ಗೊತ್ತಿಲ್ಲ ಶಿವನೇ ಅನ್ನುತ್ತಲೇ ಭಕ್ತಿಭಾವದ ಸುಧೆ ಹರಿಸಿದ ಕಾಂತಾರದ ಬ್ರಹ್ಮಕಳಶ!

Published : Sep 28, 2025, 08:31 AM IST
Kantara

ಸಾರಾಂಶ

Brahmakalasha Song: ಕಾಂತಾರ ಚಾಪ್ಟರ್ 1' ಚಿತ್ರದ ಮೊದಲ ಲಿರಿಕಲ್ ಹಾಡು 'ಬ್ರಹ್ಮಕಳಶ' ಬಿಡುಗಡೆಯಾಗಿದೆ. ಕನ್ನಡ ಮತ್ತು ತುಳು ಭಾಷೆಯ ಸಂಗಮವಾಗಿರುವ ಈ ಭಕ್ತಿಭಾವದ ಹಾಡು, ಕೇಳುಗರಲ್ಲಿ ರೋಮಾಂಚನ ಉಂಟುಮಾಡುತ್ತಿದೆ. 

ಬೆಂಗಳೂರು:  ಕಾಂತಾರ ಚಾಪ್ಟರ್ 1ರ ಮೊದಲ ಲಿರಿಕಲ್ ಹಾಡಿನ ವಿಡಿಯೋ ಬಿಡುಗಡೆ ಮಾಡಿದೆ. ಗೊತ್ತಿಲ್ಲ ಶಿವನೇ ಅನ್ನುತ್ತಲೇ ಕರುನಾಡಿನ ತುಂಬಾ ಭಕ್ತಿಭಾವದ ಸುಧೆಯನ್ನು ಹಾಡು ಹರಿಸುತ್ತಿದೆ. ನಾದಸ್ವರದ ಜೊತೆಯಲ್ಲಿ ವೈಬ್ರಂಟ್ ಮ್ಯೂಸಿಕ್‌ ಜೊತೆ ಭಾವ ತುಂಬಿದ ಧ್ವನಿ ನಿಮ್ಮ ರೋಮ ರೋಮಗಳಲ್ಲಿ ರೋಮಾಂಚನವನ್ನು ಉಂಟುಮಾಡುತ್ತದೆ. ಬ್ರಹ್ಮಕಳಶ ಹಾಡು ಕನ್ನಡ ಮತ್ತು ತುಳು ಭಾಷೆಯ ಸಂಗಮವಾಗಿದ್ದು, ಕೇಳುಗರಿಗೆ ಹೊಸ ಅನುಭವವನ್ನು ನೀಡುತ್ತಿದೆ. ಕಾಂತಾರ ಚಾಪ್ಟರ್ 1 ಸಿನಿಮಾ ಅಕ್ಟೋಬರ್ 2 ರಂದು ಬಿಡುಗಡೆಯಾಗಲಿದೆ. ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ ಸೇರಿದಂತೆ ದೊಡ್ಡ ತಾರಾಬಳಗವನ್ನು ಕಾಂತಾರ ಹೊಂದಿದೆ. ಕಾಂತಾರ ಚಾಪ್ಟರ್ 1 ಈ ವರ್ಷದ ಬಹುನಿರೀಕ್ಷಿತ ಚಿತ್ರವಾಗಿದೆ.

ಬ್ರಹಕಳಶದ ಸಂಗೀತ ತಂಡ ಹೀಗಿದೆ

ಸಂಗೀತ: ಅಜನೀಶ್ ಲೋಕನಾಥ್

ಗಾಯಕ: ಅಬ್ಬಿ ವಿ

ಸಾಹಿತ್ಯ: ಶಶಿರಾಜ್ ಕಾವೂರು

ನಾದಸ್ವರಂ: ಬಾಲ

ಲಯ: ಕಲ್ಯಾಣ ಚಕ್ರವರ್ತಿ

ಲೈವ್ ರಿದಮ್ಸ್: ಶ್ರುತಿ

ಹೆಚ್ಚುವರಿ ಸ್ಟ್ರಿಂಗ್ ವ್ಯವಸ್ಥೆಗಳು: ಸಂಜಯ್, ಬಾಲಸುಬ್ರಮಣಿಯಂ

ಗೊತ್ತುವಧ್ಯಂ : ದುರ್ಗಾ ಪ್ರಸಾದ

ಪಿಟೀಲು: ಎಂಬಾರ್ ಕಣ್ಣನ್ ಮತ್ತು ನಾರಾಯಣ ಶರ್ಮಾ

ಬಾಬಿ ಸಿ ಆರ್ ಸಂಗೀತ ನಿರ್ಮಾಣ, ಅಜನೀಶ್ ಲೋಕನಾಥ್ ಬಿ - ಎಬಿಬಿಎಸ್ ಸ್ಟುಡಿಯೋಸ್

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?