ಅದ್ದೂರಿ ಲವರ್ ಚಿತ್ರದಿಂದಾಚೆ ಬಂದ ಸಂಜನಾ ಆನಂದ್!

Suvarna News   | Asianet News
Published : Jul 16, 2021, 03:11 PM IST
ಅದ್ದೂರಿ ಲವರ್ ಚಿತ್ರದಿಂದಾಚೆ ಬಂದ ಸಂಜನಾ ಆನಂದ್!

ಸಾರಾಂಶ

ಅರ್ಜುನ್ ನಿರ್ದೇಶನದ ಸಿನಿಮಾದಿಂದ ಹೊರ ಬಂದ ನಟಿ ಸಂಜಯಾ ಆನಂದ್. ತಮ್ಮ ಸಿನಿಮಾಗಳ ರಿಲೀಸ್‌ಗೆ ಸಂಜನಾ ಕಾಯುತ್ತಿದ್ದಾರೆ.  

ಎ.ಪಿ. ಅರ್ಜುನ್ ನಿರ್ದೇಶನದ ‘ಅದ್ಧೂರಿ ಲವರ್’ ಚಿತ್ರಕ್ಕೆ ಸಂಜನಾ ಆನಂದ್ ನಾಯಕಿ ಆಯ್ಕೆ ಆಗಿದ್ದರು. ಆದರೆ, ಈಗ ಡೇಟ್ಸ್ ಸಮಸ್ಯೆಯಿಂದ ಆ ಚಿತ್ರದಿಂದ ಸಂಜನಾ ಹೊರ ಬಂದಿದ್ದಾರೆ.

ಎ.ಪಿ. ಅರ್ಜುನ್ ಅವರು ಧ್ರುವ ಸರ್ಜಾ ಸಿನಿಮಾ ಹಾಗೂ ‘ಅದ್ದೂರಿ ಲವರ್’ ಚಿತ್ರ ಒಟ್ಟಿಗೆ ಶುರು ಮಾಡಲಿದ್ದಾರೆ. ಧ್ರುವ ಸರ್ಜಾ ಸಿನಿಮಾ ಶೂಟಿಂಗ್‌ಗೆ ಹೆಚ್ಚು ದಿನಗಳು ಬೇಕಾಗುತ್ತದೆ. ಹೀಗಾಗಿ ಏಕಕಾಲದಲ್ಲಿ ಎರಡು ಚಿತ್ರಗಳಲ್ಲಿ ನಿರ್ದೇಶಕರು ಬ್ಯುಸಿ ಆಗುತ್ತಾರೆ. ತಾನು ಕೂಡ ಒಂದು ಚಿತ್ರಕ್ಕಾಗಿ ಎರಡು ಚಿತ್ರಗಳಿಗೆ ಬೇಕಾದಷ್ಟು ದಿನಗಳನ್ನು ಕೊಡಬೇಕಾಗುತ್ತದೆ ಎಂಬುದು ಸಂಜನಾ ಆನಂದ್ ಅವರ ಆಲೋಚನೆ. ಈ ಕಾರಣಕ್ಕೆ ಒಂದಿಷ್ಟು ಚಿತ್ರಗಳಲ್ಲಿ ಬ್ಯುಸಿ ಆಗಿರುವ ಸಂಜನಾ ಆನಂದ್, ಒಂದೇ ಚಿತ್ರಕ್ಕಾಗಿ ಹೆಚ್ಚಿನ ದಿನಗಳ ಕಾಲ್‌ಶೀಟ್ ಕೊಡುವುದು ಕಷ್ಟ ಆಗುತ್ತದೆ ಎಂದು ಯೋಚಿಸಿ ‘ಅದ್ಧೂರಿ ಲವರ್’ ಚಿತ್ರದಿಂದಲೇ ಹೊರ ಬಂದಿದ್ದಾರೆ ಎಂಬುವುದು ಸದ್ಯದ ಸುದ್ದಿ.

ಶ್ರೀಲೀಲಾಗೆ ಲಿಪ್‌ಲಾಕ್‌ ಮಾಡಿದ ವಿರಾಟ್ ಇದೀಗ ಅದ್ಧೂರಿ ಲವರ್! 

ಅಲ್ಲದೆ ಈ ಕೊರೋನಾ ಎರಡನೇ ಅಲೆ ಸಮಯದಲ್ಲಿ ಸಂಜನಾ ತಮ್ಮ ಆಪ್ತರನ್ನು ಕಳೆದಿಕೊಂಡ ನೋವಿನಲ್ಲಿದ್ದರು. ಇದೇ ಸಮಯದಲ್ಲಿ ಚಿತ್ರರಂಗದ ಕೆಲಸವೂ ನಿಂತು ಕೊಂಡಿತ್ತು. ಮಾನಸಿಕವಾಗಿ ನೊಂದಿದ್ದ ಸಂಜನಾಗೆ ಬೆನ್ನೆಲುಬಾಗಿ ತಮ್ಮ ತಂಡವಿತ್ತು. ತಿಂಗಳ ಕಾಲ ಕೆಲಸವಿಲ್ಲದೇ ಕುಳಿತಿದ್ದ ಸಮಯದಲ್ಲಿ ಆ್ಯಕ್ಟಿಂಗ್ ಹಾಗೂ ಹೊಸ ಭಾಷೆ ಕಲಿತಿದ್ದಾರಂತೆ. ದುನಿಯಾ ವಿಜಯ್‌ಗೆ ಜೋಡಿಯಾಗಿ 'ಸಲಗ' ಚಿತ್ರದಲ್ಲಿ ಅಭಿನಯಿಸಿರುವ ಸಂಜನಾ ಭರವಸೆ ನಟಿ ಹಾಗೂ ಲಕ್ಕಿ ಲೆಗ್ ಎಂದು ಗಾಂಧಿನಗರದಲ್ಲಿ ಮಾತುಗಳು ಕೇಳಿ ಬರುತ್ತಿದೆ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?