ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?

ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?

Published : Apr 06, 2026, 08:33 PM IST

ದಾವಣಗೆರೆ ದಕ್ಷಿಣ ಕ್ಷೇತ್ರದ ಪ್ರಚಾರದಿಂದ ದೂರವಿದ್ದ ಜಮೀರ್ ಅಹ್ಮದ್ ಖಾನ್, ಸಿಎಂ ಸಿದ್ದರಾಮಯ್ಯ ಕಟ್ಟುನಿಟ್ಟಿನ ಆದೇಶದ ಮೇರೆಗೆ ಅಖಾಡಕ್ಕಿಳಿದಿದ್ದಾರೆ. ಕಾಂಗ್ರೆಸ್ ಪರವಾಗಿ ಕ್ರೋಢೀಕರಿಸುವುದು  ಜವಾಬ್ದಾರಿಯಾಗಿದೆ, ಆದರೆ ಸ್ಥಳೀಯ ನಾಯಕರೊಂದಿಗಿನ ಮುನಿಸು ಶಮನವಾಗಿದೆಯೇ ಎಂಬುದು ಇನ್ನೂ ಪ್ರಶ್ನೆಯಾಗಿದೆ.

ದಾವಣಗೆರೆ: ಬೆಣ್ಣೆನಗರಿ ದಾವಣಗೆರೆಯ ರಾಜಕೀಯ ಅಖಾಡ ಈಗ ಕಾವೇರಿದೆ. ಇಷ್ಟು ದಿನ 'ಜಮೀರ್ ಎಲ್ಲಿದ್ದಾರೆ? ದಾವಣಗೆರೆಗೆ ಯಾಕೆ ಬರ್ತಿಲ್ಲ?' ಎಂಬ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಮುಸ್ಲಿಂ ಕೋಟೆಯನ್ನು ಭದ್ರಪಡಿಸಲು ಕಾಂಗ್ರೆಸ್‌ನ ಅಲ್ಪಸಂಖ್ಯಾತ ಸಮುದಾಯದ ನಾಯಕ ಜಮೀರ್ ಅಹ್ಮದ್ ಖಾನ್ ಅಖಾಡಕ್ಕೆ ಇಳಿದಿದ್ದಾರೆ. ಆದರೆ, ಈ ಎಂಟ್ರಿಯ ಹಿಂದೆ 'ಹುಲಿಯಾ' ಸಿದ್ದರಾಮಯ್ಯ ಅವರ ಕಟ್ಟುನಿಟ್ಟಿನ ಆದೇಶವಿದೆ ಎಂಬ ಚರ್ಚೆ ಜೋರಾಗಿದೆ.

ಸಿದ್ದರಾಮಯ್ಯ ಹುಕುಂಗೆ ಬಗ್ಗಿದ್ರಾ ಜಮೀರ್?

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅತಿ ಹೆಚ್ಚು ಮುಸ್ಲಿಂ ಮತದಾರರಿದ್ದಾರೆ. ಆದರೆ, ಟಿಕೆಟ್ ಹಂಚಿಕೆ ವಿಚಾರದಲ್ಲಿ ಜಮೀರ್ ಅಹ್ಮದ್ ಖಾನ್ ಮತ್ತು ಸ್ಥಳೀಯ ನಾಯಕರ ನಡುವೆ ಅಸಮಾಧಾನದ ಜ್ವಾಲೆ ಧಗಧಗಿಸುತ್ತಿತ್ತು. ಇದೇ ಕಾರಣಕ್ಕೆ ಜಮೀರ್ ಪ್ರಚಾರದಿಂದ ದೂರ ಉಳಿದಿದ್ದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಸಿಎಂ ಸಿದ್ದರಾಮಯ್ಯ, ಜಮೀರ್‌ಗೆ ನೇರ 'ಹುಕುಂ' ಹೊರಡಿಸಿದ್ದರು. 'ಯಾವುದೇ ಮುನಿಸು ಇದ್ದರೂ ಸರಿ, ದಾವಣಗೆರೆಯಲ್ಲಿ ಪಕ್ಷ ಗೆಲ್ಲಬೇಕು' ಎಂಬ ಹೈಕಮಾಂಡ್ ಮಾದರಿಯ ಸೂಚನೆ ಬಂದ ಬೆನ್ನಲ್ಲೇ ಜಮೀರ್ ದಾವಣಗೆರೆಗೆ ಧಾವಿಸಿದ್ದಾರೆ.

ದೋಸ್ತಿ ಪಡೆಯ ಅಬ್ಬರಕ್ಕೆ ಕಾಂಗ್ರೆಸ್ ಕೌಂಟರ್:

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಈವರೆಗೂ ಬಿಜೆಪಿ ಅಧಿಕಾರ ಹಿಡಿದಿಲ್ಲ. ಆದರೆ ಈ ಬಾರಿ ಹಳೆ ಮೈಸೂರು ಭಾಗದ ದೋಸ್ತಿಗಳಾದ ಬಿ.ವೈ. ವಿಜಯೇಂದ್ರ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಒಂದಾಗಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಈ ಬಾರಿ ಕಾಂಗ್ರೆಸ್ ಕೋಟೆಯನ್ನು ಕೆಡವಲು ಜಂಟಿ ಸಮರ ಸಾರಿದೆ. ದೋಸ್ತಿ ಪಡೆಯ ಈ ಅಬ್ಬರಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್‌ಗೆ ಜಮೀರ್ ಅಹ್ಮದ್ ಅವರಂತಹ ಪ್ರಭಾವಿ ಮುಸ್ಲಿಂ ನಾಯಕನ ಅಗತ್ಯವಿತ್ತು. ಜಮೀರ್ ಎಂಟ್ರಿಯಿಂದಾಗಿ ಮುಸ್ಲಿಂ ಮತಗಳು ಚದುರದಂತೆ ಕಬ್ಜಾ ಮಾಡುವುದು ಕಾಂಗ್ರೆಸ್ ತಂತ್ರವಾಗಿದೆ.

ಜಂಟಿ ಸುದ್ದಿಗೋಷ್ಠಿ.. ಒಗ್ಗಟ್ಟಿನ ಮಂತ್ರ:

ದಾವಣಗೆರೆಗೆ ಆಗಮಿಸಿದ ಜಮೀರ್ ಅಹ್ಮದ್ ಖಾನ್ ಅವರು ಅಭ್ಯರ್ಥಿ ಮಲ್ಲಿಕಾರ್ಜುನ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದರು. 'ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ' ಎಂಬ ಸಂದೇಶವನ್ನು ರವಾನಿಸಿದರು. ಇಬ್ಬರೂ ನಾಯಕರು ನಗುನಗುತ್ತಾ ಕ್ಯಾಮರಾಕ್ಕೆ ಪೋಸ್ ನೀಡಿದ್ದು, ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಆದರೆ, ರಾಜಕೀಯ ವಿಶ್ಲೇಷಕರ ಪ್ರಕಾರ, ಈ ನಗು ಕೇವಲ ಹೊರಗಿನ ಪ್ರದರ್ಶನವೋ ಅಥವಾ ಒಳಗಿನ ಮುನಿಸು ನಿಜವಾಗಿಯೂ ತಣ್ಣಗಾಗಿದೆಯೋ ಎಂಬ ಅನುಮಾನ ಇನ್ನೂ ಇದೆ.

ಒಳಗೆ ಮುನಿಸು.. ಹೊರಗೆ ದೋಸ್ತಿಯಾ?

ಜಮೀರ್ ಮತ್ತು ಮಲ್ಲಿಕಾರ್ಜುನ್ ನಡುವಿನ ಟಿಕೆಟ್ ಫೈಟ್ ಸಮಯದಲ್ಲಿ 'ನೀನಾ-ನಾನಾ' ಎನ್ನುವ ಜಿದ್ದಾಜಿದ್ದಿ ನಡೆದಿತ್ತು. ಈಗ ಅನಿವಾರ್ಯವಾಗಿ ಒಂದೇ ವೇದಿಕೆಯಲ್ಲಿ ಕುಳಿತರೂ, ಜಮೀರ್ ಅವರ ಕೆಲವು ನಡವಳಿಕೆಗಳು ಅಸಮಾಧಾನದ ಸುಳಿವು ನೀಡುತ್ತಿವೆ ಎನ್ನಲಾಗುತ್ತಿದೆ. 'ಸಿದ್ದರಾಮಯ್ಯ ಅವರಿಗಾಗಿ ನಾನು ಬಂದಿದ್ದೇನೆ' ಎಂಬ ಧಾಟಿಯಲ್ಲಿ ಜಮೀರ್ ಮಾತನಾಡುತ್ತಿರುವುದು, ಸ್ಥಳೀಯ ಅಭ್ಯರ್ಥಿಯೊಂದಿಗೆ ಇನ್ನೂ ಸಂಪೂರ್ಣವಾಗಿ ಬೆರೆಯದಿರುವುದನ್ನು ಸೂಚಿಸುತ್ತಿದೆ.

ಒಟ್ಟಾರೆಯಾಗಿ, ದಾವಣಗೆರೆ ದಕ್ಷಿಣದ 'ದಂಗಲ್' ಈಗ ರೋಚಕವಾಗಿದೆ. ಒಂದೆಡೆ ವಿಜಯೇಂದ್ರ-ಕುಮಾರಸ್ವಾಮಿ ಜೋಡಿಯ 'ದೋಸ್ತಿ' ಪವರ್, ಇನ್ನೊಂದೆಡೆ ಜಮೀರ್ ಅಹ್ಮದ್ ಅವರ 'ಸುಲ್ತಾನ್' ಎಂಟ್ರಿ. ಈ ನಡುವೆ ಮುಸ್ಲಿಂ ಮತದಾರರು ಯಾರ ಕೈ ಹಿಡಿಯುತ್ತಾರೆ? ಜಮೀರ್ ಎಂಟ್ರಿ ಕಾಂಗ್ರೆಸ್‌ಗೆ ವರದಾನವಾಗುತ್ತಾ ಅಥವಾ ಒಳಗೊಳಗೇ ಇರುವ ಅಸಮಾಧಾನ ಮುಳುವಾಗುತ್ತಾ? ಕಾದು ನೋಡಬೇಕಿದೆ.

24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
Read more