ಅಮ್ಮನಿಗಾಗಿ ಜಗ್ಗೇಶ್ ಆಣೆ ಇಟ್ಟ ಲಿಂಗವಿದು; 'ನಾನು ಯಾವ ತಪ್ಪು ಮಾಡುವುದಿಲ್ಲ'!

Published : Nov 03, 2020, 04:35 PM IST
ಅಮ್ಮನಿಗಾಗಿ ಜಗ್ಗೇಶ್ ಆಣೆ ಇಟ್ಟ ಲಿಂಗವಿದು; 'ನಾನು ಯಾವ ತಪ್ಪು ಮಾಡುವುದಿಲ್ಲ'!

ಸಾರಾಂಶ

ಅಧ್ಯಾತ್ಮದ ಕಡೆ ಹೆಚ್ಚಿನ ಗಮನ ಕೊಡುತ್ತಿರುವ ಜಗ್ಗೇಶ್. ತಾಯಿಗಾಗಿ ಶಿವಲಿಂಗದ ಮೇಲೆ ಆಣೆ ಇಟ್ಟ ಕ್ಷಣದ ಬಗ್ಗೆ ಬರೆದಿದ್ದಾರೆ.  

ಕಾಮಿಡಿ ಕಿಂಗ್, ಚಿಗರುತ್ತಿರುವ ಕಲಾವಿದರಿಗೆ ಸಾಥ್‌ ಕೊಡುವ ಅಣ್ಣ, ಪ್ರೀತಿಸಿದರೆ ಹೀಗೇ ಪ್ರೀತಿಸಬೇಕು ಎನ್ನುವ ಪತಿ, ಜೀನದಲ್ಲಿ ಬಾಳಿದರೆ ಇಂಥ ಜೀವನ ಬಾಳಬೇಕೆಂದು ಮಾರ್ಗದರ್ಶನ ಮಾಡುವ ತಂದೆ....ಎಲ್ಲವನ್ನೂ ಸರಿಸಮಾನವಾಗಿ ನಿಭಾಯಿಸಿ ಭೇಷ್ ಎಂನಿಸಿಕೊಂಡ ಜಗ್ಗೇಶ್‌ಗೆ ತಾಯಿಯೇ ದೇವರು.

ಜೂ. ಚಿರುಗೆ ವೆಲ್ಕಂ ಎಂದ ಜಗ್ಗೇಶ್; ಎಲ್ಲವೂ ರಾಯರ ಆಶೀರ್ವಾದ! 

ಆಣೆ ಮಾಡಿದ ಲಿಂಗ:
ಬಾಲ್ಯದಿಂದಲೂ ತುಂಟರಾಗಿದ್ದ ಜಗ್ಗೇಶ್ ಇದೇ ಶಿವಲಿಂಗದ ಮೇಲೆ ಒಮ್ಮೆ ಆಣೆ ಮಾಡಿದ್ದರಂತೆ. 'ಬಾಲ್ಯದಲ್ಲಿ ಅಮ್ಮ ನನಗೆ ಶಿವಪೂಜೆ ಮಾಡಿಸುತ್ತಿದ್ದ ಶಿವಲಿಂಗ. ಬದುಕಿನಲ್ಲಿ ನಾನು ಯಾವ ತಪ್ಪೂ ಮಾಡುವುದಿಲ್ಲವೆಂದು ಅಮ್ಮನಿಗಾಗಿ ಆಣೆ ಇಟ್ಟ ಲಿಂಗ. ಅಮ್ಮ ಕಾಲವಾಗುವವರೆಗೂ ಇಲ್ಲಿಯೇ ಶೋಡಷ ಸೋಮವಾರ ವ್ರತ  ಮಾಡುತ್ತಿದ್ದಳು. ನನ್ನ ಇಷ್ಟಲಿಂಗಕ್ಕೆ ಶರಣು ಶರಣಾರ್ಥಿ,' ಎಂದು ಬರೆದುಕೊಂಡಿದ್ದಾರೆ. 

 

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಜಗ್ಗೇಶ್, ಪ್ರತಿ ದಿನವೂ ರಾಯರ ಬೃಂದಾವನ ಫೋಟೋ ಶೇರ್ ಮಾಡುತ್ತಾ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆಶಿಸುತ್ತಾರೆ. ಯಾವ ಜಾತಿ-ಧರ್ಮ- ಭೇದ ಭಾವವೂ ಮಾಡದೆ ಎಲ್ಲಾ ಧರ್ಮೀಯ ಹಬ್ಬಗಳಿಗೂ ಶುಭ ಕೋರುತ್ತಾರೆ.  ಅಲ್ಲದೇ ಅಧ್ಯಾತ್ಮದ ಬಗ್ಗೆ ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೂ ಉತ್ತರಿಸುತ್ತಾರೆ. 

ಚಿತ್ರರಂಗದಲ್ಲಿ ಕಪ್ಪಗಿರುವುದು ತಪ್ಪಾ? ನಟ ವಿಜಯ್- ಜಗ್ಗೇಶ್‌ ವರ್ಣಭೇದ ಬಗ್ಗೆ ಮಾತು!

'ಹಸುವ ಹಿಂಬಾಲಿಸೋ ಕರುವಂತೆ ನಾನು ಅಧ್ಯಾತ್ಮ ದಾರಿ ತೋರುವ ಮಹನೀಯರನ್ನು ಅನುಸರಿಸುತ್ತೇನೆ. ಬಹುತೇಕರು ಸಾಂಸಾರಿಕ, ಲೌಕಿಕ ಸಾಮಾಜಿಕ, ಅರ್ಥಿಕ ಎಂದು ಇದ್ದಲ್ಲೇ ಇದ್ದು ಬಿಡುತ್ತಾರೆ. ನಾನು ಆ ಕೆಸರಲ್ಲಿ ಇದ್ದರೂ ನಿಧಾನವಾಗಿ ಅದಕ್ಕೆ ಅಂಟದೇ, ಕಮಲವಾಗಲು ಯತ್ನಿಸುತ್ತಿರುವೆ. ಮದವೇರಿದ ಆನೆಗೆ ಅಂಕುಶದಂತೆ, ಮದವೇರಿದ ಮನುಜನಿಗೆ ಭಕ್ತಿ ಎಂಬುವುದು ಅಂಕುಶವಿದ್ದಂತೆ,' ಎಂದು ಬರೆದುಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗೆಲುವು ಕೊಟ್ಟ ನಿರ್ದೇಶಕರು ಕಾಣೆಯಾಗಿದ್ದಾರೆ: ಸ್ಯಾಂಡಲ್‌ವುಡ್‌ನಲ್ಲಿ ಏನಾಗುತ್ತಿದೆ?
ಕನ್ನಡದ ಚೆಲುವೆಗೆ ಬಂಪರ್‌ ಚಾನ್ಸ್‌: ಯಶ್‌, ಜೂ.ಎನ್‌ಟಿಆರ್‌ ಬಳಿಕ ರುಕ್ಮಿಣಿ ವಸಂತ್‌ ಮುಂದಿನ ಹೆಜ್ಜೆ ಏನು?