ರಾಘಣ್ಣಗೆ ಪೇಸ್‌ಮೇಕರ್‌ ಅಳವಡಿಕೆ, ಆಸ್ಪತ್ರೆಯಿಂದ ಡಿಸ್ಚಾರ್ಜ್‌

Kannadaprabha News   | Asianet News
Published : Feb 19, 2021, 11:09 AM ISTUpdated : Feb 19, 2021, 11:12 AM IST
ರಾಘಣ್ಣಗೆ ಪೇಸ್‌ಮೇಕರ್‌ ಅಳವಡಿಕೆ, ಆಸ್ಪತ್ರೆಯಿಂದ ಡಿಸ್ಚಾರ್ಜ್‌

ಸಾರಾಂಶ

ಶೂಟಿಂಗ್‌ ನನ್ನನ್ನು ಕಾಪಾಡಿತು| ಬೆಂಗಳೂರಿನ ಮಲ್ಲೇಶ್ವರದ ನೂರು ಅಡಿ ರಸ್ತೆಯಲ್ಲಿರುವ ಮಧು ಶೂಟಿಂಗ್‌ ಹೌಸ್‌ನಲ್ಲಿ ಬೆಳಕು ಹೆಸರಿನ ಚಿತ್ರದ ಶೂಟಿಂಗ್‌ನಲ್ಲಿದ್ದಾಗ ಹೃದಯ ಬಡಿತದಲ್ಲಿ ಸ್ವಲ್ಪ ಏರುಪೇರು| ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಹೋಗಿ ತಪಸಾಣೆ| ವಾರದಲ್ಲಿ ಶೂಟಿಂಗ್‌ಗೆ ಹೋಗುತ್ತೇನೆ: ರಾಘವೇಂದ್ರ ರಾಜ್‌ಕುಮಾರ್‌| 

ಬೆಂಗಳೂರು(ಫೆ.19): ತೀವ್ರ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ನಟ ರಾಘವೇಂದ್ರ ರಾಜ್‌ಕುಮಾರ್‌ ಗುರುವಾರ ಡಿರ್ಚಾರ್ಜ್‌ ಆಗಿ ಮನೆಗೆ ತೆರಳಿದ್ದಾರೆ. 

ಈ ಸಂದರ್ಭದಲ್ಲಿ ಮಾತನಾಡಿದ, ‘ಆ್ಯಂಜಿಯೊಗ್ರಾಮ್‌ ಮಾಡಿದ ಬಳಿಕ ಹೃದಯಕ್ಕೆ ಪೇಸ್‌ಮೇಕರ್‌ (ಹೃದಯಬಡಿತ ನಿಯಂತ್ರಿಸುವ ಉಪಕರಣ) ಹಾಕಿದ್ದಾರೆ. ಇನ್ನೊಂದು ವಾರದಲ್ಲಿ ಮತ್ತೆ ಶೂಟಿಂಗ್‌ಗೆ ವಾಪಾಸಾಗಲಿದ್ದೇನೆ’ ಎಂದು ತಿಳಿಸಿದ್ದಾರೆ. 

ರಾಘವೇಂದ್ರ ರಾಜ್‌ಕುಮಾರ್‌ ಆರೋಗ್ಯದಲ್ಲಿ ಚೇತರಿಕೆ;ಇಂದು ಆಸ್ಪತ್ರೆಯಿಂದ ಡಿಸ್‌ಚಾಜ್‌ರ್‍ ಸಾಧ್ಯತೆ!

‘ಶೂಟಿಂಗ್‌ ನನ್ನನ್ನು ಕಾಪಾಡಿತು. ಬೆಂಗಳೂರಿನ ಮಲ್ಲೇಶ್ವರದ ನೂರು ಅಡಿ ರಸ್ತೆಯಲ್ಲಿರುವ ಮಧು ಶೂಟಿಂಗ್‌ ಹೌಸ್‌ನಲ್ಲಿ ಬೆಳಕು ಹೆಸರಿನ ಚಿತ್ರದ ಶೂಟಿಂಗ್‌ನಲ್ಲಿದ್ದಾಗ ಹೃದಯ ಬಡಿತದಲ್ಲಿ ಸ್ವಲ್ಪ ಏರುಪೇರು ಕಾಣಿಸಿತು. ತಕ್ಷಣ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಹೋಗಿ ತಪಸಾಣೆ ಮಾಡಿಸಿಕೊಳ್ಳಲಾಯಿತು. ಶೂಟಿಂಗ್‌ ಇಲ್ಲದೆ ಬೇರೆ ಕಡೆ ಇದ್ದಿದ್ದರೆ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡ ಕೂಡಲೇ ಆಸ್ಪತ್ರೆಗೆ ಬರಲು ಆಗುತ್ತಿರಲಿಲ್ಲ. ಈ ಹಿಂದೆ ಸ್ಟೊ್ರೕಕ್‌ ಆದಾಗ ಇದೇ ಆಸ್ಪತ್ರೆಗೆ ಬಂದು ಚಿಕಿತ್ಸೆಗಾಗಿ ದಾಖಲಾಗಿದ್ದೆ. ಅಭಿಮಾನಿಗಳ ಆಶೀರ್ವಾದ, ಕುಟುಂಬದವರ ಪ್ರೀತಿ ನನ್ನನ್ನು ಕಾಪಾಡುತ್ತದೆ’ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಅವರ ಪುತ್ರ ವಿನಯ್‌ ರಾಜ್‌ಕುಮಾರ್‌, ನಟ ಶಿವರಾಜ್‌ಕುಮಾರ್‌ ಹಾಗೂ ಕುಟುಂಬದವರು ಜತೆಯಲ್ಲಿದ್ದರು.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?