ಸಂಜನಾ ಗಲ್ರಾನಿ ನಿವಾಸಕ್ಕೆ ಕೆ.ಮಂಜು ಭೇಟಿ; ಆರೋಗ್ಯಕ್ಕೆ ಹಾರೈಸಿದ ಅಣ್ಣ!

Published : Feb 16, 2021, 11:12 AM IST
ಸಂಜನಾ ಗಲ್ರಾನಿ ನಿವಾಸಕ್ಕೆ ಕೆ.ಮಂಜು ಭೇಟಿ; ಆರೋಗ್ಯಕ್ಕೆ ಹಾರೈಸಿದ ಅಣ್ಣ!

ಸಾರಾಂಶ

ಜೈಲಿನಿಂದ ಹೊರ ಬಂದ ಸಂಜನಾಳನ್ನು ಭೇಟಿ ಮಾಡಿದ ನಿರ್ಮಾಪಕ ಕೆ.ಮಂಜು. ಕಾರಣವೇನು?  

ಡ್ರಗ್ಸ್‌ ಮಾಫಿಯಾ ಪ್ರಕರಣದ ಹಿನ್ನೆಲೆಯಲ್ಲಿ ಹಲವು ತಿಂಗಳ ಕಾಲ ಕಂಬಿ ಹಿಂದಿದ್ದ ನಟಿ ಸಂಜನಾ ಗಲ್ರಾಣಿ ಜಾಮೀನು ಪಡೆದು ಹೊರ ಬಂದ ನಂತರ ಮೊದಲು ಭೇಟಿಯಾಗಿರುವ ವ್ಯಕ್ತಿ ನಿರ್ಮಾಪಕ ಕೆ.ಮಂಜು. ಸ್ವತಃ ಸಂಜನಾ ಫೋಟೋ ಅಪ್ಲೋಡ್ ಮಾಡಿದ್ದಾರೆ. 

'ಹೈದ್ರಾಬಾದ್ ನನ್ನ ಪ್ರಾಣ, ನಿತ್ಯ ನಮಾಜ್ ಮಾಡ್ತೇನೆ' ಸಂಜನಾ ಲೈವ್! 

ಸಂಜನಾ ಮಾತು:
'ನನ್ನ ಒಳ್ಳೆಯ ಆರೋಗ್ಯಕ್ಕೆ ಹಾರೈಸಲು ಕೆ. ಮಂಜು ಅಣ್ಣ ನಮ್ಮ ಮನೆಗೆ ಬಂದಿದ್ದಾರೆ.  ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು ಅಣ್ಣ,' ಎಂದು ಸಂಜನಾ ಬರೆದುಕೊಂಡಿದ್ದಾರೆ.  ಸಂಜನಾ ಕುಟುಂಬದ ಜೊತೆ ಆಪ್ತರಾಗಿರುವ ಮಂಜು ಭೋಜನ ಸವಿದಿದ್ದಾರೆ. ಜೈಲಿನಲ್ಲಿದ್ದ ಸಂಜನಾಳ ಆರೋಗ್ಯ ತುಂಬಾನೇ ಹದಗೆಟ್ಟಿತ್ತು. ಸೂಕ್ತ ಚಿಕಿತ್ಸೆ ಪಡೆಯಲು ಹೊರ ಬಂದ ನಂತರ ಚೇತರಿಸಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಸಂಜನಾ ಮತ್ತೆ ಸಿನಿಮಾ ಮಾಡುವುದಾಗಿ  ನಿರ್ಧರಿಸಿದ್ದಾರೆ. ಈಗಾಗಲೇ ಸಾಕಷ್ಟು ಚಿತ್ರಕತೆ ಕೇಳಿದ್ದಾರೆ ಎಂಬ ಮಾಹಿತಿಯೂ ಇದೆ. ಇತ್ತೀಚಿಗೆ ಮಾಡಲಾಗಿದ್ದ ಫೇಸ್‌ಬುಕ್‌ ಲೈವ್‌ನಲ್ಲಿ ಮನಬಿಚ್ಚಿ ಮಾತನಾಡಿದ ಸಂಜನಾ, ಕಷ್ಟದ ದಿನಗಳ ಬಗ್ಗೆ ಎಂದೂ ನೆನಪಿಸಿಕೊಳ್ಳಲು ಇಷ್ಟ ಪಡುವುದಿಲ್ಲ ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕರ್ಲಿ ಹೇರ್, ಹಳದಿ ಡ್ರೆಸ್: ಸಂಗೀತಾ ಶೃಂಗೇರಿ ಹೊಸ ಅವತಾರ ನೋಡಿ ನೆಟ್ಟಿಗರು ಏನಂದ್ರು?
ಹಿಮವದ್ ಗೋಪಾಲಸ್ವಾಮಿ ದೇವರ ದರ್ಶನಕ್ಕೆ ಬಂದ ನಟ ಚಿಕ್ಕಣ್ಣ-ಪಾವನಾ: ಅಲ್ಲೇ ಸಿಕ್ತು ಸಿಹಿ ಸುದ್ದಿ!