನಿವರ್ಸಿಟಿ'

Published : Apr 22, 2024, 05:58 PM ISTUpdated : Apr 22, 2024, 06:07 PM IST
ಗಾಯಕ್ ವಿಜಯ್ ಪ್ರಕಾಶ್‌ಗೆ ಗೌರವ ಡಾಕ್ಟರೇಟ್ ನೀಡಿದ ಕೆನಡಾ 'ರಿಚ್ಮಂಡ್ ಗ್ರಾಬ್ರಿಯಲ್ ಯುನಿವರ್ಸಿಟಿ'

ಸಾರಾಂಶ

ಜೈ ಹೋ ಹಾಡಿನ ಬಳಿಕ ಗಾಯಕ ವಿಜಯ್ ಪ್ರಕಾಶ್ ಸಿಂಗರ್ ಆಗಿ ತಮ್ಮ ವೃತ್ತಿ ಬದುಕಿನಲ್ಲಿ ಸಾಕಷ್ಟು ಅವಕಾಶ ಪಡೆದು ಮಿಂಚತೊಡಗಿದರು. ಹಿಂದಿ ಸೇರಿದಂತೆ, ಕನ್ನಡ, ತಮಿಳು, ತೆಲುಗು, ಮಲಯಾಳಂ ಹೀಗೆ ಹಲವು ಭಾಷೆಗಳಲ್ಲಿ ಹಾಡುತ್ತ ತಮ್ಮ ಗಾಯನದ ಕಂಪನ್ನು...

ಕನ್ನಡ ಮೂಲದ ಬಹುಭಾಷಾ ಗಾಯಕ ವಿಜಯ್ ಪ್ರಕಾಶ್ ಅವರು ಇನ್ಮುಂದೆ 'ಡಾ ವಿಜಯ್ ಪ್ರಕಾಶ್'. ಕೆನಡಾದ ಸಂಗೀತ ಕಲಾ ಸಂಸ್ಥೆಯು ಗಾಯಕ ವಿಜಯ್ ಪ್ರಕಾಶ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಈ ಮೂಲಕ ಕನ್ನಡದ ಗಾಯಕ ವಿಜಯ್ ಪ್ರಕಾಶ್ ಮೂಲಕ ಸಂಗೀತಕ್ಕೆ ಮತ್ತೊಂದು ಗೌರವ ಗರಿ ದೊರಕಿದಂತಾಗಿದೆ. ಕೆನಡಾದ (Canada) ಟೊರಾಂಟೋದಲ್ಲಿ (Toronto) 'ರಿಚ್ಮಂಡ್ ಗ್ರಾಬ್ರಿಯಲ್ Richmond Gabriel University'ಮೂಲಕ ಸಂಗೀತ ಕಲೆಗೆ ನೀಡಲಾಗುವ ಗೌರವ್ ಡಾಕ್ಟರೇಟ್ಅನ್ನು ಭಾರತದ, ಅದರಲ್ಲೂ ಮಖ್ಯವಾಗಿ ಕನ್ನಡಿಗ ಸಿಂಗರ್ ವಿಜಯ್ ಪ್ರಕಾಶ್ ಗಳಿಸಿದ್ದಾರೆ. 

ಗಾಯಕ ವಿಜಯ್ ಪ್ರಕಾಶ್ ಅವರು ಮೂಲತಃ ಮೈಸೂರಿನ ಗಾಯಕರಾಗಿದ್ದು, ಸಂಗೀತದ ಅಭ್ಯಾಸವನ್ನು ಹೆಚ್ಚಾಗಿ ಮುಂಬೈನಲ್ಲಿ ಮಾಡಿದ್ದಾರೆ. ಹಿಂದಿಯ 'ಸರಗಮಪ' ಸೇರದಂತೆ ಹಲವಾರು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿ ಗಮನಸೆಳೆದಿದ್ದ ಗಾಯಕ ವಿಜಯ್ ಪ್ರಕಾಶ್ ಅವರು ಸಾಕಷ್ಟು ಹಿಂದಿಯ ಆಲ್ಬಂ ಸಾಂಗ್‌ಗಳಿಗೂ ಧ್ವನಿಯಾಗಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರವಾದ ಭಾರತದ 'ಸ್ಲಂ ಡಾಗ್ ಮಿಲೇನಿಯರ್' ನಲ್ಲಿ 'ಜೈ ಹೋ' ಹಾಡಿಗೆ ಧ್ವನಿಯಾಗುವ ಮೂಲಕ ವಿಜಯ್ ಪ್ರಕಾಶ್ ಬಹಳಷ್ಟು ಪ್ರಸಿದ್ಧಿ ಪಡೆದರು. 

ಕೋವಿಡ್ ಬಳಿಕ ಭಾಷೆ ಬ್ಯಾರಿಕೇಡ್ ಕಿತ್ತೆಸೆದು ನಟಿಸಿದೆ; ನಟಿ ಆಶಿಕಾ ರಂಗನಾಥ್ ಹೀಗೆ ಹೇಳಿದ್ಯಾಕೆ?

ಜೈ ಹೋ ಹಾಡಿನ ಬಳಿಕ ಗಾಯಕ ವಿಜಯ್ ಪ್ರಕಾಶ್ ಸಿಂಗರ್ ಆಗಿ ತಮ್ಮ ವೃತ್ತಿ ಬದುಕಿನಲ್ಲಿ ಸಾಕಷ್ಟು ಅವಕಾಶ ಪಡೆದು ಮಿಂಚತೊಡಗಿದರು. ಹಿಂದಿ ಸೇರಿದಂತೆ, ಕನ್ನಡ, ತಮಿಳು, ತೆಲುಗು, ಮಲಯಾಳಂ ಹೀಗೆ ಹಲವು ಭಾಷೆಗಳಲ್ಲಿ ಹಾಡುತ್ತ ತಮ್ಮ ಗಾಯನದ ಕಂಪನ್ನು ಇಡೀ ಭಾರತಕ್ಕೆ ಪಸರಿಸುವಲ್ಲಿ ಯಶಸ್ವಿಯಾದರು ಗಾಯಕ ವಿಜಯ್ ಪ್ರಕಾಶ್. ಇಂದು ಸೌತ್-ನಾತ್‌ ಭೇದವಿಲ್ಲದೇ ಎಲ್ಲಾ ಕಡೆ ಸಲ್ಲುವ ಗಾಯಕರಾಗಿ ಬೆಳೆದಿದ್ದಾರೆ ಕನ್ನಡಿಗ ಹೆಮ್ಮೆಯ ವಿಜಯ್ ಪ್ರಕಾಶ್. 

'ಆಫ್ರಿಕಾದಲ್ಲಿ ಶೀಲಾ, ಭಾರತದಲ್ಲಿ ಸಾಲ' ಆಗಿದ್ದೇಕೆ, ವಿಕ್ಟೋರಿಯಾ ಫಾಲ್ಸ್‌ ಮೇಲೆ ಕ್ಯಾಮೆರಾ ಇಟ್ಟಿದ್ರಾ ದ್ವಾರಕೀಶ್!

ಇದೀಗ, ಕೆನಡಾದ ಗೌರವ್ ಡಾಕ್ಟರೇಟ್ ಪಡೆಯುವ ಮೂಲಕ ಡಾ ವಿಜಯ್ ಪ್ರಕಾಶ್ ಆಗಿ ಬದಲಾಗಿರುವ ಅವರು, ತಮ್ಮ ಬದುಕಿನ ಸಂಗೀತದ ಹೊಸದೊಂದು ಮೈಲಿಗಲ್ಲಿಗೆ ಸಾಕ್ಷಿಯಾಗಿದ್ದಾರೆ. ಈ ಸಂತೋಷದ ಘಳಿಗೆಯಲ್ಲಿ ಅವರಿಗೆ ದೇಶ-ವಿದೇಶಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಡಾ ವಿಜಯ್ ಪ್ರಕಾಶ್ ಅವರಿಂದ ಮುಂದೆಐ ಕೂಡ ಇನ್ನು ಹೆಚ್ಚಿನ ಸಂಗೀತ ಸುಧೆ ಸಾಗರೋಪಾದಿಯಲ್ಲಿ ಹರಿದು ಬರಲಿ ಎಂದು ಅವರ ಅಭಿಮಾನಿಗಳು ಹಾರೈಸಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಕನ್ನಡಿಗರ ಪರವಾಗಿ ಡಾ ವಿಜಯ್ ಪ್ರಕಾಶ್ ಅವರಿಗೆ 'ಜೈ ಹೋ' ಎನ್ನೋಣ ಅಲ್ಲವೇ? 

ಗೋಕಾಕ್ ಚಳುವಳಿಗೆ ಡಾ ರಾಜ್‌ಕುಮಾರ್ ಧುಮುಕುವಂತೆ ಮಾಡಿದ್ದು ಯಾರೆಂಬ ಗುಟ್ಟು ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್!

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗಂಡನ ಜೊತೆ ಜಾಲಿಯಾಗಿ ಮೆಲ್ಬೋರ್ನ್‌ ಸುತ್ತಾಡಿ ಬಂದ ಸೋನಲ್‌!
ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!