ಕೊರೋನಾ ವಾರಿಯರ್ಸ್‌: ಪೊಲೀಸ್‌ ಸಿಬ್ಬಂದಿ ಕುರಿತು ಯೋಗರಾಜ್‌ ಭಟ್‌ ಕಿರುಚಿತ್ರ!

By Kannadaprabha NewsFirst Published Apr 24, 2020, 7:36 AM IST
Highlights

ಲಾಕ್‌ಡೌನ್‌ ವೇಳೆ ಪೊಲೀಸರ ಪರಿಸ್ಥಿತಿ ಕುರಿತು ಚಿತ್ರೀಕರಣ| ಯೋಗರಾಜ್‌ ಭಟ್‌ ಅವರ ತಂಡ ಬೆಂಗಳೂರಿನ ಪುರಭವನದ ಬಳಿ ನಡೆಸಿದ ಚಿತ್ರೀಕರಣ| ಈ ವೇಳೆ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಹಾಜರಿದ್ದರು|

ಬೆಂಗಳೂರು(ಏ.24): ಲಾಕ್‌ಡೌನ್‌ ಬಂದೋಬಸ್ತ್‌ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಪೊಲೀಸರ ಕುರಿತು ಕಿರುಚಿತ್ರ ನಿರ್ಮಿಸಲು ಮುಂದಾಗಿದ್ದಾರೆ ನಿರ್ದೇಶಕ ಯೋಗರಾಜ್‌ ಭಟ್‌.

ಈ ಹಿನ್ನೆಲೆಯಲ್ಲಿ ಯೋಗರಾಜ್‌ ಭಟ್‌ ಅವರ ತಂಡ ಗುರುವಾರ ಪುರಭವನದ ಬಳಿ ಚಿತ್ರೀಕರಣ ನಡೆಸಿದ್ದು, ಈ ವೇಳೆ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಹಾಜರಿದ್ದರು.

ಬೆಲ್ ಬಾಟಮ್ ಚಿತ್ರದಲ್ಲಿ ಯೋಗರಾಜ್ ಭಟ್ ಮಾಜಿ ರೌಡಿ

ಈ ಸಂದರ್ಭದಲ್ಲಿ ಮಾತನಾಡಿದ ಭಾಸ್ಕರ್‌ ರಾವ್‌, ಯೋಗರಾಜ್‌ ಭಟ್‌ ಅವರ ಬಳಿ ಚರ್ಚೆ ವೇಳೆ ಇಂತಹೊಂದು ವಿಷಯ ಪ್ರಸ್ತಾಪವಾಯಿತು. ಅವರೇ ಖುದ್ದಾಗಿ ಮುತುವರ್ಜಿ ವಹಿಸಿ ಕಿರುಚಿತ್ರ ಮಾಡುತ್ತಿದ್ದಾರೆ. ಕೊರೋನಾ ಸೋಂಕು ಹರಡುತ್ತಿರುವ ಸಂದರ್ಭದಲ್ಲಿಯೂ ಸಿಬ್ಬಂದಿಯ ಕಾರ್ಯವೈಖರಿ ಹಾಗೂ ಅವರ ಪರಿಸ್ಥಿತಿ ಹೇಗಿದೆ ಎಂಬುದನ್ನು ಜನರಿಗೆ ತೋರಿಸುವುದು ಇದರ ಉದ್ದೇಶವಾಗಿದೆ. ಬಜೆಟ್‌ ಸೇರಿದಂತೆ ಯಾವುದೇ ವಿಚಾರ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.
 

click me!