
ಲವ್ ಮಾಕ್ಟೇಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅಮೃತಾ ಅಯ್ಯಂಗಾರ್ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದರು. ಸ್ಯಾಂಡಲ್ವುಡ್ ಕರೀನಾ ಕಪೂರ್ ಅಂತಲೇ ಕಿರೀಟ ಪಡೆದಿರುವ ಅಮೃತಾ ಈಗ ಕಥೆ ಮತ್ತು ಪಾತ್ರಗಳನ್ನು ಬರೆಯಲು ಮುಂದಾಗಿದ್ದಾರೆ. ನಮಗೆ ನಾವೇ ಅವಕಾಶಗಳು ಕೆಲಸಗಳನ್ನು ಸೃಷ್ಟಿ ಮಾಡಿಕೊಳ್ಳಬೇಕು ಎಂದು ಅಮೃತಾ ಈ ನಿರ್ಧಾರ ಮಾಡಿದ್ದಾರೆ. ಈ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
'ನನ್ನ ಸಿನಿಮಾ ಇಂಡಸ್ಟ್ರಿಯಲ್ಲಿ ಮೆಂಟಲ್ ಇಲ್ನೆಸ್ನ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ ಅಥವಾ ತಪ್ಪಾಗಿ ತೋರಿಸಿದ್ದಾರೆ. ಸಿನಿಮಾದಲ್ಲಿ ಮಹಿಳಾ ಪಾತ್ರ ಕೋಪಗೊಂಡಾಗ ಆ ನೋವು ಆ ಗಾಯದ ಆಳವನ್ನು ತೋರಿಸಬೇಕಾದ ರೀತಿಯಲ್ಲಿ ತೋರಿಸುವುದಿಲ್ಲ' ಎಂದು ಅಮೃತಾ ಹೇಳಿದ್ದಾರೆ.
'ಚಿಕ್ಕವಳಿಂದ ನಾನು ಸಾಕಷ್ಟು ಜನರನ್ನು ನೋಡಿಕೊಂಡು ಬೆಳೆದಿರುವ ಹೀಗಾಗಿ ನನ್ನ ಯೋಚನೆಯಲ್ಲಿ ಹೇಳದೆ ಇರುವ ಅದೆಷ್ಟೋ ಕಥೆಗಳು ಇದೆ. ಆದರೆ ನಾನು ಅಂದುಕೊಂಡ ರೀತಿಯಲ್ಲಿ ಪಾತ್ರವನ್ನು ಪ್ರದರ್ಶಿಸಲು ಅವಕಾಶ ಸಿಗಲಿಲ್ಲ. ಮಿಲನಾ-ಕೃಷ್ಣ ಮತ್ತು ಧನಂಜಯ್ ಜೊತೆ ಕೆಲಸ ಮಾಡುವಾಗ ನನಗೆ ಒಂದು ಅರ್ಥವಾಗಿದ್ದು ಏನೆಂದರೆ ಇವರು ಹಲವು ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಇದ್ದಾರೆ. ಅವಕಾಶಗಳು ಕಡಿಮೆ ಆದಾಗ ಅವರೇ ಕೆಲಸ ಸೃಷ್ಟಿ ಮಾಡಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿಯಾಗಿರುವುದು ಲವ್ ಮಾಕ್ಟೇಲ್ ಮತ್ತು ಬಡವ ರಾಸ್ಕಲ್ ಸಿನಿಮಾ. ಹೀಗಾಗಿ ನಾನೇ ಪಾತ್ರ ಬರೆಯಲು ಶುರು ಮಾಡಿದೆ' ಎಂದು ಟೈಮ್ಸ್ ಅಫ್ ಇಂಡಿಯಾ ಸಂದರ್ಶನದಲ್ಲಿ ಅಮೃತಾ ಮಾತನಾಡಿದ್ದಾರೆ.
ದರ್ಶನ್ ಮೇಲಿನ ಕೋಪ ನನ್ನ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ ಅನ್ಸುತ್ತೆ: ದಿನಕರ್ ತೂಗುದೀಪ ಬೇಸರ
'ನನ್ನ ತಾಯಿ ಜೊತೆ ನಾನು ತುಂಬಾನೇ ಕ್ಲೋಸ್ ಆಗಿರುವೆ. ಆಕೆ ಶಾಲಾ ಶಿಕ್ಷಕಿ...ನಾನು ಸ್ಕೂಲ್ ಮತ್ತು ಕಾಲೇಜ್ನಲ್ಲಿ ಇದ್ದಾಗ ಆಕೆಗೆ ಹೇಳಿಕೊಡುತ್ತಿದ್ದಿದ್ದು. ಆಕ್ಟಿಂಗ್ ಶುರು ಮಾಡಿದ ಮೇಲೂ ಒಂದು ಪಾತ್ರದ ಭಾವನೆಯನ್ನು ಹೇಗೆ ವ್ಯಕ್ತ ಪಡಿಸುವುದು ಎಂದು ತಾಯಿಯಿಂದ ಹೇಳಿಸಿಕೊಳ್ಳುತ್ತಿದ್ದೆ. ಆಕೆ ಜೀವನದಲ್ಲಿ ತುಂಬಾ ನೋಡಿದ್ದಾರೆ. ಈಗ ಸೊಸೈಟಿ ಇರುವಂತೆ ಆಗ ಇರಲಿಲ್ಲ...ಆಗ ಡಿವೋರ್ಸ್ ಪಡೆದಿರುವ ಮಹಿಳೆಯರನ್ನು ನೋಡುವ ರೀತಿನೇ ಬೇರೆ ಇತ್ತು. 26 ವರ್ಷಗಳ ಕಾಲ ನನ್ನನ್ನು ಬೆಳೆಸಲು ತುಂಬಾ ಗಟ್ಟಿಯಾಗಿ ನಿಂತರು. ಮನೆಯಲ್ಲಿಯೇ ಒಳ್ಳೆಯ ಉದಾಹರಣೆ ಇರುವಾ ನಾನು ಸ್ಫೂರ್ತಿ ಪಡೆಯಲು ಎಲ್ಲಿಯೂ ಹುಡುಕುವುದು ಬೇಡ' ಎಂದಿದ್ದಾರೆ ಅಮೃತಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.