'OTTಯಲ್ಲಿ ಸಿನಿಮಾ ಬಿಡುಗಡೆ  ಬೇಡವೇ ಬೇಡ, ಮಂದಿರವೇ ದೇವಸ್ಥಾನ'

Published : Jan 24, 2021, 09:12 PM ISTUpdated : Jan 24, 2021, 09:26 PM IST
'OTTಯಲ್ಲಿ ಸಿನಿಮಾ ಬಿಡುಗಡೆ  ಬೇಡವೇ ಬೇಡ, ಮಂದಿರವೇ ದೇವಸ್ಥಾನ'

ಸಾರಾಂಶ

ಒಟಿಟಿಯಲ್ಲಿ ಸಿನಿಮಾ ಬಿಡುಗಡೆಗೆ ಕಿಚ್ಚ ಸುದೀಪ್ ವಿರೋಧ/ ಮೊದಲು ಸಿನಿಮಾಗಳು ಚಿತ್ರಮಂದಿರಕ್ಕೇ ಬರಬೇಕು/ ಚಿತ್ರಮಂದಿರಗಳು ನಮಗೆಲ್ಲಾ ಒಂದು ತರ ದೇವಸ್ಥಾನ ಇದ್ದಂತೆ/ ಒಟಿಟಿಯಲ್ಲಿ ಯಾವಾಗ ಬೇಕಾದ್ರು ಸಿನಿಮಾ ಬಿಡುಗಡೆ ಮಾಡಿಕೊಳ್ಳ ಬಹುದು/ ಥಿಯೇಟರ್ ಗೆ ಸಿನಿಮಾ ಬಂದ ಮೇಲೆ ಒಟಿಟಿಗೆ ಬಂದರೆ ಒಳ್ಳೆಯದು

ಬೆಂಗಳೂರು( ಜ. 24) ಒಟಿಟಿಯಲ್ಲಿ ನೇರವಾಗಿ ಸಿನಿಮಾ ಬಿಡುಗಡೆ ಮಾಡುವುದಕ್ಕೆ ನಟ ಕಿಚ್ಚ ಸುದೀಪ್  ವಿರೋಧ ವ್ಯಕ್ತಪಡಿಸಿದ್ದು ಸಿನಿಮಾ ಮಂದಿರದಲ್ಲೇ ತೆರೆ ಕಾಣಬೇಕು.  ಚಿತ್ರಮಂದಿರಗಳು ನಮಗೆಲ್ಲಾ ಒಂದು ತರ ದೇವಸ್ಥಾನ ಇದ್ದಂತೆ ಎಂದು ಹೇಳಿದ್ದಾರೆ.

ಒಟಿಟಿಯಲ್ಲಿ ಯಾವಾಗ ಬೇಕಾದ್ರು ಸಿನಿಮಾ ಬಿಡುಗಡೆ ಮಾಡಿಕೊಳ್ಳಬಹುದು. ಥಿಯೇಟರ್ ಗೆ ಸಿನಿಮಾ ಬಂದ ಮೇಲೆ ಒಟಿಟಿಗೆ ಬಂದರೆ ಒಳ್ಳೆಯದು ಎಂದು ತಾವೇ ಬ್ಯ್ರಾಂಡ್ ಅಂಬಾಸಿಡರ್ ಆಗಿರುವ ಸುಗಂಧ ಧ್ರ್ಯವದ ಲಾಂಚ್  ಕಾರ್ಯಕ್ರಮವೊಂದರಲ್ಲಿ ಹೇಳಿದರು.

ಶಿವಮೊಗ್ಗ ಸ್ಫೋಟ; ಕಿಚ್ಚ ಸುದೀಪ್ ಪ್ರತಿಕ್ರಿಯೆ

ಕೊರೋನಾ ಆತಂಕದ ಕಾರಣಕ್ಕೆ ಲಾಕ್ ಡೌನ್ ಘೋಷಿಸಿದ ನಂತರ ಸಿನಿಮಾ ಮಂದಿರಗಳನ್ನು ಬಂದ್ ಮಾಡಲಾಗಿತ್ತು. ನಂತರ ನಿಧಾನವಾಗಿ ಚಿತ್ರಮಂದಿರಗಳು ಓಪನ್ ಆಗಿದ್ದು ಇನ್ನು ಮೊದಲಿನ ಪ್ರತಿಕ್ರಿಯೆ ಸಿಗುತ್ತಿಲ್ಲ. ಈ ನಡುವೆ ಬಾಲಿವುಡ್ ಸೇರಿದಂತೆ ಅನೇಕ ಚಿತ್ರಗಳನ್ನು ಆನ್ ಲೈನ್ ಒಟಿಟಿ ಫಾರ್ಮೆಟ್ ನಲ್ಲಿಯೇ ಬಿಡುಗಡೆ ಮಾಡಲಾಗಿತ್ತು. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?