ಧ್ರುವ ಸರ್ಜಾ ಮಗುವಿಗೆ ಗಜಕೇಸರಿ ಯೋಗ; ಮಹಾನ್ ನಟನಾಗ್ತಾನ ಸ್ಟಾರ್ ಆಕ್ಟರ್ ಪುತ್ರ?

By Suvarna NewsFirst Published Sep 19, 2023, 4:27 PM IST
Highlights

ಧ್ರುವ ಸರ್ಜಾ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ಆ ಮಗುವಿಗೆ ಗಜಕೇಸರಿ ಯೋಗ ಇದೆಯಂತೆ. ಅಂದರೆ ಅಪ್ಪನನ್ನು ಮೀರಿಸುವ ಗ್ರೇಟ್ ಸ್ಟಾರ್ ಆಗ್ತಾನ ಈ ಸ್ಟಾರ್ ಪುತ್ರ..

ಧ್ರುವ ಸರ್ಜಾ ಪ್ರೇರಣಾ ದಂಪತಿಗೆ ಚೌತಿ ಹಬ್ಬದಂದು ಮಗ ಹುಟ್ಟಿದ್ದಾನೆ. ಈಗಾಗಲೇ ಈ ದಂಪತಿಗೆ ಹೆಣ್ಣು ಮಗುವಿದ್ದು ಆ ಮಗುವಿಗೆ ಇನ್ನೂ ಎರಡು ವರ್ಷ ತುಂಬುವ ಮೊದಲೇ ಮತ್ತೊಂದು ಮಗುವಿನ ಆಗಮನವಾಗಿದೆ. ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲೇ ಧ್ರುವ ಸರ್ಜಾ-ಪ್ರೇರಣಾ ದಂಪತಿಯ ಮತ್ತೊಂದು ಮಗು ಜನಿಸಿರುವುದು ಕುಟುಂಬಕ್ಕೆ ಖುಷಿ ನೀಡಿದೆ. ಮಗುವನ್ನು ನೋಡಲು ಮೇಘನಾ ರಾಜ್​, ಸುಂದರ್​ ರಾಜ್​ ಮುಂತಾದವರು ಆಗಮಿಸಿದ್ದಾರೆ. ‘ಬಹಳ ದಿನಗಳಿಂದ ನಮ್ಮಲ್ಲಿ ಕವಿದಿದ್ದ ವಾತಾವರಣ ಮರೆಯಾಗಿ, ಬಿಳಿ ಮೋಡಗಳು ಬಂದಿವೆ. ದೇವರು ಇದ್ದಾನೆ ಎಂಬುದನ್ನು ಇದು ಸೂಚಿಸುತ್ತದೆ’ ಎಂದು ಸುಂದರ್ ರಾಜ್​ ಹೇಳಿದ್ದಾರೆ. ಅವರು ಹೇಳಿದ ಇನ್ನೊಂದು ಮಾತು ಹಲವು ಮಂದಿ ಅಚ್ಚರಿ, ಖುಷಿ ಅನುಭವಿಸುವಂತೆ ಮಾಡಿದೆ.

ಹೌದು. ‘ಈಗಾಗಲೇ ಅವರ ಮನೆಗೆ ಗೌರಿ ಬಂದಾಯಿತು. ಈಗ ಗಣೇಶ ಬಂದಿದ್ದಾನೆ. ಯಾವುದೇ ಹೊಸ ಪರ್ವ ಬಂದಾಗ ಕುಟುಂಬಕ್ಕೆ ಸಂತೋಷ ನೀಡುತ್ತದೆ. ಈ ಮಗು ಗಜಕೇಸರಿ ಯೋಗದಲ್ಲಿ ಹುಟ್ಟಿದೆ. ಬಹಳ ದಿನಗಳಿಂದ ನಮ್ಮಲ್ಲಿ ಕವಿದಿದ್ದ ವಾತಾವರಣ ಮರೆಯಾಗಿ, ಬಿಳಿ ಮೋಡಗಳು ಬಂದಿವೆ. ಇದನ್ನು ನಾವು ನಿರೀಕ್ಷಿಸಿದ್ದೆವು. ದೇವರು ಇದ್ದಾನೆ ಎಂಬುದನ್ನು ಇದು ಸೂಚಿಸುತ್ತದೆ’ ಎಂದು ಸುಂದರ್ ರಾಜ್ ಹೇಳಿದ್ದಾರೆ.

Latest Videos

ದಿಸ್ ಈಸ್ ನಾಟ್ AI ವರ್ಲ್ಡ್, ದಿಸ್ ಈಸ್ UI ವರ್ಲ್ಡ್: ಕತ್ತಲುಮಯ ಟೀಸರ್ ಮೂಲಕ ಫ್ಯಾನ್ಸ್‌ ತಲೆಗೆ ಹುಳ ಬಿಟ್ಟ ಉಪೇಂದ್ರ!

ಅಷ್ಟಕ್ಕೂ ಈ ಗಜಕೇಸರಿ ಯೋಗವೆಂದರೆ ಸಾಧಾರಣ ಯೋಗವಲ್ಲ. ಇದೊಂದು ರಾಜಯೋಗ. ಕೆಲವರಿಗೆ ಹುಟ್ಟಿಂದ ಸಾಯೋ ತನಕ ಇರುತ್ತದೆ. ಇನ್ನು ಕೆಲವರಿಗೆ ಬದುಕಿನಲ್ಲಿ ಒಮ್ಮೆ ಬರುತ್ತದೆ. ಜನ್ಮ ಕುಂಡಲಿಯಲ್ಲಿ ಲಗ್ನದಿಂದ ಒಂದು, ನಾಲ್ಕು, ಏಳು ಮತ್ತು ಹತ್ತರಲ್ಲಿ ಚಂದ್ರ ಮತ್ತು ಗುರು ಇವರಿಬ್ಬರೂ ಒಟ್ಟಿಗೇ ಇದ್ದರೆ ಗಜಕೇಸರೀ ಯೋಗ ಸಂಭವಿಸುತ್ತದೆ. ಅಷ್ಟೇ ಅಲ್ಲದೇ ಲಗ್ನದಿಂದ ಒಂದು, ನಾಲ್ಕು, ಏಳು‌ ಮತ್ತು ಹತ್ತರಲ್ಲಿ ಚಂದ್ರ ಹಾಗೂ ಗುರುವು ಇದ್ದರೂ ಗಜಕೇಸರೀ ಯೋಗವು ಆಗುತ್ತದೆ. ಹಾಗಯೇ ಚಂದ್ರನಿಂದಲೂ ಈ ಯೋಗವನ್ನು ಹೇಳುತ್ತಾರೆ. ಚಂದ್ರನಿಂದ ಒಂದು, ನಾಲ್ಕು, ಏಳು, ಹತ್ತರಲ್ಲಿ ಗುರುವಿದ್ದರೆ ಅಥವಾ ಚಂದ್ರನ‌ ದೃಷ್ಟಿಯು ಗುರುವಿನ ಮೇಲೆ ಬಿದ್ದರೆ ಗಜಕೇಸರೀ ಯೋಗವು ಆಗುವುದು.

ರೂಪವಂತರಾಗುತ್ತಾರೆ, ಧನವಂತರಾಗುವರು, ಬುದ್ಧಿಯ ಪ್ರಖರತೆ ಹೆಚ್ಚಾಗುವುದು, ಗುಣವಂತರಾಗುವರು, ರಾಜರಿಗೆ ಪ್ರಿಯರಾದವರು ಆಗುವರು, ಮಾತಿನಲ್ಲಿ ಪ್ರೌಢಿಮೆ ಇರಲಿದೆ. ಸಭೆಯಲ್ಲಿ ಗಾಂಭೀರ್ಯ ಬರುವುದು, ದೀರ್ಘಾಯುಸ್ಸನ್ನು ಹೊಂದಿದವನು ಆಗುತ್ತಾನೆ. ಸಾಮಾಜಿಕ ಮನ್ನಣೆ, ಸಂಪತ್ತು, ಅಧಿಕಾರ ಎಲ್ಲವೂ ಅವನ ಯೋಗ್ಯತೆ ಅನುಸಾರವಾಗಿ ಸಿಗುತ್ತಾ ಹೋಗುತ್ತದೆ. ವ್ಯಕ್ತಿಯ ಜಾತಕದಲ್ಲಿ ಗಜಕೇಸರಿ ಯೋಗವು ಎರಡನೇ ಮನೆಯಲ್ಲಿದ್ದರೆ ಅಂತಹವರು ಉನ್ನತ ಕುಟುಂಬದಲ್ಲಿ ಜನಿಸುತ್ತಾರೆ. ಇಂತಹವರ ಮಾತುಗಳನ್ನು ಜನ ಬಹಳ ಎಚ್ಚರಿಕೆಯಿಂದ ಕೇಳುತ್ತಾರೆ. ಅಲ್ಲದೆ, ಅವರಿಗೆ ಜೀವನದಲ್ಲಿ ಹಣದ ಕೊರತೆಯಾಗದು. ಜಾತಕದಲ್ಲಿ ಎರಡನೇ ಮನೆಯಲ್ಲಿ ಗಜಕೇಸರಿ ಯೋಗ ಇರುವವರು ನುರಿತ ಭಾಷಣಕಾರರಾಗುತ್ತಾರೆ. ಗುರು ಧರ್ಮದ ಕಾರಕ ಗ್ರಹ, ಆದ್ದರಿಂದ ಅಂತಹ ಪರಿಸ್ಥಿತಿಯಲ್ಲಿ ನೀವು ಧರ್ಮಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಭಾಷಣಕಾರರು ಆಗಬಹುದು.

ಒಬ್ಬ ವ್ಯಕ್ತಿಯ ಹತ್ತನೇ ಮನೆಯಲ್ಲಿ ಗಜಕೇಸರಿ ಯೋಗವು ರೂಪುಗೊಂಡರೆ, ಅದು ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಅದೇ ಸಮಯದಲ್ಲಿ, ಇದು ಅವರ ತಂದೆಗೆ ತುಂಬಾ ಒಳ್ಳೆಯದು. ಈ ಯೋಗದ ಪ್ರಭಾವದಿಂದ ವ್ಯಕ್ತಿಯ ತಂದೆಯೂ ಉನ್ನತ ಸ್ಥಾನವನ್ನು ಪಡೆಯುತ್ತಾರೆ. ಅಷ್ಟೇ ಅಲ್ಲ, ವ್ಯಕ್ತಿ ಅದೃಷ್ಟಕ್ಕಿಂತ ಕರ್ಮಕ್ಕೆ ಪ್ರಾಮುಖ್ಯತೆ ನೀಡುತ್ತಾನೆ. ಇದರೊಂದಿಗೆ ಸಮಾಜದಲ್ಲಿ ಗೌರವವೂ ಸಿಗುತ್ತದೆ.

ನಾರ್ಮಲ್ ಡೆಲಿವರಿಯಲ್ಲಿ ತುಂಬಾ ಕಿರುಚಾಟ ಇರುತ್ತೆ ಗಾಬರಿ ಆಗಿಬಿಟ್ಟೆ: ಪತ್ನಿ ಬಗ್ಗೆ ಧ್ರುವ ಸರ್ಜಾ

ಒಂದು ಸಾಮಾನ್ಯ ನಂಬಿಕೆ ಎಂದರೆ ಒಬ್ಬ ವ್ಯಕ್ತಿಯ ಮೊದಲ ಲಗ್ನದಲ್ಲಿ ಗಜಕೇಸರಿ ಯೋಗವು ರೂಪುಗೊಂಡರೆ, ಆ ವ್ಯಕ್ತಿ ನಾಯಕ ಅಥವಾ ನಟನಾಗುತ್ತಾನೆ. ಅಂತಹ ವ್ಯಕ್ತಿಯನ್ನು ನೋಡಲು ಜನರು ತುಂಬಾ ಉತ್ಸುಕರಾಗಿರುತ್ತಾರೆ. ಅಲ್ಲದೆ ಅವರ ಜೀವನಶೈಲಿ ರಾಜರಂತೆಯೇ ಇರುತ್ತದೆ. ಅಷ್ಟೇ ಅಲ್ಲ, ಈ ಯೋಗದ ಪ್ರಭಾವದಿಂದ ವ್ಯಕ್ತಿಯು ಯಾವುದೇ ತಪ್ಪು ದಾರಿಯಲ್ಲಿ ಹೋಗುವುದಿಲ್ಲ. ಸದ್ಯಕ್ಕೀಗ ಧ್ರುವ ಸರ್ಜಾ ಮಗನಿಗೆ ಇಂಥದ್ದೊಂದು ಯೋಗವಿದೆ. ಈ ಮಗು ಮುಂದೊಂದು ದಿನ ಸ್ಟಾರ್ ನಟನಾಗಿ ಚಿತ್ರರಂಗದಲ್ಲಿ ದೊಡ್ಡ ಸಾಧನೆ ಮಾಡೋದ್ರಲ್ಲಿ ಅನುಮಾನವೇ ಇಲ್ಲ ಅಂತ ದೊಡ್ಡವರು ಹೇಳ್ತಿದ್ದಾರೆ. 

click me!