70ರ ದಶಕಕ್ಕೆ ಮರಳಿದ ಹರ್ಷಿಕಾ ಪೂಣಚ್ಚ: ಡಾ. ರಾಜ್ ಹಾಡಿಗೆ ರೆಟ್ರೋ ಬೇಬಿ ಬಂಪ್ ಶೂಟ್

Published : Jul 10, 2026, 05:36 PM IST
Harshika Poonacha

ಸಾರಾಂಶ

ನಟಿ ಹರ್ಷಿಕಾ ಪೂಣಚ್ಚ ಇದೀಗ ವಿಭಿನ್ನ ಶೈಲಿಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. 70ರ ದಶಕದ ವಿಂಟೇಜ್ ಸ್ಟೈಲ್‌ನಲ್ಲಿ ಡಾ.ರಾಜ್ ಹಾಡನ್ನು ರೀಕ್ರಿಯೇಟ್ ಮಾಡಿದ್ದಾರೆ. ಈ ಮೂಲಕ ಹೊಸ ಲುಕ್‌ನಲ್ಲಿ ಮಿಂಚಿದ್ದಾರೆ.

ಮೊದಲ ಮಗುವಿನ ಸಂತಸದ ಬಳಿಕ ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಸ್ಯಾಂಡಲ್‌ವುಡ್‌ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್‌ ಪೊನ್ನಣ್ಣ ದಂಪತಿ ಜೀವನದ ಮತ್ತೊಂದು ವಿಶೇಷ ಕ್ಷಣವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಪ್ಯಾರಿಸ್‌ನ ಐಫೆಲ್ ಟವರ್ ಎದುರು ಕ್ಲಿಕ್ಕಿಸಿಕೊಂಡ ಚಿತ್ರಗಳ ಮೂಲಕ ಎರಡನೇ ಮಗುವಿನ ಆಗಮನದ ಸಿಹಿಸುದ್ದಿ ನೀಡಿದ್ದ ಹರ್ಷಿಕಾ, ಇದೀಗ ವಿಭಿನ್ನ ಪರಿಕಲ್ಪನೆಯ ಬೇಬಿ ಬಂಪ್ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರೆಟ್ರೋ ಶೈಲಿಯಲ್ಲಿ ಮೂಡಿಬಂದಿರುವ ಈ ವಿಡಿಯೊಗೆ ಡಾ. ರಾಜ್‌ಕುಮಾರ್ ಮತ್ತು ಆರತಿ ಅಭಿನಯದ 'ಕಸ್ತೂರಿ ನಿವಾಸ' ಚಿತ್ರದ ಜನಪ್ರಿಯ 'ನೀ ಬಂದು ನಿಂತಾಗ' ಹಾಡನ್ನು ಹಿನ್ನೆಲೆಯಾಗಿ ಬಳಸಿರುವುದು ವಿಶೇಷ ಗಮನ ಸೆಳೆದಿದೆ.

ಹೃದಯಪೂರ್ವಕ ಧನ್ಯವಾದಗಳು

ವಿಡಿಯೊ ಜೊತೆಗೆ ಭಾವನಾತ್ಮಕವಾಗಿ ಬರೆದುಕೊಂಡಿರುವ ಹರ್ಷಿಕಾ, '70ರ ದಶಕದ ಸಿನಿಮಾ ಲೋಕಕ್ಕೊಂದು ಪಯಣ. ನೀ ಬಂದು ನಿಂತಾಗ ಹಾಡು ರಾಜ್ ಸರ್ ಮತ್ತು ಆರತಿ ಅವರ ಆ ಸುಂದರ ಗೀತೆಯ ನೆನಪುಗಳನ್ನ ಮತ್ತೆ ಜೀವಂತಗೊಳಿಸುವ ಪ್ರಯತ್ನ. ಸೀರೆಯುಟ್ಟ ಮರ್ಲಿನ್ ಮನ್ರೋ ಥರ ಅನಿಸಿದ ಈ ಲುಕ್, ಮೇಕಪ್ ಎಲ್ಲವೂ ಪರಿಪೂರ್ಣ. ಈ ಶೂಟ್‌ ಬಗ್ಗೆ ಕೇಳಿದ್ದಾಗಿನಿಂದಲೂ ಮನಸ್ಸಿಗೆ ತುಂಬಾ ಇಷ್ಟ ಆಗಿತ್ತು. ಇವಾಗ ಈ ವಿಡಿಯೊ ನೋಡಿ ಇನ್ನೂ ಖುಷಿ ಆಗಿದೆ. ಅಮ್ಮನಾಗುವ ಈ ಸುಂದರ ಘಳಿಗೆಯನ್ನು ಇಷ್ಟು ಸುಂದರವಾಗಿ ಸೆರೆಹಿಡಿದ ನನ್ನ ತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು' ಎಂದು ತಿಳಿಸಿದ್ದಾರೆ.

ಇನ್ನು ಕೊಡಗು ಮೂಲದ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ 2023ರ ಆಗಸ್ಟ್ 24ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 2024ರಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದ ಈ ಜೋಡಿ, ಇದೀಗ ಕುಟುಂಬಕ್ಕೆ ಮತ್ತೊಂದು ಹೊಸ ಸದಸ್ಯನ ಆಗಮನದ ನಿರೀಕ್ಷೆಯಲ್ಲಿ ಸಂತಸದ ದಿನಗಳನ್ನು ಕಳೆಯುತ್ತಿದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Karavali ವಿವಾದ: ನೇರಪ್ರಸಾರದಲ್ಲಿ ಬಂದು ನಟ ಪ್ರಜ್ವಲ್​ ಕುರಿತು ನಟಿ ಮೇಘನಾ ರಾಜ್​ ಏನ್​ ಹೇಳಿದ್ರು
Karavali Controversy: ಕರಾವಳಿ 'ವಿವಾದ'ಕ್ಕೆ ಮತ್ತೊಂದು ಹೊಸ ತಿರುವು, ಮಾಧ್ಯಮ ಪ್ರಕಟಣೆ ನೀಡಿದ ನಿರ್ದೇಶಕ ಗುರುದತ್ ಗಾಣಿಗ!