
ಈ ಪೈಕಿ ಒಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಅಂದ ಹಾಗೆ ಐಶಾನಿ ಶೆಟ್ಟಿ ಕೈಯಲ್ಲಿರುವ ಮೂರು ಚಿತ್ರಗಳು ‘ನಮ್ ಗಣಿ ಬಿಕಾಂ ಪಾಸಾದ’, ‘ಧರಣಿ ಮಂಡಲ ಮಧ್ಯದೊಳಗೆ’ ಹಾಗೂ ಹೊಸದಾಗಿ ಒಪ್ಪಿಕೊಂಡ ‘ಹೊಂದಿಸಿ ಬರೆಯಿರಿ’. ಈಗಾಗಲೇ ‘ನಮ್ ಗಣಿ ಬಿಕಾಂ ಪಾಸಾದ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆಯಂತೆ.
ಗಣಿ ಜೊತೆ 10 ಲಕ್ಷ ಸಂಪಾದಿಸಲು ಮುಂದಾದ ಸ್ಯಾಂಡಲ್ವುಡ್ ನಟಿ!
ತುಂಬಾ ಹಿಂದೆಯೇ ‘ಗುಳ್ಟು’ ನವೀನ್ ಜೊತೆಗೆ ಒಪ್ಪಿಕೊಂಡಿದ್ದ ಚಿತ್ರದ ಪೋಸ್ಟರ್ ದೀಪಾವಳಿ ಹಬ್ಬಕ್ಕೆ ಬಿಡುಗಡೆ ಆಗಿದೆ. ಚಿತ್ರದ ಹೆಸರು ‘ಧರಣಿ ಮಂಡಲ ಮಧ್ಯದೊಳಗೆ’.
ಹಬ್ಬದ ಸಂಭ್ರಮದಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರೇ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದರು. ಶ್ರೀಧರ್ ಷಣ್ಮುಖ ಈ ಚಿತ್ರದ ನಿರ್ದೇಶಕರು. ಸದ್ಯ ಬಿಡುಗಡೆಯಾಗಿರುವ ಪೋಸ್ಟರ್ ಹೊಸತನದಿಂದ ಕೂಡಿದೆ. ನಿರೀಕ್ಷೆ ಹುಟ್ಟಿಸಿದೆ. ಇಡೀ ಸಿನಿಮಾದ ಕಥೆಯನ್ನು ಪೋಸ್ಟರ್ನಲ್ಲಿ ಹೇಳಿದ್ದು, ಕ್ರಿಯೇಟವ್ ಆಗಿದೆ. ಐಶಾನಿ ಅವರ ಮತ್ತೊಂದು ಸಿನಿಮಾ ‘ಹೊಂದಿಸಿ ಬರೆಯಿರಿ’. ನವೆಂಬರ್ 1 ರಂದು ಈ ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ಜಗನ್ನಾಥ್ ಎಂಬುವವರು ಈ ಚಿತ್ರವನ್ನು ನಿರ್ದೇಶಿಸಲಿದ್ದು ಪ್ರೀತಿ, ಸ್ನೇಹ ಹಾಗೂ ಸಂಬಂಧಗಳ ನೆರಳಿನಲ್ಲಿ ಇಡೀ ಸಿನಿಮಾ ಸಾಗುತ್ತದೆ.
ಪೂರ್ಣ ಪ್ರಮಾಣದ ನಟಿಯಾದ ಐಶಾನಿ ಶೆಟ್ಟಿ!
ನಟನೆಯಿಂದ ಒಂದಿಷ್ಟು ಬಿಡುವು ಮಾಡಿಕೊಂಡು ಓದು ಮುಗಿಸುವ ಜೊತೆಗೆ ಒಂದು ಕಿರು ಚಿತ್ರವನ್ನು ನಿರ್ದೇಶಿಸಿ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟ ಐಶಾನಿ ಶೆಟ್ಟಿ ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವುದು ಈ ಮೂಲಕ ಸಾಬೀತಾದಂತಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.