ಯತಿರಾಜ್‌ ನಿರ್ದೇಶನದ 18ನೇ ಕಿರುಚಿತ್ರ ಆರಾಧ್ಯ

By Kannadaprabha NewsFirst Published Sep 23, 2021, 10:32 AM IST
Highlights

ನೈಜ ಘಟನೆಗಳ ಕಿರುಚಿತ್ರ. ನಟ ಯತಿರಾಜ್ ಕಿರುಚಿತ್ರಗಳು ಸೂಪರ್ ಡೂಪರ್...

ಪತ್ರಕರ್ತ, ನಟ ಯತಿರಾಜ್‌ ಕೊರೋನಾ ಸಂಕಷ್ಟಶುರುವಾದ 18 ಕಿರು ಚಿತ್ರಗಳನ್ನು ನಿರ್ದೇಶಿಸಿ ನಟಿಸಿದ್ದಾರೆ. ಕಲಾವಿದ ಹೆಸರಿನ ಅಭಿನಯ ತರಬೇತಿ ಸಂಸ್ಥೆ ಮೂಲಕ ಈ ಚಿತ್ರಗಳನ್ನು ರೂಪಿಸಿದ್ದು, ಇದೀಗ ‘ಆರಾಧ್ಯ’ ಹೆಸರಿನ 18ನೇ ಕಿರುಚಿತ್ರ ನಿರ್ದೇಶನ ಮಾಡಿದ್ದಾರೆ.

ಹೆಲ್ಮೆಟ್ ಮಹತ್ವ ಸಾರುವ ಮೈಂಡ್ ಇಟ್ ಕಿರುಚಿತ್ರ!

‘ಕಾಡಿದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅದನ್ನು ಸಿನಿಮಾ ಮೂಲಕ ಹೇಳಬೇಕು ಎಂದು ಯೋಚನೆ ಮಾಡಿದ ಪ್ರಯತ್ನದ ಫಲವೇ ಈ ಕಿರುಚಿತ್ರಗಳು. ಪ್ರತಿಯೊಂದು ಕಿರುಚಿತ್ರಕ್ಕೂ ನೈಜ ಘಟನೆಗಳೇ ಸ್ಫೂರ್ತಿ ಮತ್ತು ಆಧಾರ. ಈ ಪೈಕಿ ಆರಾಧ್ಯ ಕಿರುಚಿತ್ರ ನನಗೆ ಹೆಚ್ಚು ಕಾಡಿದೆ’ ಎನ್ನುತ್ತಾರೆ ಯತಿರಾಜ್‌. ಬೇಬಿ ಆರಾಧ್ಯ, ಅಂಜಲಿ, ಶಾಂತಕುಮಾರ್‌ ‘ಆರಾಧ್ಯ’ ಚಿತ್ರದಲ್ಲಿ ನಟಿಸಿದ್ದು, ಜೀವನ್‌ ಛಾಯಾಗ್ರಾಹಣ ಮಾಡಿದ್ದಾರೆ.

 

click me!