ಹೈ ಫೈ ಮೊಟ್ಟೆ ಫ್ರೈ ಮಾಡುತ್ತಲೇ ಬದುಕಿನ ಬಹು ದೊಡ್ಡ ನಿರ್ಧಾರ ತಿಳಿಸಿದ ಚಂದನ್​ ಶೆಟ್ಟಿ!

By Suchethana DFirst Published Jul 26, 2024, 12:46 PM IST
Highlights

ಮೂರು ಚಿತ್ರಗಳ ಬಿಡುಗಡೆಗೆ ಕಾದಿರುವ ನಟ ಚಂದನ್​ ಶೆಟ್ಟಿ ಹೈ ಫೈ ಮೊಟ್ಟೆ ಫ್ರೈ ಮಾಡುತ್ತಲೇ ಬದುಕಿನ ಬಹು ದೊಡ್ಡ ನಿರ್ಧಾರಗಳ ಕುರಿತು ಮಾತನಾಡಿದ್ದಾರೆ. ಅವರು ಹೇಳಿದ್ದೇನು?
 

ಗಾಯಕ, ರ‍್ಯಾಪರ್ ಜೊತೆ ಈಗ ನಟ ಕೂಡ ಆಗಿರುವ ಚಂದನ್​ ಶೆಟ್ಟಿಯವರು ಹೈ ಫೈ ಎಗ್​ ಫ್ರೈ ಮಾಡಿದ್ದಾರೆ. ಹೌದು! ಮೊಟ್ಟೆಯ ಫ್ರೈ ಮಾಡುವುದನ್ನು ಕಲಿಸಿಕೊಟ್ಟ ಚಂದನ್​ ಶೆಟ್ಟಿಯರು ಈ ಮೂಲಕ ಅಡುಗೆ ಮಾಡುವುದಕ್ಕೂ ತಾವು ಸಿದ್ಧ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಸವಿರುಚಿ ಕಾರ್ಯಕ್ರದಲ್ಲಿ ಚಂದನ್​  ಶೆಟ್ಟಿ ಅವರು ಮೊಟ್ಟೆ ಫ್ರೈ ಮಾಡುವ ವಿಧಾನವನ್ನು ಹೇಳಿಕೊಟ್ಟಿದ್ದಾರೆ.    ಮೊಟ್ಟೆ ತಿನ್ನುವವರು ಎಲ್ಲರೂ ಈ ಫ್ರೈ ಮಾಡುತ್ತಾರೆ ಎಂದು ನಿರೂಪಕಿ ಹೇಳಿದಾಗ, ಚಂದನ್​  ಶೆಟ್ಟಿ ಅವರು,  ಬದುಕಿನಲ್ಲಿ ಎಲ್ಲವೂ ಹೈ ಫೈ ಆಗಿರಬೇಕು. ನಾವು ಮಾಡುವ ಯಾವುದೇ ಕೆಲಸವಿದ್ದರೂ ಅದನ್ನು ಹೈ ಫೈ ಎಂದುಕೊಂಡೇ ಮಾಡಬೇಕು, ಅದ್ದರಿಂದ  ಮೊಟ್ಟೆ ಫ್ರೈಗೂ ಹಾಗೆಯೇ ಹೇಳುತ್ತಿದ್ದೇನೆ ಎಂದಿದ್ದಾರೆ. ಆ ಬಳಿಕ  ತಮ್ಮ ಜೀವನ, ಸಿನಿಮಾಗಳ ಕುರಿತೂ ಮಾತನಾಡಿದ್ದಾರೆ ಅವರು.

ಮೊದಲಿಗೆ ಚಂದನ್​ ಶೆಟ್ಟಿ ಹೇಳಿಕೊಟ್ಟ ಮೊಟ್ಟೆ ಫ್ರೈ ಮಾಡುವುದು ಹೇಗೆ ಎನ್ನುವುದನ್ನು ನೋಡೋಣ. ಮೊದಲು ಮೊಟ್ಟೆಯನ್ನು ಬೇಯಿಸಿಕೊಂಡು ಅದನ್ನು ಎರಡು ಭಾಗ ಮಾಡಿಟ್ಟುಕೊಳ್ಳಬೇಕು. ಎಣ್ಣೆಯನ್ನು ಕಾಯಿಸಲು ಇಡಬೇಕು. ಇತ್ತ ಕಡೆ  ಸ್ವಲ್ಪ ಖಾರದ ಪುಡಿ, ಸ್ವಲ್ಪ ಕಾಳು ಮೆಣಸಿನ ಪುಡಿ (ಪೆಪ್ಪರ್​), ಸ್ವಲ್ಪ ಅರಿಶಿಣ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಂಡು ಅದಕ್ಕೆ  ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಬೇಕು. ಅದಕ್ಕೆ ಬೇಯಿಸಿ ಎರಡು ಭಾಗ ಮಾಡಿದ ಮೊಟ್ಟೆಯನ್ನು ಲೇಪಿಸಿ ಎಣ್ಣೆಯಲ್ಲಿ ಎರಡೂ ಕಡೆ ಫ್ರೈ ಮಾಡಬೇಕು.  ಇದು ಚಂದನ್​ ಶೆಟ್ಟಿ ಅವರ ರೆಸಿಪಿ.  

Latest Videos

ಚಂದನ್​ ಶೆಟ್ಟಿ ವಿರುದ್ಧ ಅಂದು ಹಾಗೆ ಮಾತಾಡಿದ್ದೇ ನನಗೆ ದೊಡ್ಡ ಬ್ರೇಕ್​ ಕೊಟ್ಟಿತು! Rapper ರಾಹುಲ್​ ಓಪನ್​ ಮಾತು

ಇದೇ ವೇಳೆ ಸಿನಿಮಾದ ಕುರಿತು ಮಾತನಾಡಿದ ಚಂದನ್​ ಶೆಟ್ಟಿ, ಮೂರು ಸಿನಿಮಾ ಶೂಟಿಂಗ್​ ಮುಗಿದು ರಿಲೀಸ್​ಗೆ ರೆಡಿ ಇದೆ. ಮೊದಲಿಗೆ ರಿಲೀಸ್​ ಆಗ್ತಿರೋದು ವಿದ್ಯಾರ್ಥಿ ವಿದ್ಯಾರ್ಥಿನಿಯರೇ. ಅದನ್ನು ಬಿಟ್ಟು  ಸೂತ್ರಧಾರಿ ಮತ್ತು ಎಲ್ಲರ ಕಾಲೆಳೆಯುತ್ತೆ ಕಾಲ ಈ ಚಿತ್ರಗಳೂ ರೆಡಿ ಇವೆ. ಇವೆರಡರಲ್ಲಿ ಯಾವುದು ಮೊದಲು ರಿಲೀಸ್​ ಆಗುತ್ತದೆಯೋ ಗೊತ್ತಿಲ್ಲ ಎಂದಿದ್ದಾರೆ. ಇನ್ನು ಪರ್ಸನಲ್​ ಲೈಫ್​ನಲ್ಲಿ ಹೇಗೆ? ಏನು ಯೋಚನೆ ಮಾಡಿರುವಿರಿ ಎಂದು ಪ್ರಶ್ನೆ ಕೇಳಿದಾಗ, ಸದ್ಯ ಪರ್ಸನಲ್​ ಲೈಫ್​ನಲ್ಲಿ ಯಾವುದೇ ಬದಲಾವಣೆ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಫೋಕಸ್​ ಇರುವುದು ನನ್ನ ಸಕ್ಸಸ್​ಗೋಸ್ಕರ ಮಾತ್ರ. ಮೊದಲು ಸಕ್ಸಸ್, ಆ ಮೇಲೆ ಉಳಿದದ್ದು, ಸಿನಿಮಾದಲ್ಲಿ ಸದ್ಯ ಸಕ್ಸಸ್​ ಕಾಣಬೇಕಿದೆ.​ ಅದಾದ ಬಳಿಕ  ಬೇರೆಯದ್ದರ ಬಗ್ಗೆ ಯೋಚನೆ ಮಾಡುತ್ತೇನೆ. ಸದ್ಯಕ್ಕೆ ನನಗೆ ಜೀವನದಲ್ಲಿ ದೊಡ್ಡ  ಬ್ರೇಕ್​ ಬೇಕಾಗಿದೆ. ಅದಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ಉಳಿದವುಗಳ ಕಡೆ ನಂತರದಲ್ಲಿ ಯೋಚಿಸುತ್ತೇನೆ ಎಂದಿದ್ದಾರೆ.  

ಇದೇ ವೇಳೆ ಕನಸಿನ ಪಾತ್ರದ ಕುರಿತು ಚಂದನ್​  ಶೆಟ್ಟಿ ಮಾತನಾಡಿದ್ದಾರೆ. ಕನಸಿನ ಪಾತ್ರ ಇಂಥದ್ದೇ ಅಂತೇನೂ ಇಲ್ಲ. ಮಾಡುವ ಪಾತ್ರಗಳಲ್ಲಿ ವಿಭಿನ್ನತೆ ಇರಬೇಕು. ನಾವು ಮಾಡುವ ಪಾತ್ರಗಳು ಎಮೋಷನ್​ ಕ್ಯಾರಿ ಮಾಡ್ತಾ ಇದೆಯಾ ಎನ್ನೋದನ್ನು ನೋಡಬೇಕು. ಪಾಸಿಟಿವ್​ ಅಥವಾ ನೆಗೆಟಿವ್ ಯಾವುದೇ ಪಾತ್ರ ಇರಲಿ, ಅದು ವೀಕ್ಷಕರಿಗೆ  ಇಂಪ್ರೆಷನ್​ ಕೊಡ್ತಾ ಇದೆಯಾ ಎನ್ನುವುದು ಮುಖ್ಯ ಎಂದಿದ್ದಾರೆ. ಇದೇ ವೇಳೆ, ಡಾ.ರಾಜ್​ಕುಮಾರ್​ ಅವರ ಉದಾಹರಣೆಯನ್ನು ಕೊಟ್ಟ ಅವರು, ಡಾ.ರಾಜ್​ ಅವರು ಎಂಥದ್ದೇ ಪಾತ್ರ ಮಾಡಿದ್ದರೂ ಅದು ಇಂಪ್ರೆಷನ್​ ಕೊಡ್ತಾ ಇತ್ತು. ಅದು ಮುಖ್ಯ ಎಂದಿದ್ದಾರೆ. ಇನ್ನು ಚಂದನ್​ ಶೆಟ್ಟಿಯವರ ಕುರಿತು ಹೇಳುವುದಾದರೆ,  ನಿವೇದಿತಾ ಗೌಡ ಅವರಿಂದ ಡಿವೋರ್ಸ್​ ಪಡೆದು ಎರಡು ತಿಂಗಳಾಗುತ್ತಾ ಬಂದಿದೆ.  ಗಲಾಟೆ, ಗದ್ದಲ, ಕೂಗಾಟ, ಕಿರುಚಾಟ, ಮಾಧ್ಯಮಗಳ ಮುಂದೆ ಬಂದು ಪರಸ್ಪರ ಆರೋಪ... ಹೀಗೆ ಏನೂ ಇಲ್ಲದೇ ಯಾರಿಗೂ ತಿಳಿಯದಂತೆ ಫ್ರೆಂಡ್ಲಿ ಡಿವೋರ್ಸ್​ ಎನ್ನುವ ರೀತಿಯಲ್ಲಿ ವಿಚ್ಛೇದನ ಮಾಡಿಕೊಂಡ ದಂಪತಿಗೆ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿತ್ತು. 

ಅವಳು ನನ್ನ ಹೋಮ್​ವರ್ಕ್​ ಮಾಡ್ತಿದ್ಲು... ಕಾಲೇಜ್​ನ ಕ್ರಷ್​ ಒಂದಾ, ಎರಡಾ... ಚಂದನ್​ ಶೆಟ್ಟಿ ಓಪನ್​ ಮಾತು

click me!