'ಅಮೃತಮತಿ' ಹರಿಪ್ರಿಯಾಗೆ ಯಶೋಧರನಾದ ಕಿಶೋರ್!

Published : Dec 03, 2019, 02:37 PM IST
'ಅಮೃತಮತಿ' ಹರಿಪ್ರಿಯಾಗೆ ಯಶೋಧರನಾದ ಕಿಶೋರ್!

ಸಾರಾಂಶ

ಸಾಹಿತಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಚಿತ್ರವು ಚಿತ್ರೀಕರಣ ಮುಗಿಸಿ, ಸೆನ್ಸಾರ್‌ಗೆ ಸಿದ್ಧವಾಗಿದೆ. ಇದೀಗ ಚಿತ್ರತಂಡವು ‘ಅಮೃತಮತಿ’ ಪಾತ್ರದ ಫಸ್ಟ್‌ಲುಕ್‌ ರಿವೀಲ್‌ ಮಾಡಿದೆ.

ಗ್ಲಾಮರಸ್‌ ನಟಿ ಹರಿಪ್ರಿಯಾ ಇಲ್ಲಿ ‘ಅಮೃತಮತಿ’ಯಾಗಿ ಕಾಣಿಸಿಕೊಂಡಿದ್ದು, ಐತಿಹಾಸಿಕ ಕತೆಯಲ್ಲಿನ ಅವರ ಪಾತ್ರದ ಮೊದಲ ಲುಕ್‌ ಸಾಕಷ್ಟುಆಕರ್ಷಕವಾಗಿದೆ. ನಟ ಕಿಶೋರ್‌ ಯಶೋಧರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

'ಕನ್ನಡ್‌ ಗೊತ್ತಿಲ್ಲ' ಎನ್ನುವವರಿಗೆ ಮಾತ್ರ

13ನೇ ಶತಮಾನದ ಜನ್ನಕವಿ ರಚಿಸಿದ ‘ಯಶೋಧರ ಚರಿತೆ’ ಕಾವ್ಯವನ್ನು ಆಧರಿಸಿದ ಚಿತ್ರವೇ ಅಮೃತಮತಿ. ಯುವರಾಜ ಯಶೋಧರನ ಪತ್ನಿ ಅಮೃತಮತಿಯು ಒಂದು ದಿನ ಕುದುರೆ ಲಾಯದ ಉಸ್ತುವಾರಿ ಅಷ್ಟಾವಂಕನ ಹಾಡಿಗೆ ಮೋಹಿತಳಾಗುತ್ತಾಳೆ. ಅದು ಯಶೋಧರನಿಗೆ ಗೊತ್ತಾಗಿ ಅವರಿಬ್ಬರನ್ನು ಕೊಲ್ಲಲು ಯತ್ನಿಸುತ್ತಾನೆ. ಆದರೆ ಅದು ಆತನಿಂದ ಸಾಧ್ಯವಾಗುವುದಿಲ್ಲ. ಕೊನೆಗೆ ಅಮೃತಮತಿಯೇ ಗಂಡ ಮತ್ತು ಅತ್ತೆ ಮಾವಂದಿರ ಸಾವಿಗೆ ಕಾರಣಳಾಗುತ್ತಾಳೆ. ಆನಂತರ ಜನ್ಮಾಂತರಗಳಲ್ಲಿ ಮರುಹುಟ್ಟು ಪಡೆಯುತ್ತಾರೆನ್ನುವುದು ಜನ್ನ ಕವಿಯ ಯಶೋಧರ ಚರಿತೆಯ ಮೂಲ ಕತೆ. ಅದನ್ನೀಗ ಪುನರ್‌ವ್ಯಾಖ್ಯಾನ ಮಾಡಲು ಹೊರಟಿದ್ದಾರೆ ನಿರ್ದೇಶಕ ಬರಗೂರು ರಾಮಚಂದ್ರಪ್ಪ.

ನಟಿಯ ಕೈ ಗೀಚಿದ ಹುಡುಗ! ಏನಿದು ಗೆಸ್ ಮಾಡಿ!

‘ಅಮೃತಮತಿ ಮತ್ತು ಅರಮನೆ ವ್ಯವಸ್ಥೆಯ ನಡುವಿನ ಮುಖಾಮುಖಿಯ ಮೂಲಕ ಮೂಲ ಕಥನದಲ್ಲಿದ್ದ ಕೆಲವು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಮರು ವ್ಯಾಖ್ಯಾನದ ಹೊಸ ರೂಪ ನೀಡಲಾಗಿದೆ’ ಎನ್ನುತ್ತಾರೆ ಬರಗೂರು ರಾಮಚಂದ್ರಪ್ಪ. ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಈ ಚಿತ್ರದ ನಿರ್ಮಾಪಕರು. ಸುಂದರ ರಾಜ್‌, ಪ್ರಮೀಳಾ ಜೋಷಾಯ್‌, ಸುಪ್ರಿಯಾ ರಾವ್‌, ಅಂಬರೀಶ್‌ ಸಾರಂಗಿ, ವತ್ಸಲಾ ಮೋಹನ್‌ ಇದ್ದಾರೆ. ಈ ಚಿತ್ರಕ್ಕೆ ಶಮಿತಾ ಮಲ್ನಾಡ್‌ ಸಂಗೀತವಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12 ಗಿಲ್ಲಿ ನಟನ ಗುಣ ಹೇಳುತ್ತಲೇ Bigg Boss Winner ಯಾರೆಂದು​ ಹಿಂಟ್​ ಕೊಟ್ಟೇ ಬಿಟ್ರು ಶಿವರಾಜ್​ ಕುಮಾರ್!
BBK 12: ಗೆಲ್ತಾರಾ ಗಿಲ್ಲಿ ನಟ..? ಈ ಮಂಡ್ಯದ ಹೈದ ನಟರಾಜ್‌ನ ಪ್ಲಸ್ & ಮೈನಸ್ ಏನು? ಸೀಕ್ರೆಟ್ ರಿವೀಲ್..!