ಕೊಲೆ ಪ್ರಕರಣ, ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ, ಬ್ಯಾನ್ ಆಗ್ತಾರಾ ನಟ ದರ್ಶನ್?

Published : Jun 13, 2024, 04:52 PM ISTUpdated : Jun 13, 2024, 05:34 PM IST
ಕೊಲೆ ಪ್ರಕರಣ, ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ, ಬ್ಯಾನ್ ಆಗ್ತಾರಾ ನಟ ದರ್ಶನ್?

ಸಾರಾಂಶ

ಚಲನಚಿತ್ರವಾನಿಜ್ಯಮಂಡಳಿ ಪದಾಧಿಕಾರಿಗಳು ನಾಳೆ ಹತ್ಯೆಯಾದ ರೇಣುಕಾಸ್ವಾಮಿ ಕುಟುಂಬದವರನ್ನು ಭೇಟಿಯಾಗುತ್ತಿದ್ದಾರೆ. ದರ್ಶನ್ ಪರ ನಾವಿಲ್ಲ, ಅನ್ಯಾಯ ಯಾರಿಗೆ ಆಗಿದೆಯೋ ಅವರ ಪರ ಕನ್ನಡ ಚಿತ್ರರಂಗ ಇರುತ್ತದೆ..

ಕನ್ನಡದ ನಟ ದರ್ಶನ್ (Actor Darshan) ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಆಗಿರುವ ಹಿನ್ನೆಲೆಯಲ್ಲಿ, ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ (KFCC) ಮಹತ್ವದ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ದರ್ಶನ್ ಕುರಿತು ಹಲವು ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಹಾಗಿದ್ದರೆ ಯಾವೆಲ್ಲಾ ಅಂಶಗಳ ಮೇಲೆ ಈಗ ನಡೆಯುವ ಸಭೆಯಲ್ಲಿ ಚರ್ಚೆ ಆಗಬಹುದು? ಈ ಬಗ್ಗೆ ಸಿಕ್ಕ ಮಾಹಿತಿ ಇಲ್ಲಿದೆ..

ದರ್ಶನ್‌ ರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕಾ? ಈ ಬಗ್ಗೆ ಸಭೆಯಲ್ಲಿ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಒಮ್ಮೆ ಹಾಗೆ ಮಾಡಿದರೆ, ದರ್ಶನ್ ಜೊತೆ ಈಗಾಗಲೆ ಸಿನಿಮಾ ಮಾಡುತ್ತಿರುವ ನಿರ್ಮಾಪಕರ  ಪಾಡೇನು..? ಈ ಬಗ್ಗೆ ಖಂಡಿತ ಚರ್ಚೆ ಆಗಲಿದೆ. ದರ್ಶನ್​ ಜೊತೆ ಸಿನಿಮಾ ಮಾಡಲು ಈಗಾಗಲೆ ಅಡ್ವಾನ್ಸ್ ಹಣ ಕೊಟ್ಟಿರುವ ನಿರ್ಮಾಪಕರ ಕತೆಯೇನು..? ಈ ಸಂಗತಿ ಕೂಡ ಬಹು ಮುಖ್ಯವಾಗಿದ್ದು ಈ ಬಗ್ಗೆ ಚರ್ಚೆ ನಡೆಯಲಿದೆ. 

ಮಾಲಾಶ್ರೀ ಚಿತ್ರಕ್ಕೆ ರವಿಚಂದ್ರನ್‌ಗೆ ಸಹಾಯ ಮಾಡಿದ್ರು ನಟಿ ಖುಷ್ಬೂ; ಇದೇನಿದು ಜಾದೂ ಗುರೂ!

ಡೆವಿಲ್ ಸಿನಿಮಾ ಈಗಾಗಲೆ 80 ಪರ್ಸೆಂಟ್ ಚಿತ್ರೀಕರಣ ನಡೆದಿದೆ. 40 ಕೋಟಿ ಬಜೆಟ್​​ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ದರ್ಶನ್ ಸಂಭಾವನೆ 22 ಕೋಟಿ ಎನ್ನಲಾಗಿದೆ. ನಿರ್ಮಾಪಕಿ ಶೈಲಾಜಾ ನಾಗ್ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ದರ್ಶನ್ ಹೊಸ ನಿರ್ಮಾಪಕರುಗಳು ಈಗಾಗಲೆ ನಟ ದರ್ಶನ್​ಗೆ ಅಡ್ವಾನ್ಸ್ ಕೊಟ್ಟಿದ್ದಾರೆನ್ನಲಾಗಿದೆ.  ಆ ಚಿತ್ರಗಳ ಕತೆ ಏನು..?

ನಾವೇನು ಕೊಡುತ್ತೇವೋ ಅದೇ ನಮಗೆ ವಾಪಸ್ ಬರುತ್ತೆ; ರಾಕಿಂಗ್ ಸ್ಟಾರ್ ಹೇಳಿಕೆಗೆ ನೀವೇನಂತೀರಾ?

ಚಲನಚಿತ್ರವಾನಿಜ್ಯಮಂಡಳಿ ಪದಾಧಿಕಾರಿಗಳು ನಾಳೆ ಹತ್ಯೆಯಾದ ರೇಣುಕಾಸ್ವಾಮಿ ಕುಟುಂಬದವರನ್ನು ಭೇಟಿಯಾಗುತ್ತಿದ್ದಾರೆ. ದರ್ಶನ್ ಪರ ನಾವಿಲ್ಲ, ಅನ್ಯಾಯ ಯಾರಿಗೆ ಆಗಿದೆಯೋ ಅವರ ಪರ ಕನ್ನಡ ಚಿತ್ರರಂಗ ಇರುತ್ತದೆ ಎಂಬುದನ್ನು ಧೃಢಪಡಿಸಲು ಚಲನ ಚಿತ್ರ ವಾಣಿಜ್ಯ ಮಂಡಳಿ ಮುಂದಾಗಿದೆ ಎನ್ನಲಾಗಿದೆ. ಇದೀಗ ನಡೆಯುತ್ತಿರುವ ಸಭೆಯಲ್ಲಿ ಈ ಕುರಿತು ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ದಯತೆ ದಟ್ಟವಾಗಿದೆ. 

ಮಧ್ಯರಾತ್ರಿಯಲ್ಲಿ ನಟಿ ನಯನತಾರಾ ಅಪಾರ್ಟ್‌ಮೆಂಟ್‌ನಲ್ಲಿ ಏನ್ ಮಾಡ್ತಿದ್ರು, ಗಲಾಟೆ ಯಾಕಾಯ್ತು?

ಸಿಕ್ಕ ಮಾಹಿತಿ ಪ್ರಕಾರ, ಹತ್ಯೆಯಾದ ರೇಣುಕಾಸ್ವಾಮಿ ಕುಟುಂಬದ ಪರ ಚಲನಚಿತ್ರ ವಾಣಿಜ್ಯ ಮಂಡಳಿ ನಿಲ್ಲಲಿದೆ. ಕೆಎಫ್​ಸಿಸಿ (Karnataka Film Chamber) ರೇಣುಕಾಸ್ವಾಮಿ ಕುಟಂಬದ ದುಃಖಕ್ಕೆ ಹೆಗಲು ನೀಡಲು ಮುಂದಾಗಿದೆ ಎನ್ನಲಾಗಿದೆ. ಕುಟುಂಬಕ್ಕೆ ಕೇವಲ ಸಮಾಧಾನ ಮಾಡದೇ ಹಣದ ಸಹಾಯವನ್ನೂ ಮಾಡುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ. ಈ ಬಗ್ಗೆ ಮಹತ್ವದ ನಿರ್ಧಾರ ಹೊರಬೀಳಲಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?