ಡಿ ಬಾಸ್‌ಗೆ ನಾನೇ ವಿಲ​ನ್‌: ಅಭಿ​ಷೇಕ್‌ ಅಂಬರೀಶ್‌

Published : Feb 24, 2020, 08:42 AM IST
ಡಿ ಬಾಸ್‌ಗೆ ನಾನೇ ವಿಲ​ನ್‌: ಅಭಿ​ಷೇಕ್‌ ಅಂಬರೀಶ್‌

ಸಾರಾಂಶ

‘ಡಿ ಬಾಸ್‌ಗೆ ನಾನೇ ವಿಲ​ನ್‌.’-ಹೀಗೊಂದು ಅಚ್ಚರಿ ಹೇಳಿಕೆ ನೀಡಿದ್ದು ನಟ ಅಭಿ​ಷೇಕ್‌ ಅಂಬರೀಶ್‌. ಅದ​ರಲ್ಲೂ ಅವರು ವಿಲನ್‌ ಆಗು​ತ್ತೇನೆ ಎಂದಿದ್ದು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವ​ರಿಗೆ.

ಸಂದ​ರ್ಭ: ಮುನಿ​ರತ್ನ ಕುರು​ಕ್ಷೇತ್ರ ಚಿತ್ರದ ಶತದಿನೋ​ತ್ಸವ ಸಂಭ್ರಮ. ಬೆಂಗ​ಳೂ​ರಿನ ಮತ್ತಿ​ಕೆ​ರೆ​ಯ​ಲ್ಲಿ​ರುವ ಜೆಪಿ ಪಾರ್ಕ್ ಮೈದಾ​ನ​ದಲ್ಲಿ ನಡೆದ ಕಾರ್ಯ​ಕ್ರಮ ಇದು.

‘ನನಗೆ ಒಂದು ಆಸೆ ಇದೆ. ಅದು ಡಿ ಬಾಸ್‌ ಚಿತ್ರ​ದಲ್ಲಿ ಖಳ​ನಾ​ಯ​ಕ​ನಾಗಿ ನಟಿ​ಸ​ಬೇಕು. ದರ್ಶನ್‌ ಅವ​ರಿಗೇ ನಾನೇ ವಿಲನ್‌ ಆಗ​ಬೇಕು. ಈ ಆಸೆ​ಯನ್ನು ದಯ​ವಿಟ್ಟು ನಿರ್ಮಾ​ಪಕ ಮುನಿ​ರತ್ನ ಅವರೇ ಈಡೇ​ರಿ​ಸ​ಬೇ​ಕು’ ಎಂದು ವೇದಿಕೆ ಮೇಲೆ ಹೇಳಿ​ದರು.

ದರ್ಶನ್ ಹೀರೋ ಆದ್ರೆ ನಾನು ವಿಲನ್‌ ಆಗ್ಲೇಬೇಕು; ಅಭಿಷೇಕ್ ಅಂಬರೀಶ್‌ ಹೊಸ ಡಿಮ್ಯಾಂಡ್!

ಇಷ್ಟಕ್ಕೂ ಅಭಿ​ಷೇಕ್‌ ಯಾಕೆ ವಿಲನ್‌ ಆಗ​ಬೇಕು ಅನಿ​ಸಿದ್ದು. ಅದಕ್ಕೆ ಅವರೇ ವಿವ​ರಣೆ ಕೊಟ್ಟರು. ‘ನನ್ನ ತಂದೆ ಬಿಟ್ಟರೆ ನನಗೆ ಅವ​ರಷ್ಟೇ ಹೆಚ್ಚು ಬೈಯ್ದು ಬುದ್ಧಿ ಹೇಳು​ವುದು ದರ್ಶನ್‌ ಅವರು. ಒಮ್ಮೆ ನಮ್ಮ ತಂದೆ​ಯ​ವರೇ ನೀನು ನನ್ನ ಮಾತು ಕೇಳಲ್ಲ, ನಿನಗೆ ಆ ದರ್ಶನ್‌ ಸರಿ ಎನ್ನು​ತ್ತಿ​ದ್ದರು. ಹೀಗಾಗಿ ನನ್ನ ಗದರು​ವುದು, ಬುದ್ಧಿ ಹೇಳು​ವುದು ದರ್ಶನ್‌ ಮಾತ್ರ. ಇದನ್ನೇ ಅವರು ತೆರೆ ಮೇಲೆ ಮಾಡಲಿ. ಅವ​ರಿಂದ ಬೈಯಿ​ಸಿ​ಕೊ​ಳ್ಳುವ, ಬುದ್ಧಿ ಹೇಳಿ​ಕೊಂಡು ಸರಿ ಹೋಗುವ ವಿಲನ್‌ ಪಾತ್ರ ಮಾಡು​ತ್ತೇನೆ’ ಎಂದರು ಅಭಿ​ಷೇಕ್‌.

ಎಕ್ಸಾಂ ಟೆನ್ಷನ್‌ಗೆ ನೋ ಹೇಳಿ; ಡಿ-ಬಾಸ್‌ ಕೊಟ್ಟ ಟಿಪ್ಸ್ ನೋಡಿ!

ಅಂದ​ಹಾಗೆ ಹೀಗೆ ಅಭಿ​ಷೇಕ್‌ ಮತ್ತು ದರ್ಶನ್‌ ಅವರ ಕಾಂಬಿ​ನೇ​ಷನ್‌ ಚಿತ್ರ​ವನ್ನು ನಿರ್ಮಾ​ಪಕ ಮುನಿ​ರತ್ನ ಅವರೇ ಮಾಡ​ಬೇಕು ಎಂದು ಅಭಿ​ಷೇಕ್‌ ಹೇಳಿ​ದ್ದಕೂ ಒಂದು ಕಾರಣ ಇದೆ. ‘ನಿಮ್ಮ ಬ್ಯಾನ​ರ್‌​ನಲ್ಲಿ ನಮ್ಮ ತಂದೆ ನಟಿ​ಸಿ​ದ್ದಾರೆ. ನಮ್ಮ ತಾಯಿ ನಟಿ​ಸಿ​ದ್ದಾರೆ. ಈಗ ನನಗೂ ಒಂದು ಅವ​ಕಾಶ ಕೊಡಿ’ ಎಂದು ಅಭಿ​ಷೇಕ್‌ ಹೇಳಿ​ದಾ​ಗ ‘ನಿಮ್ಮ ಆಸೆ​ಯನ್ನು ಈ ವರ್ಷವೇ ಈಡೇ​ರಿ​ಸು​ತ್ತೇ​ನೆ’ ಎಂದು ಮುನಿ​ರತ್ನ ಭರ​ವಸೆ ಕೊಟ್ಟರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

‘ಯೂ ಟರ್ನ್‌’ ಮೂಲಕ ಸದ್ದು ಮಾಡಿದ್ದ ಶ್ರದ್ಧಾ ಶ್ರೀನಾಥ್‌ಗೆ ಈಗ ಅವಕಾಶಗಳ ಕೊರತೆ: ಕಾರಣವೇನು?
‘ರಾಕಿ ಭಾಯ್‌’ ಬಾಡಿಯ ಹಿಂದೆ ಮ್ಯಾಜಿಕ್‌ ಇಲ್ಲ: ಯಶ್‌ ಫಾಲೋ ಮಾಡುವ ಫಿಟ್‌ನೆಸ್‌ ಮಂತ್ರ ಇದು!