
ರಾಷ್ಟ್ರಪ್ರಶಸ್ತಿ ವಿಜೇತ, ನೇತ್ರದಾನದ (Eye Donation) ಬಗ್ಗೆ ಅರಿವು ಮೂಡಿಸುವ ‘ಅಕ್ಷಿ’ (Akshi) ಚಿತ್ರ ಡಿ.3ರಂದು ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಜಾಕ್ ಮಂಜುನಾಥ್ (Jack Manju) ಮಾತನಾಡಿದರು. ಈ ಸಿನಿಮಾವನ್ನು ಜಾಕ್ ಮಂಜು ಅವರೇ ವಿತರಣೆ ಮಾಡಲಿದ್ದಾರೆ.
ನಿರ್ದೇಶಕ ಮನೋಜ್ ಕುಮಾರ್ (Manoj Kumar), ‘ಈ ಸಿನಿಮಾದ ಆಡಿಯೋ ಹಕ್ಕನ್ನು ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಪಿಆರ್ಕೆ (PRK) ಸ್ಟುಡಿಯೋ ಪಡೆದುಕೊಂಡಿತ್ತು. ಅಪ್ಪು ಗತಿಸುವ ಕೆಲವು ದಿನಗಳ ಮುಂಚೆ ನಿಮ್ಮ ಸಿನಿಮಾ ನೋಡಬೇಕು, ಪ್ರೈವೇಟ್ ಲಿಂಕ್ (Priavte link) ಕಳಿಸಿ ಅಂದಿದ್ದರು. ರಾತ್ರಿಯಿಡೀ ನಿದ್ದೆ ಬಿಟ್ಟು ಪ್ರೈವೇಟ್ ಲಿಂಕ್ ಕ್ರಿಯೇಟ್ ಮಾಡಿ ಅವರಿಗೆ ಕಳಿಸಿದ್ದೆ. ಇದೀಗ ಅವರ ಅನುಪಸ್ಥಿತಿಯಲ್ಲಿ ಸಿನಿಮಾ ಬಿಡುಗಡೆ ಮಾಡಬೇಕಾಗಿರುವುದು ನೋವಿನ ಸಂಗತಿ. ಡಾ.ರಾಜ್ (Dr. Rajkumar) ನಿಧನದ ಬಳಿಕ ಕೆಲವು ಹಳ್ಳಿಗಳಲ್ಲಿ ನಡೆದ ಘಟನೆಗಳಿಂದ ಸ್ಫೂರ್ತಿ ಪಡೆದು ಈ ಚಿತ್ರ ನಿರ್ಮಿಸಲಾಗಿದೆ. ಮಕ್ಕಳ ಮೂಲಕ ನೇತ್ರದಾನದ ಅರಿವು ಮೂಡಿಸುವ ಕತೆ ಚಿತ್ರದ್ದು’ ಎಂದರು.
"
ನಿರ್ಮಾಪಕ ಕಲಾದೇಗುಲ ಶ್ರೀನಿವಾಸ್ (Kaladegula Srinivas), ‘ಪುನೀತ್ ಈ ಸಿನಿಮಾ ನೋಡಿದ್ದಾರೆ ಅಂತ ನನ್ನ ಒಳಮನಸ್ಸು ಹೇಳುತ್ತಿದೆ. ಒಂದು ವೇಳೆ ನೋಡದಿದ್ದರೂ ಅವರ ಕಣ್ಣುಗಳು ಚಿತ್ರ ನೋಡುವ ಭರವಸೆ ಇದೆ’ ಎಂದರು. ಈ ಚಿತ್ರದ ‘ಕಣ್ಣೊಂದು ಹೇಳಿತು, ಬದುಕಲು ಬಿಡಿ ನನ್ನನ್ನು..’ ಹಾಡನ್ನು ಪುನೀತ್ ಅವರಿಗೆ ಅರ್ಪಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಗುಪ್ತಾ ಸೀರೀಸ್ ಮಾಲಿಕ ವೆಂಕಟೇಶ್ ಗುಪ್ತಾ ಹಾಗೂ ಚಿತ್ರತಂಡದವರು ಇದ್ದರು.
ನಟಿ ಇಳಾ ವಿಟ್ಲ ಮಾತನಾಡಿ, ‘ನನಗೆ ನೆಗೆಟಿವ್ ರೋಲ್ (Negative role) ಮಾಡಿ ಮಾಡಿ ಸಾಕಾಗಿತ್ತು. ಆತ್ಮತೃಪ್ತಿಯ ಕೆಲಸಕ್ಕಾಗಿ ಕಾಯುತ್ತಿದ್ದೆ. ಈ ಪಾತ್ರ ಆ ತೃಪ್ತಿ ತಂದುಕೊಟ್ಟಿತು. ಕಲಾವಿದರನ್ನು ಒಂದೇ ಪಾತ್ರಕ್ಕೆ ಫಿಕ್ಸ್ ಮಾಡಬೇಡಿ. ಅವರ ಪ್ರತಿಭೆ ಹೊರಬರಲು ಅವಕಾಶ ಕೊಡಿ’ ಎಂದು ವಿನಂತಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.