
ಬಿಡದಿ ಅಖಾಡದಲ್ಲಿ ಮದ್ದಾನೆಗಳ ಗುದ್ದಾಟ.. ಸವಾಲಿಗೆ ಸವಾಲ್! ಜೈಲಿಗೆ ಕಳುಹಿಸೋ ಹುನ್ನಾರ ‘‘ಸಿದ್ಧನಿದ್ದೇನೆ ಸಹೋದರ’’..! 36 ಎಕರೆ ಜಮೀನು.. ನನ್ನ ಕೆಣಕಬೇಡಿ.. ಡಿಕೆವಾರ್ನಿಂಗ್..! ಬಿಗಡಾಯಿಸಿದ ಬಿಡದಿ..
ಬಿಡದಿ ಅಖಾಡದಲ್ಲಿ ಮದ್ದಾನೆಗಳ ಗುದ್ದಾಟ.. ಸವಾಲಿಗೆ ಸವಾಲ್! ಜೈಲಿಗೆ ಕಳುಹಿಸೋ ಹುನ್ನಾರ ‘‘ಸಿದ್ಧನಿದ್ದೇನೆ ಸಹೋದರ’’..! 36 ಎಕರೆ ಜಮೀನು.. ನನ್ನ ಕೆಣಕಬೇಡಿ.. ಡಿಕೆವಾರ್ನಿಂಗ್..! ಬಿಗಡಾಯಿಸಿದ ಬಿಡದಿ ಭೂ ಯುದ್ಧಕ್ಕೆ 2 ತಿಂಗಳ ಬಿಡುವು..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ.. ಬಿಡದಿ ಅಖಾಡದಲ್ಲಿ ರಾಜಕೀಯ ಯುದ್ಧ ಶುರುವಾಗಿದೆ.. ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಹಾಲಿ ಸಿಎಂ ಡಿ.ಕೆ.ಶಿವಕುಮಾರ್ ಅವರ ಮಧ್ಯೆ ಮಾತಿನ ಮಲ್ಲಯುದ್ಧ ನಡೆದಿದೆ.. ದಿಢೀರ್ ಅಂತ ಮಾಧ್ಯಮಗೋಷ್ಠಿ ನಡೆಸಿದ್ದ ಡಿ.ಕೆ.ಶಿವಕಮಾರ್ ಅವರು ಹೆಚ್ಡಿಕೆ ವಿರುದ್ಧ ಆರೋಪಗಳ ಮಳೆಯನ್ನೇ ಸುರಿಸಿದ್ರು. ಇದಾಗಿ ಕೆಲವೇ ಗಂಟೆಗಳು ಕಳೆದಿದ್ದವಷ್ಟೇ ಕುಮಾರಸ್ವಾಮಿಯವರು ಸಹ ಪ್ರೆಸ್ಮಿಟ್ ಮಾಡಿ ಸಿಎಂ ವಿರುದ್ಧ ಮುಗಿಬಿದ್ದಿದ್ದಾರೆ.
ಇಬ್ಬರ ಮಧ್ಯೆಯೂ ಆರೋಪ-ಪ್ರತ್ಯಾರಾಪಗಳು ಜೋರಾಗಿವೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ನಿಖಿಲ್ ಕುಮಾರಸ್ವಾಮಿ ಕೂಡ ಡಿಕೆ ವಿರುದ್ಧ ಮುಗಿ ಬಿದ್ದಿದ್ದು, ಸಿಎಂ ಕಡೆಯಿಂದಲೂ ಅದಕ್ಕೆ ಕೌಂಟರ್ ಬಂದಿದೆ. ಬಿಡದಿ ಟೌನ್ಶಿಪ್ ವಿಚಾರವಾಗಿ ರೈತರ ಪರವಾಗಿ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸ್ಬೇಕಾಗುತ್ತೆ ಎನ್ನುವ ಎಚ್ಚರಿಕೆಯ ಸಂದೇಶವನ್ನ ದೇವೇಗೌಡರು ರವಾನಿಸಿದ್ದರು. ಮಾಜಿ ಪ್ರಧಾನಿಗಳ ಈ ಎಚ್ಚರಿಕೆಯ ಮಾತಿಗೆ ಸಿಎಂ ಡಿಕೆ ತಮ್ಮದೇ ಶೈಲಿಯಲ್ಲಿ ಕುಟುಕಿದ್ದಾರೆ. ಇಷ್ಟೆಲ್ಲದರ ಮಧ್ಯೆ ಮತ್ತೆ ನಾಲ್ಕು ಗ್ರಾಮಗಳ ಭೂ ಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ. ಬಿಡದಿ ಟೌನ್ಶಿಪ್ ವಿಚಾರವಾಗಿ ರಾಜಕೀಯ ಜಿದ್ದಾಜಿದ್ದಿ ಜೋರಾಗಿದೆ. ಇಷ್ಟೆಲ್ಲದರ ನಡುವೆಯೂ ಮತ್ತೆ ನಾಲ್ಕು ಗ್ರಾಮಗಳ ಭೂ ಸ್ವಾಧೀನಕ್ಕೆ ಸರ್ಕಾರವು ಅಂತಿಮ ಅಧಿಸೂಚನೆಯನ್ನ ಹೊರಡಿಸಿದೆ.