ರಾಮನಗರ ಬಳಿ 54 ಎಕರೆ ಪ್ರದೇಶದಲ್ಲಿ ನಿಖಿಲ್ ಮದುವೆ, ಎಚ್‌ಡಿಕೆ ಸ್ಥಳ ಪರಿಶೀಲನೆ!

Published : Feb 06, 2020, 09:53 AM ISTUpdated : Feb 06, 2020, 10:25 AM IST
ರಾಮನಗರ ಬಳಿ 54 ಎಕರೆ ಪ್ರದೇಶದಲ್ಲಿ ನಿಖಿಲ್ ಮದುವೆ, ಎಚ್‌ಡಿಕೆ ಸ್ಥಳ ಪರಿಶೀಲನೆ!

ಸಾರಾಂಶ

ರಾಮನಗರ-ಚನ್ನಪಟ್ಟಣ ಮಧ್ಯೆ ನಿಖಿಲ್‌ ವಿವಾಹಕ್ಕೆ ಎಚ್‌ಡಿಕೆ ಸ್ಥಳಪರಿಶೀಲನೆ| ಅರ್ಚಕರಹಳ್ಳಿ ಬಳಿಯ 54 ಎಕರೆ ವಿಶಾಲ ಜಮೀನು ವೀಕ್ಷಣೆ

ರಾಮ​ನ​ಗರ[ಫೆ.06]: ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಪುತ್ರ ನಿಖಿಲ್‌ ಅವರ ವಿವಾಹ ಕಾರ್ಯ​ಕ್ರಮವನ್ನು ಅದ್ಧೂರಿಯಾಗಿ ನಡೆಸುವ ಸಲುವಾಗಿ ರಾಮ​ನ​ಗರ ಮತ್ತು ಚನ್ನ​ಪ​ಟ್ಟಣ ನಡುವೆ ಇರುವ ಅರ್ಚ​ಕ​ರ​ಹಳ್ಳಿ ಬಳಿಯ 54 ಎಕರೆ ವಿಶಾ​ಲ​ ಜಾಗ​ವನ್ನು ಬುಧವಾರ ಪರಿ​ಶೀ​ಲ​ನೆ ನಡೆ​ಸಿ​ದರು.

ರಾಮ​ನ​ಗರ ತಮಗೆ ರಾಜ​ಕೀ​ಯ​ವಾಗಿ ಜನ್ಮ ನೀಡಿದ ಜಿಲ್ಲೆ. ಹೀಗಾಗಿ ಜಿಲ್ಲೆ ಜನರ ಆಶೀ​ರ್ವಾದ ನನ್ನ ಮಗ​ನಿಗೂ ಸಿಗ​ಲಿ ಎಂಬ ಉದ್ದೇ​ಶ​ದಿಂದ ರಾಮ​ನ​ಗರ ಮತ್ತು ಚನ್ನ​ಪ​ಟ್ಟಣ ಮಧ್ಯ​ದಲ್ಲಿ ಪುತ್ರ ನಿಖಿಲ್‌ ಮದುವೆ ಸಮಾ​ರಂಭ ಆಯೋ​ಜನೆ ಮಾಡು​ವು​ದಾಗಿ ಕುಮಾ​ರ​ಸ್ವಾಮಿ ಹೇಳಿ​ದ್ದರು. ಅದ​ರಂತೆಯೇ ಕುಮಾ​ರ​ಸ್ವಾ​ಮಿ ತಮ್ಮ ಆತ್ಮೀ​ಯ​ರೊಂದಿಗೆ ರಾಮ​ನ​ಗರ ಮತ್ತು ಚನ್ನ​ಪ​ಟ್ಟ​ಣದ ನಡುವೆ ಬರುವ ಅರ್ಚ​ಕ​ರ​ಹ​ಳ್ಳಿ​ ಸಮೀಪ ಜಾನ​ಪದ ಲೋಕದ ಪಕ್ಕ​ದಲ್ಲಿ ವಿಶಾ​ಲ​ವಾದ ಜಮೀ​ನನ್ನು ವೀಕ್ಷಿಸಿದ್ದಾರೆ. ಅಲ್ಲದೆ ಜಮೀ​ನಿನ ಮಾಲೀ​ಕತ್ವ ಹೊಂದಿ​ರು​ವ​ವ​ರೊಂದಿಗೆ ಔಪ​ಚಾ​ರಿ​ಕ​ವಾ​ಗಿ ಮಾತು​ಕತೆ ನಡೆ​ಸಿ​ದ್ದಾರೆ ಎನ್ನ​ಲಾ​ಗಿದೆ.

ಬೆಂಗಳೂರಿಗರಿಗೆ ತೊಂದರೆಯಾಗದಂತೆ ನಿಖಿಲ್ ಮದುವೆ

ನಿಖಿಲ್‌ ಮದುವೆ ಕಾರ್ಯ​ಕ್ಕಾಗಿ ವೀಕ್ಷಿ​ಸಿ​ರುವ ಜಾಗ ಸುಮಾರು 54 ಎಕರೆ ಪ್ರದೇ​ಶ​ವಿದೆ. ಇದ​ರಲ್ಲಿ ಸೆಂಟ್ರೆಲ್‌ ಮುಸ್ಲಿಂ ಅಸೋ​ಸಿ​ಯೇ​ಷನ್‌(ಸಿ​ಎಂಎ) 22 ಎಕರೆ, ಉದ್ಯ​ಮಿ​ಗೆ ಸೇರಿದ 23 ಎಕರೆ ಹಾಗೂ ಉಳಿಕೆ ಭೂಮಿ ಇತ​ರ​ರ ಒಡೆ​ತ​ನದಲ್ಲಿದೆ. ಈ ಸ್ಥಳ ರಾಮ​ನ​ಗ​ರ​ದಿಂದ 5 ಕಿ.ಮೀ ಹಾಗೂ ಚನ್ನ​ಪ​ಟ್ಟಣದಿಂದ 8 ಕಿ.ಮೀ ದೂರ​ದ​ಲ್ಲಿದೆ. ಮೈಸೂರು-ಬೆಂಗ​ಳೂರು ಹೆದ್ದಾ​ರಿ ಪಕ್ಕ​ದ​ಲ್ಲಿಯೇ ಇರು​ವು​ದ​ರಿಂದ ಸೂಕ್ತ​ವಾದ ಸ್ಥಳ​ವೆಂಬ ನಿರ್ಧಾ​ರಕ್ಕೆ ಬಂದಿ​ದ್ದು ಭೋಜನ ವ್ಯವ​ಸ್ಥೆ ಹಾಗೂ ವಾಹ​ನ​ಗಳ ನಿಲು​ಗ​ಡೆ​ಗಾ​ಗಿಯೇ ಪ್ರತ್ಯೇಕ ಸ್ಥಳಗಳ ವ್ಯವಸ್ಥೆ ಮಾಡಲು ಕುಮಾ​ರ​ಸ್ವಾಮಿ ಕುಟುಂಬ​ದ​ವರು ಉದ್ದೇ​ಶಿ​ಸಿ​ದ್ದಾರೆ ಎಂದು ಗೊತ್ತಾ​ಗಿ​ದೆ. ಫೆ.10ರಂದು ಬೆಂಗ​ಳೂ​ರಿ​ನಲ್ಲಿ ನಿಖಿಲ್‌ ನಿಶ್ಚಿ​ತಾರ್ಥ ನೆರ​ವೇ​ರ​ಲಿದ್ದು, ಹಿರಿಯರ ಸಮ್ಮು​ಖ​ದಲ್ಲಿ ಮದುವೆ ದಿನಾಂಕ ನಿಗ​ದಿ​ಯಾ​ಗ​ಲಿದೆ.

ಗೋವಾದಲ್ಲಿ ಫಿಲ್ಮಿ ಸ್ಟೈಲ್‌ ಪ್ರಪೋಸ್‌; ಏಪ್ರಿಲ್‌ನಲ್ಲಿ ನಿಖಿಲ್‌ ಮದುವೆ ಡೇಟ್‌ ಫಿಕ್ಸ್‌!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!