ನಿಗಮ ಮಂಡಳಿ ಅಧ್ಯಕ್ಷರ ನೇಮಕ ಪಟ್ಟಿ ಘೋಷಣೆ: ಯಾರಿಗೆ? ಯಾವುದು?

By Web DeskFirst Published Dec 22, 2018, 6:56 PM IST
Highlights

ರಾಜ್ಯದ ಒಟ್ಟು 19 ವಿವಿಧ ನಿಗಮಗಳು ಮತ್ತು ಮಂಡಳಿಗಳಿಗೆ ಅಧ್ಯಕ್ಷರ ನೇಮಕಕ್ಕೆ ಕಾಂಗ್ರೆಸ್ ಆದೇಶ ನೀಡಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಧಿಕೃತ ಘೋಷಣೆ ಮಾಡಿದ್ದಾರೆ. ಹಾಗಾದ್ರೆ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ?

ಬೆಂಗಳೂರು, [ಡಿ, 22]: ಕಾಂಗ್ರೆಸ್ ಹೈಕಮಾಂಡ್ ಇಬ್ಬರು ಹಾಲಿ ಸಚಿವರಿಗೆ ಕೊಕ್ ಕೊಟ್ಟ ಒಟ್ಟು 8 ಶಾಸಕರಿಗೆ ಸಚಿವ ಸ್ಥಾನ ನೀಡಿದೆ. ಅದರಂತೆ ಇಂದು [ಶನಿವಾರ]  8 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. 

 ಇನ್ನು ರಾಜ್ಯದ ಒಟ್ಟು 19 ವಿವಿಧ ನಿಗಮಗಳು ಮತ್ತು ಮಂಡಳಿಗಳಿಗೆ ಅಧ್ಯಕ್ಷರ ನೇಮಕಕ್ಕೆ ಕಾಂಗ್ರೆಸ್ ಆದೇಶ ನೀಡಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಧಿಕೃತ ಘೋಷಣೆ ಮಾಡಿದ್ದಾರೆ.

ನೂತನ ಸಚಿವರ ಪ್ರಮಾಣ ವಚನ: ಯಾರ್ಯಾರಿಗೆ ಯಾವ್ಯಾವ ಖಾತೆ..?

ಇದರಲ್ಲಿ ಸಂಸದೀಯ ಕಾರ್ಯದರ್ಶಿಗಳ ಪಟ್ಟಿಯಲ್ಲಿ ಜಯನಗರ ಶಾಸಕಿ ಸೌಮ್ಯರೆಡ್ಡಿ ಹೆಸರನ್ನು ಕೈಬಿಡಲಾಗಿದೆ. ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ಶರಣಬಸಪ್ಪ ದರ್ಶನಾಪುರ್ ಅವರನ್ನ ನೇಮಿಸಿದ್ದಾರೆ.

ಸಂಪುಟ ವಿಸ್ತರಣೆ: ಸಿದ್ರಾಮಯ್ಯ ಹೇಳಿದಂತೆ ಉತ್ತರ ಕರ್ನಾಟಕಕ್ಕೆ ಅಗ್ರಸ್ಥಾನ

ನವದೆಹಲಿಯಲ್ಲಿ ವಿಶೇಷ ಪ್ರತಿನಿಧಿಯಾಗಿ ಡಾ. ಅಜಯ್​ ಸಿಂಗ್​ ಅವರನ್ನ ಆಯ್ಕೆ ಮಾಡಲಾಗಿದೆ. ಇನ್ನು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ವಿ ಮುನಿಯಪ್ಪ ಅವರನ್ನ ನೇಮಿಸಲಾಗಿದೆ.

ಹಾಗಾದ್ರೆ ನಿಗಮ ಮಂಡಳಿಯಲ್ಲಿ ಯಾರ್ಯಾರಿದ್ದಾರೆ? 

1. ಕರ್ನಾಟಕ ಭೂ ಸೇನಾ ನಿಗಮ- ಬಿ.ಕೆ.ಸಂಗಮೇಶ್ವರ್​
2. ಕರ್ನಾಟಕ ಆಹಾರ ಮತ್ತು ಸರಬರಾಜು ನಿಗಮ- ನರೇಂದ್ರ ಆರ್.​
3. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ- ಬಿ.ನಾರಾಯಣ ರಾವ್​
4. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ- ಟಿ.ವೆಂಕಟರಮಣಯ್ಯ
5. ಕರ್ನಾಟಕ ಗೋದಾಮು ನಿಗಮ- ಡಾ.ಉಮೇಶ್​ ಜಿ. ಜಾಧವ್​
6. ಹಟ್ಟಿ ಚಿನ್ನದ ಗಣಿ ಲಿಮಿಟೆಡ್​- ಟಿ.ರಘುಮೂರ್ತಿ
7. ಕರ್ನಾಟಕ ರೇಷ್ಮೆ ಕೈಗಾರಿಕೆ ನಿಗಮ- ಎಸ್​.ಎನ್. ಸುಬ್ಬಾರೆಡ್ಡಿ
8. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ- ಯಶ್ವಂತ್​ ರಾಯ್​ ಗೌಡ ವಿ.ಪಾಟೀಲ್
9. ಕರ್ನಾಟಕ ಸಾಬೂನು ಮಾರ್ಜಕ ನಿಯಮಿತ ಮಂಡಳಿ- ಬಿ.ಎ.ಬಸವರಾಜು
10. ಕಿಯಾನಿಕ್ಸ್​- ಬಿ.ಶಿವಣ್ಣ
11. ಡಾ.ಬಿ.ಆರ್.ಅಂಬೇಡ್ಕರ್​ ಅಭಿವೃದ್ಧಿ ನಿಗಮ- ನಾರಾಯಣಸ್ವಾಮಿ ಎಸ್.ಎನ್​
12. ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ- ಮುನಿರತ್ನ
13. ವಾಯವ್ಯ ಕೆಎಸ್​ಆರ್​ಟಿಸಿ- ಶಿವರಾಮ್​ ಹೆಬ್ಬಾರ್
14. ಬಿಎಂಆರ್​ಡಿಎ – ಎನ್​.ಎ. ಹ್ಯಾರಿಸ್​
15. ಬಿಡಿಎ- ಸೋಮಶೇಖರ್​ ಎಸ್.​ಟಿ
16. ಕೆಎಸ್​ಎಸ್​ಐಡಿಸಿ- ಬಿ.ಎಸ್​ ಸುರೇಶ್​
17. ಮಾಲಿನ್ಯ ನಿಯಂತ್ರಣ ಮಂಡಳಿ- ಡಾ ಕೆ.ಸುಧಾಕರ್​ ​
18. ಮೈಸೂರು ಮಿನರಲ್ಸ್ ಲಿಮಿಟೆಟ್ – ಲಕ್ಷ್ಮೀ ಹೆಬ್ಬಾಳ್ಕರ್
19. ಮಲ್ನಾಡ್ ಏರಿಯಾ ಅಭಿವೃದ್ದಿ ಪ್ರಾಧಿಕಾರ – ಟಿ.ಡಿ ರಾಜೇಗೌಡ

ಸಂಸದೀಯ ಕಾರ್ಯದರ್ಶಿಗಳು
1. ಅಬ್ದುಲ್ ಜಬ್ಬರ್
2. ಅಂಜಲಿ ನಿಂಬಾಳ್ಕರ್​
3. ಐವಾನ್ ಡಿಸೋಜ
4. ಮಹಾಂತೇಶ ಕೌಜಲಗಿ
5. ರೂಪ ಶಶಿಧರ್
6. ಕೆ. ಗೋವಿಂದರಾಜ್
7. ರಾಘವೇಂದ್ರ ಹಿಟ್ನಾಳ್
8. ಎಂ.ಎ ಗೋಪಾಲಸ್ವಾಮಿ
9. ದುರ್ಗಪ್ಪ ಹುಲಗೆರೆ

click me!