
ಸ್ಯಾಂಡಲ್ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ದಂಪತಿ ಡಿಸೆಂಬರ್ 11 ರಂದು ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಭೇಟಿ ನೀಡಿ ಹರಕೆಯನ್ನು ತೀರಿಸಿದ್ದಾರೆ.
ಶಿವಣ್ಣ ಒಬ್ಬರೇ ಹ್ಯಾಟ್ರಿಕ್ ಹೀರೋ: ದರ್ಶನ್
ಪಾರ್ವತಮ್ಮ ರಾಜ್ ಕುಮಾರ್ ತೀರಿಕೊಂಡ ದಿನದಿಂದ ಕುಟುಂಬದ ಹಿರಿಯಕ್ಕ ಆಗಿ ಜವಾಬ್ದಾರಿ ಹೊತ್ತು ತಾಯಿಯಂತೆ ಕುಟುಂಬ ನಡೆಸಿಕೊಂಡು ಬರುತ್ತಿದ್ದಾರೆ ಗೀತಾ ಶಿವರಾಜ್ಕುಮಾರ್. ಈ ಹಿಂದೆ ತಿರುಪತಿಗೆ ಅನೇಕ ಬಾರಿ ತಿರುಪತಿಗೆ ಭೇಟಿ ನೀಡಿರುವ ಗೀತಾ ಇದೇ ಮೊದಲ ಬಾರಿ ತಿಮ್ಮಪ್ಪನಿಗೆ ಸಂಪೂರ್ಣ ಮುಡಿ ಕೊಟ್ಟಿದ್ದಾರೆ.
ಇದರ ಬಗ್ಗೆ ಶಿವರಾಜ್ಕುಮಾರ್ ಟ್ಟಿಟರ್ನಲ್ಲಿ '2019 ರಲ್ಲಿ ಎಲ್ಲಾ ಕಷ್ಟಗಳಲ್ಲಿ ಕೈ ಹಿಡಿದ ಆ ತಿರುಪತಿ ತಿಮ್ಮಪ್ಪನಿಗೆ ನಮ್ಮ ಅರ್ಪಣೆ ' ಎಂದು ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.