KV Raju Passed Away: 50ಕ್ಕೂ ಹೆಚ್ಚು ಹಿಟ್‌ ಚಿತ್ರಗಳ ನಿರ್ದೇಶಕ ಕೆ.ವಿ.ರಾಜು ಇನ್ನಿಲ್ಲ

Kannadaprabha News   | Asianet News
Published : Dec 25, 2021, 06:19 AM IST
KV Raju Passed Away: 50ಕ್ಕೂ ಹೆಚ್ಚು ಹಿಟ್‌ ಚಿತ್ರಗಳ ನಿರ್ದೇಶಕ ಕೆ.ವಿ.ರಾಜು ಇನ್ನಿಲ್ಲ

ಸಾರಾಂಶ

*   ಅಮಿತಾಭ್‌ ಬಚ್ಚನ್‌ಗೂ ಆ್ಯಕ್ಷನ್‌, ಕಟ್‌ ಹೇಳಿದ್ದ ಕೆ.ವಿ.ರಾಜು  *   ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ರಾಜು  *   ಯಶ್‌ ನಟನೆಯ ‘ರಾಜಧಾನಿ’ ರಾಜು ನಿರ್ದೇಶನದ ಕೊನೆಯ ಸಿನಿಮಾ

ಬೆಂಗಳೂರು(ಡಿ.25): ಅವಿನಾಶ್‌, ಶಶಿಕುಮಾರ್‌ರಂತಹ ನಟರನ್ನು ಕನ್ನಡ ಚಿತ್ರರಂಗಕ್ಕೆ(Sandalwood) ಪರಿಚಯಿಸಿದ್ದ ಹಿರಿಯ ನಿರ್ದೇಶಕ ಕೆ.ವಿ.ರಾಜು(KV Raju) (67) ಶುಕ್ರವಾರ ನಿಧನರಾಗಿದ್ದಾರೆ(Death).

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ(Bengaluru) ಬಸವೇಶ್ವರ ನಗರದ ತಮ್ಮ ನಿವಾಸದಲ್ಲೇ ಚಿಕಿತ್ಸೆ(Treatment) ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದೆ ಬೆಳಗ್ಗೆ 8 ಗಂಟೆಗೆ ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Jalappa Passes Away: ಕರ್ನಾಟಕದ ಹಿರಿಯ ರಾಜಕಾರಣಿ ನಿಧನ

ಹಾಸನದ(Hassan) ಬೆಳ್ಳೂರು ಕ್ರಾಸ್‌ನ ಬಳಿ ಇರುವ ಹಳ್ಳಿಯಿಂದ ಬೆಂಗಳೂರಿಗೆ ಬಂದ ಕೆ.ವಿ.ರಾಜು, ತಮ್ಮ ಅಣ್ಣ ಕೆ.ವಿ.ಜಯರಾಮ್‌ ಅವರ ಚಿತ್ರಗಳಿಗೆ ಬರಹಗಾರನಾಗಿ, ಸಹಾಯಕ ನಿರ್ದೇಶಕನಾಗುವ ಮೂಲಕ 70-80ರ ದಶಕದಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ‘ಬಂಧಮುಕ್ತ’ ಸಿನಿಮಾ ಮೂಲಕ ನಿರ್ದೇಶಕರಾದರು(Film Director). ಅದೇ ಸಿನಿಮಾವನ್ನು ‘ಇಂದ್ರಜಿತ್‌’ ಹೆಸರಿನಲ್ಲಿ ನಿರ್ದೇಶಿಸಿದ್ದರು. ಅಮಿತಾಭ್‌ ಬಚ್ಚನ್‌(Amitabh Bachchan) ನಟಿಸಿದ್ದರು.

ಸುಂದರಕಾಂಡ, ಯುದ್ಧಕಾಂಡ, ಪೊಲೀಸ್‌ ಲಾಕಪ್‌, ಬೆಳ್ಳಿ ಮೋಡಗಳು, ಬೊಂಬಾಟ್‌ ಹುಡುಗ, ಅಭಿಜಿತ್‌, ಹುಲಿಯ, ಸಂಗ್ರಾಮ, ಕದನ, ನವಭಾರತ ಸೇರಿದಂತೆ 50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಯಶ್‌(Yash) ನಟನೆಯ ‘ರಾಜಧಾನಿ’ ಇವರ ನಿರ್ದೇಶನದ ಕೊನೆಯ ಸಿನಿಮಾ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?