ಮಂಟಪಕ್ಕೆ ನನ್​ ಕರ್ಕೊಂಡು ಬರ್ಬೇಕಿದ್ದ ಮಾವ ಕಾಣೆಯಾಗೋದ್ರು! ಅದೊಂದ್​ ದೊಡ್ಡ ಕಥೆ, ಆ ದಿನ ಸ್ಮರಿಸಿದ ರಕ್ಷಿತಾ

By Suvarna NewsFirst Published May 5, 2024, 6:03 PM IST
Highlights

ಪ್ರೇಮ್​ ಮತ್ತು ರಕ್ಷಿತಾ ಮದುವೆಯ ದಿನ ಮಂಟಪಕ್ಕೆ ಮದುಮಗಳನ್ನು ಕರೆದುಕೊಂಡು ಬರಬೇಕಿದ್ದ ಮಾವನೇ ಕಾಣೆಯಾದ ಇಂಟರೆಸ್ಟಿಂಗ್​ ವಿಷ್ಯ ಶೇರ್​ ಮಾಡಿಕೊಂಡಿದ್ದಾರೆ ನಟಿ..
 

2002 ರಲ್ಲಿ ತೆರೆಕಂಡ ಪುನೀತ್ ರಾಜಕುಮಾರ್ ಅಭಿನಯದ `ಅಪ್ಪು' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದವರು ನಟಿ ರಕ್ಷಿತಾ.  ನಂತರ ಈ ಚಿತ್ರದ ತೆಲುಗು ಮತ್ತು ತಮಿಳು ರಿಮೇಕ್‍ನಲ್ಲಿ ಕೂಡ ನಾಯಕಿಯಾಗಿ ನಟಿಸಿದರು. ಕಲಾಸಿಪಾಳ್ಯ ಚಿತ್ರ ರಕ್ಷಿತಾ ಸಿನಿ ಕರಿಯರ್​ಗೆ ಬಿಗ್‍ಬ್ರೇಕ್ ನೀಡಿತು. ಕನ್ನಡದಲ್ಲಿ ಪುನೀತ್, ಸುದೀಪ್, ಶಿವರಾಜಕುಮಾರ್, ಉಪೇಂದ್ರ, ಶ್ರೀಮುರಳಿ ಮುಂತಾದ ನಟರೊಂದಿಗೆ ನಟಿಸಿದ ರಕ್ಷಿತಾ ತೆಲುಗಿನಲ್ಲಿ ಚಿರಂಜೀವಿ, ನಾಗಾರ್ಜುನ, ಮಹೇಶ್ ಬಾಬು, ರವಿತೇಜ, ಎನ್.ಟಿ.ಆರ್ ಮುಂತಾದ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. 2007 ರಲ್ಲಿ ನಿರ್ದೇಶಕ ಪ್ರೇಮ್‍ರನ್ನು ವಿವಾಹವಾಗಿರೋ ರಕ್ಷಿತಾರಿಗೆ ಒಬ್ಬ ಪುತ್ರನಿದ್ದು ಸುಖಿ ದಾಂಪತ್ಯ ನಡೆಸುತ್ತಿದ್ದಾರೆ. ಸ್ಯಾಂಡಲ್​ವುಡ್​ನ ಮೋಸ್ಟ್​ ಬ್ಯೂಟಿಫುಲ್​ ಕಪಲ್​ ಎಂದು ಕರೆಸಿಕೊಳ್ಳುವವರು ರಕ್ಷಿತಾ ಮತ್ತು ಪ್ರೇಮ್​. ಪ್ರೇಮ್ ಜೊತೆ ವಿವಾಹವಾದ ನಂತರ ನಟನೆಗೆ ವಿರಾಮ ಹೇಳಿದ ರಕ್ಷಿತಾ ತಮ್ಮ ಹೋಮ್ ಬ್ಯಾನರ್​ನಲ್ಲಿ ಚಿತ್ರ ನಿರ್ಮಾಣಕ್ಕಿಳಿದರು. ಶಿವರಾಜಕುಮಾರ್​ ಅವರ ನೂರನೇ ಚಿತ್ರ ಜೋಗಯ್ಯವನ್ನು ನಿರ್ಮಾಣವನ್ನು `ಪ್ರೇಮ್ ಪಿಕ್ಚರ್ಸ್' ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.


ಅಷ್ಟಕ್ಕೂ ನಾವು ಮದ್ವೆಯಾಗುತ್ತೇವೆ ಎಂದಾಗ ಅಚ್ಚರಿ ಪಟ್ಟುಕೊಂಡವರೇ ಹೆಚ್ಚು.  ಪ್ರೇಮ್​  ಮಂಡ್ಯದವರು. ನಾನು ಕುಂದಾಪುರದವಳು.  ಇಬ್ಬರ ಲೈಫ್ ಸ್ಟೈಲ್ ಬೇರೆನೇ ಇತ್ತು. ಆದರೂ ಅದ್ಹೇಗೋ ಇಬ್ಬರ ನಡುವೆ ಪ್ರೇಮ ಮೊಳೆತು ಮದ್ವೆಯಾಗಿರುವುದಾಗಿ ನಟಿ ಹೇಳಿದ್ದಾರೆ. ಇದೀಗ ನಟಿ ರಕ್ಷಿತಾ, ತಮ್ಮ ಮದುವೆಯ ಕೆಲವೊಂದು ಇಂಟರೆಸ್ಟಿಂಗ್​ ವಿಷಯಗಳನ್ನು ಶೇರ್​ಮಾಡಿಕೊಂಡಿದ್ದಾರೆ. ರ್‍ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿರುವ ರಕ್ಷಿತಾ ಅವರು ತಮ್ಮ ದಾಂಪತ್ಯದ ಕೆಲವೊಂದು ಕುತೂಹಲದ ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಜೊತೆಗೆ ಮದುವೆಯ ದಿನ ಉಂಟಾದ ಭಾರಿ ಗಲಾಟೆಯ ಬಗ್ಗೆಯೂ ಹೇಳಿಕೊಂಡಿದ್ದಾರೆ. ತಾವಿಬ್ಬರೂ ಭೇಟಿಯಾಗಿ ಒಂದೇ ತಿಂಗಳಾಗಿತ್ತು. ಅದಾಗಲೇ ಪ್ರೇಮ್​ ಅವರು ಮದುವೆ ಪ್ರಸ್ತಾಪವನ್ನು ನಮ್ಮ ಮನೆಗೆ ತಂದುಬಿಟ್ಟರು. ನನಗೆ ತುಂಬಾ ವಿಚಿತ್ರ ಎನಿಸಿತು. ಆದರೆ ನಮ್ಮಮ್ಮ ಹುಡುಗ ತುಂಬಾ ಒಳ್ಳೆಯವನು ಎಂದು ಹೇಳಿದ್ರು. ಇಷ್ಟೇ ಲವ್​ಸ್ಟೋರಿ. ಕೊನೆಗೆ ಮದ್ವೆನೇ ಆಯ್ತು ಎಂದು ಹೇಳಿದ್ದಾರೆ.

ಕೊರಗಜ್ಜನ ಸನ್ನಿಧಿಯಲ್ಲಿ ಪವಾಡ: ಕಪ್ಪು ಬಣ್ಣದ ಘಟನೆ ವಿವರಿಸಿದ ನಟಿ ರಕ್ಷಿತಾ ಪ್ರೇಮ್​

ಇದೇ ವೇಳೆ, ಮದುವೆಯ ದಿನ ದಿನ ಮಜವಾಗಿರೋ ವಿಷಯವೊಂದನ್ನು ನಟಿ ಶೇರ್​ ಮಾಡಿಕೊಂಡಿದ್ದಾರೆ. ಹೆಚ್ಚಿನವರ ಸಂಪ್ರದಾಯದ ಪ್ರಕಾರ ಮಾವನೇ ಮಗಳನ್ನು ಮದುವೆಯ ಮಂಟಪಕ್ಕೆ ಕರೆತರಬೇಕು. ಆದರೆ ನನ್ನನ್ನು ಕರೆತರಬೇಕಿದ್ದ ಮಾವ ನಾಪತ್ತೆಯಾಗಿಬಿಟ್ಟಿದ್ರು. ಬಹಳ ಕೋಲಾಹಲವೇ ನಡೆದು ಹೋಯ್ತು. ಹೇಳಿಕೇಳಿ ಪ್ರೇಮ್​ ಇವರು. ಎಲ್ಲವನ್ನೂ ದೊಡ್ಡದಾಗಿಯೇ  ಮಾಡಬೇಕು ಅವರಿಗೆ. ಇದೇ ಕಾರಣಕ್ಕೆ ಮದುವೆಯೂ ಸಕತ್​ ಗ್ರ್ಯಾಂಡ್​ ಇತ್ತು. ಬಹಳ ಜನ ಬಂದಿದ್ರು. ನಮ್ಮ ಮಾವ ಏನೋ ತರಲು ಹೊರಗೆ ಹೋಗಿದ್ದರು. ಆದರೆ ಸೆಕ್ಯುರಿಟಿಯವರು ಅವರನ್ನು ಒಳಗೆ ಬಿಡಲೇ ಇಲ್ಲ. ನಮ್​ ಮಾವ, ನಾನು ಮಾವ ಕಣೋ, ಹೋಗಬೇಕು ಎಂದ್ರೂ ಸೆಕ್ಯುರಿಟಿಯವರು ಎಲ್ಲರೂ ಹೀಗೆಯೇ ಹೇಳ್ಕೊಂಡು ಬರೋದು, ಬಿಡಲ್ಲ ಅಂದುಬಿಟ್ರು. ಆಮೇಲೆ ಅವರು ಯಾರ ಮೂಲಕವೇ ಹೇಳಿಸಿ ಒಳಗೆ ಬರುವಷ್ಟರಲ್ಲಿ ಸುಸ್ತಾಗೋಯ್ತು ಎಂದು ಅಂದು ನಡೆದ ಘಟನೆಯನ್ನು ನಟಿ ಹೇಳಿಕೊಂಡಿದ್ದಾರೆ. 

ಪತಿ ಪ್ರೇಮ್ ಮಾತಾಡುವಾಗ  ಜಾಸ್ತಿ ತಪ್ಪು ಮಾಡುತ್ತಾರೆ. ಅವರು ಸಣ್ಣದ್ದು ಯಾವಾಗ್ಲೂ ಮಾಡೋದೇ ಇಲ್ಲ. ತಲೆಯ ತುಂಬ ದೊಡ್ಡದ್ದೇ ತುಂಬಿರುತ್ತದೆ. ಅದೇ ಕಾರಣಕ್ಕೆ ತಪ್ಪು ಜಾಸ್ತಿನೇ ಮಾಡ್ತಾರೆ. ಅದೇ ರೀತಿ ಅವರ ಕನಸು ಕೂಡ. ಅವರು ಮಂಡ್ಯದಿಂದ ಬಂದಿರೋ ಕಾರಣ ಹ ಮತ್ತು ಅ ಕಾರ ಸಕತ್​ ಕನ್​ಫ್ಯೂಸ್​. ನಾವೆಲ್ಲಾ ಈಗಲೂ ಅದರ ಬಗ್ಗೆ ನಗ್ತೇವೆ.  ಹ ಮತ್ತು ಅ ಕಾರ ತಪ್ಪು ಹೇಳುವ ಕುರಿತೇ ಕೊನೆಗೆ ಒಂದು ಪದ್ಯವನ್ನೂ ಬರೆದುಬಿಟ್ಟರು ಎಂದು ಸ್ಮರಿಸಿಕೊಂಡಿದ್ದಾರೆ. ಹಾರು ಜನ ಹೀರೊಗಳನ್ನು ಹಾಕೊಂಡು ಸಿನಿಮಾ ಮಾಡ್ತಿದ್ದೀನಿ ಎಂದಿದ್ದರು. ಅದು ಇಂದಿಗೂ ಟ್ರೋಲ್ ಆಗುತ್ತಿದೆ ಎಂದು ಹೇಳಿದ್ದಾರೆ. 

ಅನನ್ಯಾ- ಆದಿತ್ಯ ಬ್ರೇಕಪ್​ ಕನ್​ಫರ್ಮ್​? ಬಾಯ್​ಫ್ರೆಂಡ್​​ ಜಾಗದಲ್ಲಿ ನಾಯಿ ಇಟ್ಟುಕೊಂಡ ನಟಿ!

 

click me!