ಹೈದರಾಬಾದ್‌ನಲ್ಲಿ ಮನೆ ಖರೀದಿಸಿದ ರಶ್ಮಿಕಾ; ಕರ್ನಾಟಕ ತೊರೆದರೇ?

Published : Sep 20, 2020, 02:56 PM IST
ಹೈದರಾಬಾದ್‌ನಲ್ಲಿ ಮನೆ ಖರೀದಿಸಿದ ರಶ್ಮಿಕಾ; ಕರ್ನಾಟಕ ತೊರೆದರೇ?

ಸಾರಾಂಶ

ವಿಳಾಸ ಬದಲಾಯಿಸಿದ ರಶ್ಮಿಕಾ ಮಂದಣ್ಣ. ಐಷಾರಾಮಿ ಮನೆ ಹೊಂದಿದ್ದರೂ ದುಬಾರಿ ಮನೆ ಖರೀದಿಸಲು ಕಾರಣವೇನು?

ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ನಟಿ ರಶ್ಮಿಕಾ ಮಂದಣ್ಣ ಈಗ ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಬ್ಯಾಕ್‌ ಟು ಬ್ಯಾಕ್‌ ಹಿಟ್‌ ನೀಡುತ್ತಿರುವ ರಶ್ಮಿಕಾ ಈಗ ಮನೆ ವಿಳಾಸ ಬದಲಾಯಿಸಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ?

'ಮಂದಣ್ಣ ಮನೆ ಕೋತಿ ದತ್ತು ಪಡೆಯಲು ಯಾರಿದ್ದೀರಾ?'; ರಶ್ಮಿಕಾ ಫೋಟೋ ವೈರಲ್!

ಕನ್ನಡದಲ್ಲಿ 4 ಸಿನಿಮಾ ಹಾಗೂ ತೆಲುಗುನಲ್ಲಿ 6 ಸಿನಿಮಾ ಕಥೆ ಹಿಡಿದು ಬ್ಯುಸಿಯಾಗಿರವ ರಶ್ಮಿಕಾ ಈಗ ಅಲ್ಲೆ ನೆಲಸುವ ಪ್ಲಾನ್ ಮಾಡಿದ್ದಾರೆ. ಈ ಕಾರಣಕ್ಕೆ ಹೈದಾರಾಬಾದ್‌ನಲ್ಲಿ ದುಬಾರಿ ಬೆಲೆಯ ಮನೆಯನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಶಂಶಾಬಾದ್‌ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಗೊಚ್ಚಿಬೋಲಿ ಏರಿಯಾದಲ್ಲಿ ನಾಲ್ಕು ಬೆಡ್‌ರೂಮಿನ್ ವಿಶಾಲವಾದ ಮನೆಯನ್ನು ಖರೀದಿ ಮಾಡಿದ್ದಾರೆ. ತಮ್ಮ ಸಿನಿಮಾ ಮಾತುಕಥೆ ಹಾಗೂ ಸಣ್ಣ ಪುಟ್ಟ ಫೋಟೋ ಶೂಟ್‌ಗಳನ್ನು ಅಲ್ಲಿಯೇ ಮಾಡುತ್ತಿದ್ದಾರೆ ಎನ್ನಲಾಗಿದೆ.

ಮೂಲತಃ ಕೊಡಗಿನ ಕುವರಿಯಾಗಿರುವ ರಶ್ಮಿಕಾ ಮಂದಣ್ಣ ಮನೆ ಇರುವುದು ವಿರಾಜ್‌ಪೇಟೆಯಲ್ಲಿ. ತಂದೆ, ತಾಯಿ ಹಾಗೂ ಸಹೋದರಿ ಅಲ್ಲಿಯೇ ವಾಸವಿದ್ದಾರೆ. ತೆಲುಗು ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾದ ಕಾರಣ ಪ್ರಾಯಣ ಕಡಿಮೆ ಮಾಡಿಕೊಳ್ಳಲು ಹೈದರಾಬಾದ್‌ನಲ್ಲಿ ಮನೆ ಖರೀದಿಸಿದ್ದಾರೆ.

ಅನುಷ್ಕಾ - ಸಮಂತಾ: ಮೇಕಪ್ ಇಲ್ಲದೇ ಹೇಗೆ ಕಾಣ್ತಾರೆ ನೋಡಿ...!

ನೆಟ್ಟಿಗರು ಆಕ್ರೋಶ:

ರಶ್ಮಿಕಾ ಹೈದರಾಬಾದ್‌ನಲ್ಲಿ ಮನೆ ಖರೀದಿ ಮಾಡಿರುವ ವಿಚಾರ ಕೇಳಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವಕಾಶ ಕೊಟ್ಟಿದ್ದು ಕನ್ನಡ ಚಿತ್ರರಂಗ, ಕರ್ನಾಟಕ ಆದರೆ ಹುಡುಕಿಕೊಂಡು ಹೋಗಿದ್ದು ತೆಲುಗು ಚಿತ್ರರಂಗಕ್ಕೆ ಅದಿಕ್ಕೆ ಅಲ್ಲಿಯೇ ಒಂದು ಮನೆ ಬೇರೆ ಎಂದು ಗರಂ ಆಗಿದ್ದಾರೆ.

ಒಟ್ಟಿನಲ್ಲಿ ನಮ್ಮ ಕರ್ನಾಟಕದ ಅದರಲ್ಲೂ ಕನ್ನಡ ಚಿತ್ರರಂಗದ ಮೂಲಕ ಅಭಿನಯ ಕಲಿತ ಹೆಣ್ಣು ಮಕ್ಕಳು ಬೇರೆ ಭಾಷೆಯ ಚಿತ್ರರಂಗವನ್ನು ಆಳುತ್ತಿರುವ ನಮ್ಮ ಹೆಮ್ಮೆ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗೆಲುವು ಕೊಟ್ಟ ನಿರ್ದೇಶಕರು ಕಾಣೆಯಾಗಿದ್ದಾರೆ: ಸ್ಯಾಂಡಲ್‌ವುಡ್‌ನಲ್ಲಿ ಏನಾಗುತ್ತಿದೆ?
ಕನ್ನಡದ ಚೆಲುವೆಗೆ ಬಂಪರ್‌ ಚಾನ್ಸ್‌: ಯಶ್‌, ಜೂ.ಎನ್‌ಟಿಆರ್‌ ಬಳಿಕ ರುಕ್ಮಿಣಿ ವಸಂತ್‌ ಮುಂದಿನ ಹೆಜ್ಜೆ ಏನು?