ಕುಂಟುತ್ತಲೇ ಜೈಲಿನಿಂದ ಹೊರಬಂದ ನಟ ದರ್ಶನ್.. ಕಣ್ಣಂಚಲ್ಲಿ ನೀರು: ಅಭಿಮಾನಿಗಳ ಸಂಭ್ರಮ

Published : Oct 31, 2024, 10:26 AM IST
ಕುಂಟುತ್ತಲೇ ಜೈಲಿನಿಂದ ಹೊರಬಂದ ನಟ ದರ್ಶನ್.. ಕಣ್ಣಂಚಲ್ಲಿ ನೀರು: ಅಭಿಮಾನಿಗಳ ಸಂಭ್ರಮ

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿದ್ದ ನಟ ದರ್ಶನ್ ಅವರು ಬುಧವಾರ ಸಂಜೆ ಜೈಲಿನಿಂದ ಬಿಡುಗಡೆಯಾದರು. 

ಬಳ್ಳಾರಿ (ಅ.31): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿದ್ದ ನಟ ದರ್ಶನ್ ಅವರು ಬುಧವಾರ ಸಂಜೆ ಜೈಲಿನಿಂದ ಬಿಡುಗಡೆಯಾದರು. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ದಿಂದ ಕಳೆದ ಆ.29ರಂದು ಬಳ್ಳಾರಿ ಜೈಲಿಗೆ ಸ್ಥಳಾಂತರ ಆಗಿದ್ದ ದರ್ಶನ್, 2 ತಿಂಗಳು ಬಳ್ಳಾರಿ ಜೈಲಿನ ಹೈ ಸೆಕ್ಯುರಿಟಿ ಸೆಲ್ ನಲ್ಲಿದ್ದರು. ಬುಧವಾರ ಜಾಮೀನು ಪ್ರಕ್ರಿಯೆ ಮುಗಿಸಿ ಸಂಜೆ 6.10ಕ್ಕೆ ಕುಂಟುತ್ತಲೇ ಹೊರಬಂದ ಅವರನ್ನು ಕಾರು ಹತ್ತಿಸಿದ ಬಳ್ಳಾರಿ ಪೊಲೀಸರು, ಆಂಧ್ರದ ಗಡಿಯ 25 ಕಿ. ಮೀ.ವರೆಗೆ ಭದ್ರತೆ ಒದಗಿಸಿದರು. ಆಂಧ್ರದ ಅನಂತಪುರ ಮಾರ್ಗವಾಗಿ ದರ್ಶನ್ ಬೆಂಗಳೂರಿಗೆ ತೆರಳಿದರು.

ಕಣ್ಣಂಚಲ್ಲಿ ನೀರು: ತಮಗೆ ಆರು ವಾರಗಳ ಷರತ್ತು ಬದ್ಧ ಮಧ್ಯಂತರ ಜಾಮೀನು ಸಿಕ್ಕಿದೆ ಎಂದು ಜೈಲಧಿಕಾರಿಗಳು ಮಾಹಿತಿ ನೀಡುತ್ತಿದ್ದಂತೆ ದರ್ಶನ್ ಕೆಲ ಹೊತ್ತು ಕಣ್ಣುಮುಚ್ಚಿ ದೇವರನ್ನು ಸ್ಮರಿಸಿದರು. ಈ ವೇಳೆ ಅವರ ಕಣ್ಣಂಚಿನಲ್ಲಿ ನೀರು ಜಿನುಗಿತು. ಬಳಿಕ ಜಾ ಮೀನು ವಿಚಾರ ಹೇಳಲು ಆಗಮಿಸಿದ್ದ ಜೈಲಧಿಕಾರಿಗೆ ಕೃತಜ್ಞತೆ ಹೇಳಿ ಮೌನವಾದರು. ಕನಕ ದುರ್ಗಮ್ಮ ದೇವಿ ದೇಗುಲಕ್ಕೆ ವಿಜಯಲಕ್ಷ್ಮಿ ಭೇಟಿ: ಜಾಮೀನು ನಿರೀಕ್ಷೆ ಹಿನ್ನೆಲೆಯಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬ ಸದಸ್ಯರ ಬಳ್ಳಾರಿಗೆ ಆಗಮಿಸಿದ್ದರು. ಜೈಲಿಗೆ ತೆರಳಿ ದರ್ಶನ್‌ರನ್ನು ಕರೆದುಕೊಂಡು ಹೋಗುವ ಮುನ್ನ ವಿಜಯಲಕ್ಷ್ಮಿ ಅವರು ಬಳ್ಳಾರಿಯ ಅಧಿದೇವತೆ ಕನಕ ದುರ್ಗಮ್ಮ ದೇವಸ್ಥಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಜೈಲು ಸಮೀಪ ದರ್ಶನ್ ಅಭಿಮಾನಿಗಳ ಸಂಭ್ರಮ: ನಟ ದರ್ಶನ್‌ಗೆ ಜಾಮೀನು ಸಿಕ್ಕ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಬಳ್ಳಾರಿ ಜೈಲು ಸಮೀಪ ಸಂಭ್ರಮಾಚರಿಸಿದರು. ಬೆಳಗ್ಗೆಯಿಂದಲೇ ಜೈಲು ಬಳಿ ಜಮಾಯಿಸಿದ್ದ ಅಭಿಮಾನಿಗಳು ದರ್ಶನ್ ಫೋಟೋ ಹಿಡಿದು ಘೋಷಣೆ ಕೂಗಿದರು. ಮುನ್ನೆಚ್ಚರಿಕಾ ಕ್ರಮವಾಗಿ ಜೈಲು ಮುಂಭಾಗದ ರಸ್ತೆಯನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿತ್ತು. ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಜೈಲು ಬಳಿ ನಿಯೋಜಿಸಲಾಗಿತ್ತು.

ಇವರೇ ಚಿರಂಜೀವಿ, ಅಲ್ಲು ಅರ್ಜುನ್, ನಿತಿನ್‌ಗೆ ಫೇವರಿಟ್ ಡ್ಯಾನ್ಸ್ ಕೊರಿಯೋಗ್ರಾಫರ್: ಯಾಕೆ ಗೊತ್ತಾ?

ಜೈಲಿಂದ ಹೊರಬಂದ ದರ್ಶನ್ ಕಾರು ಹತ್ತಿ ಕುಟುಂಬ ಸದಸ್ಯರೊಂದಿಗೆ ತೆರಳುತ್ತಿದ್ದಂತೆ ಕೆಲ ಅಭಿಮಾನಿಗಳು ಬೈಕ್, ಕಾರು ಮೂಲಕ ಅವರನ್ನು ಹಿಂಬಾಲಿಸಿದರು. ಅವರ ಪರ ಘೋಷಣೆ ಕೂಗಿದರು.ಇದೇ ವೇಳೆ ಚಾಮ ರಾಜನಗರದಲ್ಲಿ ದರ್ಶನ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬೆಂಗಳೂರಿನ ಆರ್.ಆರ್.ನಗರದ ಅವರ ನಿವಾಸದ ಬಳಿ ಹಲವು ಅಭಿಮಾನಿಗಳು ಜಮಾಯಿಸಿ, ದರ್ಶನ್ ಆಗಮನಕ್ಕಾಗಿ ಕಾದಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?