ಸಾರಾ ಅಬೂಬಕ್ಕರ್‌ ಕಾದಂಬರಿ; 'ಸಾರಾ ವಜ್ರ' ಚಿತ್ರದ ಟ್ರೇಲರ್‌ಗೆ ಭಾರಿ ಮೆಚ್ಚುಗೆ!

Kannadaprabha News   | Asianet News
Published : Jul 17, 2020, 09:33 AM IST
ಸಾರಾ ಅಬೂಬಕ್ಕರ್‌ ಕಾದಂಬರಿ; 'ಸಾರಾ ವಜ್ರ' ಚಿತ್ರದ ಟ್ರೇಲರ್‌ಗೆ ಭಾರಿ ಮೆಚ್ಚುಗೆ!

ಸಾರಾಂಶ

ಸಾರಾ ಅಬೂಬಕ್ಕರ್‌ ಅವರ ‘ವಜ್ರಗಳು’ ಕಾದಂಬರಿ ಆಧರಿತ ‘ಸಾರಾ ವಜ್ರಗಳು’ ಚಿತ್ರದ ಟ್ರೇಲರ್‌ ಸಖತ್‌ ಮೆಚ್ಚುಗೆಗೆ ಪಾತ್ರವಾಗಿದೆ. ಲಹರಿ ಮ್ಯೂಸಿಕ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಇದನ್ನು ನಿರ್ದೇಶಕಿ ರೂಪಾ ಅಯ್ಯರ್‌, ನಿರ್ದೇಶಕ ಕೆ.ಎಂ.ಚೈತನ್ಯ ಸೇರಿದಂತೆ ಹಲವರು ಸೋಷಲ್‌ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ಈ ಹಿಂದೆ ಎರಡು ಕಿರುಚಿತ್ರಗಳನ್ನು ನಿರ್ದೇಶಿಸಿದ್ದ ಆರ್ನಾ ಸಾಧ್ಯ ಅವರ ಮೂರನೇ ಸಿನಿಮಾ ಇದು. ಅನು ಪ್ರಭಾಕರ್‌ ಮುಖ್ಯ ಪಾತ್ರದಲ್ಲಿದ್ದಾರೆ. ‘ಚಿತ್ರಕ್ಕಾಗಿ ಕಾದಂಬರಿಯ ಹಕ್ಕು ಪಡೆದು ಸಾಕಷ್ಟುನಟಿಯರಿಗೆ ಕತೆ ಹೇಳಿದ್ದೆ. ಹೆಚ್ಚಿನವರು ನಿರಾಕರಿಸಿದರು. ಆದರೆ, ನಟಿ ಅನುಪ್ರಭಾಕರ್‌ ಅವರು ಸಾರಾ ಅಬೂಬಕ್ಕರ್‌ ಅವರ ‘ವಜ್ರಗಳು’ ಕಾದಂಬರಿ ಓದಿದ್ದರು. ಹೀಗಾಗಿ ತಕ್ಷಣ ಒಪ್ಪಿಗೆ ಕೊಟ್ಟು, ಸಿನಿಮಾ ಮಾಡುವ ಉತ್ಸಾಹ ತೋರಿಸಿದರು. ಒಬ್ಬ ನಿರ್ದೇಶಕಿಯಾಗಿ ಬರಹಗಾರ್ತಿಯೊಬ್ಬರ ಕಾದಂಬರಿಯನ್ನು ತೆರೆ ಮೇಲೆ ತಂದ ಹೆಮ್ಮೆ ನನಗೆ ಇದೆ’ ಎನ್ನುತ್ತಾರೆ ನಿರ್ದೇಶಕಿ ಆರ್ನಾ ಸಾಧ್ಯ.

 

ಹಂಸಲೇಖ ಸ್ಟುಡಿಯೋದಲ್ಲಿ ಚಿತ್ರಕ್ಕೆ ರೀ ರೆಕಾರ್ಡಿಂಗ್‌ ನಡೆಯುತ್ತಿದೆ. ಕೊರೋನಾ ಭೀತಿ ಹೀಗೆ ಮುಂದುವರೆದರೆ ಈ ಚಿತ್ರವನ್ನೂ ನೇರವಾಗಿ ಓಟಿಟಿಯಲ್ಲೇ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಚಿಂತನೆ ನಡೆಸಿದೆ. ರೆಹಮಾನ್‌ ಹಾಸನ್‌, ರಮೇಶ್‌ ಭಟ್‌, ಶಂಖನಾದ ಅರವಿಂದ್‌, ಸುಧಾ ಬೆಳವಾಡಿ, ರಾಮಸ್ವಾಮಿ, ಪ್ರದೀಪ್‌ ಪೂಜಾರಿ ಮುಖ್ಯ ಪಾತ್ರಗಳಲ್ಲಿದ್ದಾರೆ. ಗಾಯಕಿ ಸುಹಾನ ಸೈಯದ್‌ ಕೂಡ ಈ ಚಿತ್ರದಲ್ಲಿ ಪಾತ್ರ ಮಾಡಿರುವುದು.

ಕಾದಂಬರಿ ಆಧರಿತ ಚಿತ್ರದಲ್ಲಿ ಅನು ಪ್ರಭಾಕರ್- ರೆಹಮಾನ್! 

ಸಂಭ್ರಮ ಡ್ರೀಮ್‌ ಹೌಸ್‌ ಹಾಗೂ ದೇವೇಂದ್ರ ರೆಡ್ಡಿ ಸೇರಿ ನಿರ್ಮಿಸಿರುವ ಈ ಚಿತ್ರಕ್ಕೆ ಪರಮೇಶ್‌ ಸಿ.ಎಂ ಛಾಯಾಗ್ರಹಣ, ವಿ.ಮನೋಹರ್‌ ಸಂಗೀತ ನಿರ್ದೇಶನ ಹಾಗೂ ಅಕ್ಷಯ್‌ ಪಿ ರಾವ್‌ ಅವರ ಸಂಕಲನ ಇದೆ. ಪತ್ರಕರ್ತ ಬಿಎಂ ಹನೀಫ್‌ ಚಿತ್ರಕ್ಕೆ ಹಾಡುಗಳನ್ನು ಬರೆದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಧಂ' ಬೇಕಲೇ ಎಂದಿದ್ದ ದರ್ಶನ್‌ಗೆ ಟಾಂಗ್ ಕೊಟ್ರಾ ಸುದೀಪ್? ಏನಿದು ಮಾರ್ಕ್ ಡೈಲಾಗ್ ಮರ್ಮ?
ಸಿನಿಮಾ ರಿಲೀಸ್‌ಗೂ ಮುನ್ನವೇ ಜೈಲಲ್ಲಿ ಡೆವಿಲ್ ರೂಪ ತಾಳಿದ ದರ್ಶನ್; ಸಹ ಕೈದಿಗಳಿಗೆ ಕಾಲಿನಿಂದ ಒದ್ದು ದುರಹಂಕಾರ!