Punjab Election : ಕಾಂಗ್ರೆಸ್ ನ ಪಾಪದಿಂದಾಗಿ ಇಂದು ಕರ್ತಾರ್ ಪುರ ಪಾಕಿಸ್ತಾನದ ಭಾಗವಾಗಿದೆ ಎಂದ ಪ್ರಧಾನಿ ಮೋದಿ!

Suvarna News   | Asianet News
Published : Feb 18, 2022, 12:14 AM IST
Punjab Election : ಕಾಂಗ್ರೆಸ್ ನ ಪಾಪದಿಂದಾಗಿ ಇಂದು ಕರ್ತಾರ್ ಪುರ ಪಾಕಿಸ್ತಾನದ ಭಾಗವಾಗಿದೆ ಎಂದ ಪ್ರಧಾನಿ ಮೋದಿ!

ಸಾರಾಂಶ

ಪಂಜಾಬ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮಾವೇಶ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ನರೇಂದ್ರ ಮೋದಿ ಪಂಜಾಬ್ ರಾಜ್ಯಕ್ಕೆ ಭಾನುವಾರ ನಡೆಯಲಿದೆ ಚುನಾವಣೆ

ಪಠಾಣ್ ಕೋಟ್ (ಫೆ.17): ಸಿಖ್ಖರ ಪವಿತ್ರ ಸ್ಥಳವಾದ ಕರ್ತಾರ್‌ಪುರ ಸಾಹಿಬ್ (Kartarpur Sahib) ವಿಭಜನೆಯ ನಂತರ ( after Partition) ಕಾಂಗ್ರೆಸ್‌ನಿಂದಾಗಿ (Congress) ಪಾಕಿಸ್ತಾನದ (Pakistan ) ಭಾಗವಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi ) ಆರೋಪಿಸಿದ್ದಾರೆ. ಬುಧವಾರ ಪಠಾಣ್‌ಕೋಟ್‌ನಲ್ಲಿ (Pathankot ) ನಡೆದ ಚುನಾವಣಾ ಸಮಾವೇಶದಲ್ಲಿ (election rally) ಮಾತನಾಡಿದ ಅವರು ಕಾಂಗ್ರೆಸ್ ಆಡಳಿತವನ್ನು ಟೀಕೆ ಮಾಡಿದರು. ಪಂಜಾಬ್‌ನ ಮತದಾರರಿಗೆ 'ವಂಶಾಡಳಿತ(dynasty), ತುಷ್ಟೀಕರಣ (appeasement ) ಮತ್ತು ಭ್ರಷ್ಟಾಚಾರವನ್ನು (corruption) ಉತ್ತೇಜಿಸುವ ರಾಜಕೀಯವನ್ನು ಬೇರುಸಹಿತ ಕಿತ್ತುಹಾಕುವಂತೆ' ಮನವಿ ಮಾಡಿದರು.

“ಭಾರತ ವಿಭಜನೆಯಾದಾಗ, ಗುರುನಾನಕ್ ದೇವ್ (Guru Nanak Dev ) ಅವರ ಪವಿತ್ರ ಸ್ಥಳವು ಗಡಿಯಿಂದ ಕೇವಲ 6 ಕಿಮೀ ದೂರದಲ್ಲಿದೆ ಎಂಬ ತಿಳುವಳಿಕೆಯೂ ಕಾಂಗ್ರೆಸ್ ನಾಯಕರಿಗೆ ಇರಲಿಲ್ಲ, ಅವರು ಈ ಪವಿತ್ರ ಸ್ಥಳವನ್ನು ಭಾರತದಲ್ಲಿ ಇರಿಸಿಕೊಳ್ಳುವ ಎಲ್ಲಾ ಅವಕಾಶವನ್ನೂ ಹೊಂದಿದ್ದರು, ಆದರೆ ಅವರು ಹಾಗೆ ಮಾಡಲಿಲ್ಲ. ಅವರು ಪಾಪ ಮಾಡಿದ್ದಾರೆ ಮತ್ತು ನಮ್ಮ ಭಾವನೆಗಳನ್ನು ತುಳಿದಿದ್ದಾರೆ ಎಂದು ಮೋದಿ ವಾಗ್ದಾಳಿ ನಡೆಸಿದರು. ಪಾಕಿಸ್ತಾನಿ ಭಯೋತ್ಪಾದಕರು (Pakistani terrorists ) ಪಠಾಣ್‌ಕೋಟ್ ಮೇಲೆ ದಾಳಿ ಮಾಡಿದಾಗ ಇಡೀ ದೇಶ ಒಗ್ಗಟ್ಟಾಗಿತ್ತು ಆದರೆ ಕಾಂಗ್ರೆಸ್ ನಮ್ಮ ಸೈನಿಕರ ಶೌರ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತಿತು ಮತ್ತು ಹುತಾತ್ಮರ ಮೇಲೆ ಕೆಸರನ್ನು ಎರಚುವ ಕೆಲಸ ಮಾಡಿತು ಎಂದು ಮೋದಿ ಹೇಳಿದರು. ಪುಲ್ವಾಮಾ ದಾಳಿಯ ವಾರ್ಷಿಕೋತ್ಸವದಂದು, ಆ ದಾಳಿಯ ಬಗ್ಗೆ ಪುರಾವೆ ಕೇಳಿದ ಜನ ಅವರು ಎಂದು ಮೋದಿ ಟೀಕೆ ಮಾಡಿದ್ದಾರೆ.

ಎಎಪಿ (AAP) ಮತ್ತು ಕಾಂಗ್ರೆಸ್ (Congress) ಅನ್ನು ಉಲ್ಲೇಖಿಸಿ ಮಾತನಾಡಿದ ಮೋದಿ, "ಅವರಿಬ್ಬರೂ ಈ ಅಪರಾಧದಲ್ಲಿ ಪಾಲುದಾರರು. ಎರಡು ಪಕ್ಷಗಳ ನಡುವೆ ಸಾಕಷ್ಟು ಸಾಮ್ಯತೆ ಇದೆ. ಇಬ್ಬರೂ ಜಂಟಿಯಾಗಿ ಅಯೋಧ್ಯೆಯಲ್ಲಿ ರಾಮಮಂದಿರವನ್ನು ವಿರೋಧಿಸುತ್ತಾರೆ. ನಮ್ಮ ಸೈನಿಕರ ಶೌರ್ಯದ ಬಗ್ಗೆ ಮಾತನಾಡುತ್ತಾರೆ. ಪಾಕಿಸ್ತಾನದ ನಾಯಕರು ಏನು ಹೇಳುತ್ತಾರೋ ಅವರು ಅದನ್ನು ಇಲ್ಲಿ ಹೇಳುತ್ತಾರೆ' ಎಂದು ಹೇಳಿದರು.

Punjab Elections: ಮೋದಿ 'ಶಬ್ಧ ಕೀರ್ತನೆ' ಹಿಂದಿದ್ಯಾ ಪಂಜಾಬ್ ಮತಬೇಟೆ ರಹಸ್ಯ?
'ಹೊಸ ಪಂಜಾಬ್' ನಿರ್ಮಾಣದ ಕರೆಯನ್ನು ಪುನರುಚ್ಚರಿಸಿದ ಮೋದಿ, ಬಿಜೆಪಿ-ಎನ್‌ಡಿಎ (BJP-NDA) ಬಲಿಷ್ಠ ಸರ್ಕಾರ ರಚಿಸಲಿದೆ ಎಂದು ಹೇಳಿದ್ದಾರೆ. ಎಲ್ಲೆಲ್ಲಿ ಅಭಿವೃದ್ಧಿ ನಡೆದಿದೆಯೋ ಅಲ್ಲೆಲ್ಲ ರಾಜವಂಶದ ಆಡಳಿತ ಕೊಚ್ಚಿಕೊಂಡು ಹೋಗಿದೆ, ಎಲ್ಲೆಲ್ಲಿ ಶಾಂತಿ-ಭದ್ರತೆ ನೆಲೆಸಿದೆಯೋ ಅಲ್ಲೆಲ್ಲ ತುಷ್ಟೀಕರಣ, ಭ್ರಷ್ಟಾಚಾರವನ್ನು ಪ್ಯಾಕ್ ಮಾಡಲಾಗಿದೆ. ಈ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ ರಾಜವಂಶ, ತುಷ್ಟೀಕರಣ ಮತ್ತು ಭ್ರಷ್ಟಾಚಾರವನ್ನು ಪ್ಯಾಕ್ ಮಾಡಿ ಕಳುಹಿಸಬೇಕಿದೆ ಎಂದರು.

Hijab Row: ಹಿಜಾಬ್ ಸಂಘರ್ಷಕ್ಕೂ ಎಂಟ್ರಿ ಕೊಟ್ಟ ಖಲಿಸ್ತಾನ್, ಬಯಲಾಯ್ತು ಷಡ್ಯಂತ್ರ!
ನಂತರ, ಯುಪಿಯ ಸೀತಾಪುರದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಅಲ್ಲಿ ಬಿಜೆಪಿ ಸರ್ಕಾರವು "ದಂಗರಾಜ್, ಮಾಫಿಯಾರಾಜ್, ಗೂಂಡಾರಾಜ್" ಮೇಲಿನ ನಿಯಂತ್ರಣ ಮತ್ತು ಎಲ್ಲಾ ಹಬ್ಬಗಳನ್ನು ಆಚರಿಸುವ ಸ್ವಾತಂತ್ರ್ಯಕ್ಕಾಗಿ ನಿಂತಿದೆ ಎಂದು ತಿಳಿಸಿದರು. ಇದರರ್ಥ ಈವ್ ಟೀಸರ್‌ಗಳಿಂದ ಮಹಿಳೆಯರ ಸುರಕ್ಷತೆ. ಇದರರ್ಥ ಕಲ್ಯಾಣಕ್ಕಾಗಿ ನಿರಂತರ ಕೆಲಸ. ಬಡವರ, ಇದರರ್ಥ ಕೇಂದ್ರ ಯೋಜನೆಗಳ ಮೇಲೆ ದುಪ್ಪಟ್ಟು ವೇಗದಲ್ಲಿ ಕೆಲಸ," ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೂರು ವರ್ಷಗಳಲ್ಲಿ 57,733 ಸೈಬರ್ ಅಪರಾಧ, ₹5,473 ಕೋಟಿ ವಂಚನೆ: ಗೃಹ ಸಚಿವ ಪರಮೇಶ್ವರ್
ಮೇಕೆದಾಟು, ಭದ್ರಾ, ಕೃಷ್ಣಾ ಯೋಜನೆಗಳಲ್ಲಿ ಕೇಂದ್ರ ಸರ್ಕಾರ ವಿಳಂಬ: ಡಿ.ಕೆ.ಶಿವಕುಮಾರ್ ಆಕ್ರೋಶ