ಪುತ್ರ ರಣ್ವಿತ್‌ ಮೊದಲ ಬರ್ತಡೇಗೆ ಸ್ಪೆಷಲ್‌ ಗಿಫ್ಟ್‌ ನೀಡಿದ ರಿಷಬ್‌ ಶೆಟ್ಟಿ

Kannadaprabha News   | Asianet News
Published : Apr 08, 2020, 10:25 AM ISTUpdated : Apr 08, 2020, 10:27 AM IST
ಪುತ್ರ ರಣ್ವಿತ್‌ ಮೊದಲ ಬರ್ತಡೇಗೆ ಸ್ಪೆಷಲ್‌ ಗಿಫ್ಟ್‌ ನೀಡಿದ ರಿಷಬ್‌ ಶೆಟ್ಟಿ

ಸಾರಾಂಶ

ನಿರ್ದೇಶಕ, ನಟ ರಿಷಬ್‌ ಶೆಟ್ಟಿಪುತ್ರ ರಣ್ವಿತ್‌ಗೆ ಮಂಗಳವಾರ (ಮಾ.7) ಮೊದಲ ವರ್ಷದ ಹುಟ್ಟುಹಬ್ಬ. ಮಗನ ಬತ್‌ರ್‍ಡೇಗೆ ರಿಷಬ್‌ ಶೆಟ್ಟಿವಿಶೇಷ ವಿಡಿಯೋವೊಂದನ್ನು ಗಿಫ್ಟ್‌ ನೀಡಿದ್ದಾರೆ. ಅದನ್ನೀಗ ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ನಿರ್ದೇಶಕ, ನಟ ರಿಷಬ್‌ ಶೆಟ್ಟಿಪುತ್ರ ರಣ್ವಿತ್‌ಗೆ ಮಂಗಳವಾರ (ಮಾ.7) ಮೊದಲ ವರ್ಷದ ಹುಟ್ಟುಹಬ್ಬ. ಮಗನ ಬತ್‌ರ್‍ಡೇಗೆ ರಿಷಬ್‌ ಶೆಟ್ಟಿವಿಶೇಷ ವಿಡಿಯೋವೊಂದನ್ನು ಗಿಫ್ಟ್‌ ನೀಡಿದ್ದಾರೆ. ಅದನ್ನೀಗ ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ಸನ್ನಿವೇಶವನ್ನು ಸ್ವಾಗತಿಸಿ, ಪಾಸಿಟಿವ್‌ ಆಗಿರಿ : ರಮೇಶ್‌ ಅರವಿಂದ್‌

ಅಷ್ಟಕ್ಕೂ ಈ ವೀಡಿಯೋದಲ್ಲಿರುವುದು ಈ ಒಂದು ವರ್ಷದಲ್ಲಿ ರಿಷಬ್‌ ಅವರೇ ಕ್ಲಿಕ್ಕಿಸಿದ ರಣ್ವಿತ್‌ನ ವಿವಿಧ ಭಂಗಿಗಳ ಚಿತ್ರಗಳು. ಜೊತೆಗೆ ಇದಕ್ಕೆ ಹಿನ್ನೆಲೆಯಾಗಿ ‘ಕಥಾ ಸಂಗಮ’ ಚಿತ್ರದ ‘ಇರುಳ ಚಂದಿರನು ...’ ಹಾಡನ್ನು ಬಳಸಿಕೊಂಡಿದ್ದಾರೆ. ಸಿನಿಮಾ ಸಂಕಲನಕಾರ ಪ್ರತೀಕ್‌ ಶೆಟ್ಟಿಎಡಿಟ್‌ ಮಾಡಿದ್ದಾರೆ.

 

ಸದ್ಯ ಕೊರೋನಾದಿಂದಾಗಿ ರಿಷಬ್‌ ಫ್ಯಾಮಿಲಿ ಕುಂದಾಪುರ ಸಮೀಪದ ಕೆರಾಡಿಯಲ್ಲಿದ್ದಾರೆ.

‘ರಣ್ವಿತ್‌ ಮೊದಲ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಬೇಕೆಂದುಕೊಂಡಿದ್ದೆ. ಆದರೆ ಕೊರೋನಾದಿಂದಾಗಿ ಯಾರೂ ಹೊರಗೆ ಬರುವಂತಿಲ್ಲ. ನಾವೂ ಈಗ ನಮ್ಮೂರಿನಲ್ಲಿದ್ದೇವೆ. ಹಾಗಾಗಿ ಇಲ್ಲಿಯೇ ಸಿಂಪಲ್‌ ಆಗಿ ಬರ್ತಡೇ ಆಚರಿಸೋಣ ಅಂತ ನಿರ್ಧರಿಸಿದ್ದೆ. ಈ ವಿಡಿಯೋ ಮಾಡುವ ಯೋಚನೆ ಬಂತು. ಮನೆಯಲ್ಲಿ ಅತ್ತಿಗೆ ಕೇಕ್‌ ಮಾಡಿದರು. ಸಿಂಪಲ್‌ ಆಗಿ ಕೇಕ್‌ ಕತ್ತರಿಸಿ ಬತ್‌ರ್‍ಡೇ ಆಚರಿಸಿದೆವು’ ಎಂದು ರಿಷಬ್‌ ಶೆಟ್ಟಿಸಂಭ್ರಮ ಹಂಚಿಕೊಂಡರು.

ಪ್ರೀತಿಯಲ್ಲಿ ಬಿದ್ದು ಎರಡನೇ ಹೆಂಡತಿಯಾದ ಬಾಲಿವುಡ್‌ ಬೆಡಗಿಯರಿವರು!

ಈ ವೀಡಿಯೋವನ್ನು ರಕ್ಷಿತ್‌ ಶೆಟ್ಟಿಸೇರಿ ಹಲವರು ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡು, ರಣ್ವಿತ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಧಂ' ಬೇಕಲೇ ಎಂದಿದ್ದ ದರ್ಶನ್‌ಗೆ ಟಾಂಗ್ ಕೊಟ್ರಾ ಸುದೀಪ್? ಏನಿದು ಮಾರ್ಕ್ ಡೈಲಾಗ್ ಮರ್ಮ?
ಸಿನಿಮಾ ರಿಲೀಸ್‌ಗೂ ಮುನ್ನವೇ ಜೈಲಲ್ಲಿ ಡೆವಿಲ್ ರೂಪ ತಾಳಿದ ದರ್ಶನ್; ಸಹ ಕೈದಿಗಳಿಗೆ ಕಾಲಿನಿಂದ ಒದ್ದು ದುರಹಂಕಾರ!