
ರವಿಚಂದ್ರನ್ ಪುತ್ರ ವಿಕ್ರಮ್ ಅಭಿನಯದ ಚೊಚ್ಛಲ ಚಿತ್ರ ‘ತ್ರಿವಿಕ್ರಮ’ ಚಿತ್ರದೊಂದಿಗೆ ವಿಲನ್ ಶೇಡ್ ಪಾತ್ರದಲ್ಲಿ ಕನ್ನಡಕ್ಕೂ ಪರಿಚಯವಾಗುತ್ತಿದ್ದಾರೆ.
ರವಿಚಂದ್ರನ್ ಪುತ್ರ ವಿಕ್ರಮ್ ಚಿತ್ರದ ಫಸ್ಟ್ಲುಕ್!
‘ಚಿತ್ರದಲ್ಲಿ ರೋಹಿತ್ ರಾಯ್ ಎಸಿಪಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರಕ್ಕೆ ಕೊಂಚ ನೆಗೆಟಿವ್ ಶೇಡ್ ಕೂಡ ಇದೆ. ಪಾತ್ರಕ್ಕೆ ತಕ್ಕಂತೆ ಸೂಕ್ತ ನಟರನ್ನು ಬಾಲಿವುಡ್ ಕಡೆಯಿಂದಲೇ ಕರೆ ತರಬೇಕೆಂಬುದು ನಮ್ಮ ನಿರ್ಧಾರವಾಗಿತ್ತು. ಆ ನಿಟ್ಟಿನಲ್ಲಿ ಮೊದಲು ನಮಗೆ ಸೂಕ್ತ ಎನಿಸಿದ್ದು ರೋಹಿತ್ ರಾಯ್. ಹಿಂದಿ ಚಿತ್ರಗಳ ಜತೆಗೆ ಅಲ್ಲಿನ ಕಿರುತೆರೆಯಲ್ಲೂ ಜನಪ್ರಿಯತೆ ಇರುವ ನಟ. ಅವರನ್ನು ಸಂಪರ್ಕಿಸಿ, ಪಾತ್ರದ ಬಗ್ಗೆ ಹೇಳಿದಾಗ ಮರು ಮಾತನಾಡದೆ ಒಪ್ಪಿಕೊಂಡರು’ ಎನ್ನುತ್ತಾರೆ ನಿರ್ದೇಶಕ ಸಹನಾಮೂರ್ತಿ.
ಪಕ್ಕದ್ಮನೆ ಪಮ್ಮಿ ಜತೆ ಕ್ರೇಜಿಸ್ಟಾರ್ ಪುತ್ರನ ಸ್ಪೆಫ್ಸ್!
ವಿಕ್ರಮ್ ಸಿನಿ ಎಂಟ್ರಿಗೆ ನಿರ್ದೇಶಕ ಸಹನಾ ಮೂರ್ತಿ ಭರ್ಜರಿ ಕತೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರಂತೆ. ಲವ್ ಜತೆಗೆ ಆ್ಯಕ್ಷನ್ ಹಾಗೂ ಸೆಂಟಿಮೆಂಟ್ ಕೂಡ ಜೋರಾಗಿದೆಯಂತೆ. ಚಿತ್ರಕ್ಕೆ ರಾಜಸ್ಥಾನದಲ್ಲೇ ಬಹುತೇಕ ಚಿತ್ರೀಕರಣ ಆಗಿದೆ. ಚಿತ್ರಕ್ಕೆ ಉದ್ಯಮಿ ಸೋಮಣ್ಣ ಬಂಡವಾಳ ಹೂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.