ಡೇವಿಸ್ ಕಪ್: ತಟಸ್ಥ ಸ್ಥಳ​ದಲ್ಲಿ ಇಂಡೋ-ಪಾಕ್ ಟೆನಿಸ್‌ ಪಂದ್ಯ

Published : Nov 05, 2019, 11:20 AM IST
ಡೇವಿಸ್ ಕಪ್: ತಟಸ್ಥ ಸ್ಥಳ​ದಲ್ಲಿ ಇಂಡೋ-ಪಾಕ್ ಟೆನಿಸ್‌ ಪಂದ್ಯ

ಸಾರಾಂಶ

ಡೇವಿಸ್ ಕಪ್ ಈ ಬಾರಿ ತಟಸ್ಥ ಸ್ಥಳದಲ್ಲಿ ನಡೆಯುವುದು ಕೊನೆಗೂ ಅಂತಿಮವಾಗಿದೆ. ಆದರೆ ಪಾಕಿಸ್ತಾನದಿಂದ ಹೊರಗೆ ಎಲ್ಲಿ ನಡೆಯಲಿದೆ ಎನ್ನುವುದು ಇನ್ನು 5 ದಿನದಲ್ಲಿ ಖಚಿತವಾಗಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ನ​ವ​ದೆ​ಹ​ಲಿ[ನ.05]: ಭಾರತ ಹಾಗೂ ಪಾಕಿ​ಸ್ತಾನ ನಡುವೆ ಇದೇ ತಿಂಗಳು 29, 30ರಂದು ಇಸ್ಲಾ​ಮಾ​ಬಾದ್‌ನಲ್ಲಿ ನಡೆ​ಯ​ಬೇ​ಕಿದ್ದ ಡೇವಿ​ಸ್‌ ಕಪ್‌ ಪಂದ್ಯ​ವನ್ನು ಅಂತಾ​ರಾ​ಷ್ಟ್ರೀಯ ಟೆನಿಸ್‌ ಫೆಡ​ರೇ​ಷನ್‌ (ಐ​ಟಿ​ಎಫ್‌) ತಟಸ್ಥ ಸ್ಥಳಕ್ಕೆ ಸ್ಥಳಾಂತ​ರಿ​ಸಿದೆ.

ಡೇವಿಸ್‌ ಕಪ್‌: ಪಾಕ್‌ಗೆ ತೆರ​ಳ​ಲಿ​ದ್ದಾರೆ ಪೇಸ್‌!

5 ದಿನ​ಗ​ಳೊ​ಳಗೆ ಹೊಸ ಸ್ಥಳ​ವನ್ನು ತಿಳಿ​ಸು​ವಂತೆ ಪಾಕಿ​ಸ್ತಾನ ಟೆನಿಸ್‌ ಫೆಡ​ರೇ​ಷನ್‌ಗೆ ಸೂಚಿ​ಸ​ಲಾ​ಗಿದೆ. ಪಾಕಿ​ಸ್ತಾ​ನಕ್ಕೆ ಪ್ರಯಾ​ಣಿ​ಸಲು ಭಾರತ ತಂಡ ಒಪ್ಪದ ಕಾರಣ, ಸೆಪ್ಟೆಂಬರ್‌ನಲ್ಲಿ ನಡೆ​ಯ​ಬೇ​ಕಿದ್ದ ಪಂದ್ಯವನ್ನು ಮುಂದೂಡ​ಲಾ​ಗಿತ್ತು. ಆದರೆ ಐಟಿಎಫ್‌ನಿಂದ ನಿಷೇಧ ಶಿಕ್ಷೆ ಎದು​ರಾಗ ಭೀತಿಯಿಂದ, ಪ್ರಮುಖ ಆಟ​ಗಾ​ರರು ಹಿಂದೆ ಸರಿ​ದರೂ ದ್ವಿತೀಯ ದರ್ಜೆ ತಂಡ ಕಳು​ಹಿ​ಸಲು ಅಖಿಲ ಭಾರತ ಟೆನಿಸ್‌ ಫೆಡ​ರೇ​ಷನ್‌ ನಿರ್ಧ​ರಿ​ಸಿತು.

ರನ್ ಮಷೀನ್ ವಿರಾಟ್ ಕೊಹ್ಲಿ ಬರ್ತ್ ಡೇ @31

ಸೋಮ​ವಾರವಷ್ಟೇ ಆಯ್ಕೆ ಸಮಿತಿ ಮುಖ್ಯಸ್ಥ ರೋಹಿತ್‌ ರಾಜ್‌ಪಾಲ್‌ರನ್ನು ಭಾರತ ತಂಡದ ಆಡದ ನಾಯ​ಕ​ನ​ನ್ನಾಗಿ ನೇಮಿ​ಸ​ಲಾ​ಗಿತ್ತು. ಇದೀಗ ತಟಸ್ಥ ಸ್ಥಳ​ದಲ್ಲಿ ಪಂದ್ಯ ನಡೆ​ಯುವ ಕಾರಣ, ಭಾರತ ಬಲಿಷ್ಠ ತಂಡ​ದೊಂದಿಗೆ ಆಡಲು ನಿರ್ಧ​ರಿ​ಸುವ ಸಾಧ್ಯತೆ ಇದೆ.

ಡೇವಿಸ್‌ ಕಪ್‌ ತಂಡಕ್ಕೆ ಆಯ್ಕೆಗಾರನೇ ನಾಯ​ಕ!

ಪಾಕಿಸ್ತಾನ ತೆರಳಲಿರುವ ಭಾರತ ಡೇವಿಸ್‌ ಕಪ್‌ ಟೆನಿಸ್‌ ತಂಡಕ್ಕೆ ಮಾಜಿ ಆಟ​ಗಾರ, ಹಾಲಿ ಆಯ್ಕೆ ಸಮಿತಿ ಮುಖ್ಯಸ್ಥ ರೋಹಿತ್‌ ರಾಜ್‌ಪಾಲ್‌ರನ್ನು ಆಡದ ನಾಯ​ಕ​ನ​ನ್ನಾಗಿ ಅಖಿಲ ಭಾರ​ತ​ ಟೆನಿಸ್‌ ಫೆಡ​ರೇಷನ್‌ (ಎ​ಐ​ಟಿಎ) ನೇಮಿ​ಸಿದೆ. ಮಹೇಶ್‌ ಭೂಪತಿ, ಪಾಕಿ​ಸ್ತಾನಕ್ಕೆ ತೆರ​ಳಲು ನಿರಾ​ಕ​ರಿ​ಸಿದ ಕಾರಣ ಅವರ ಬದ​ಲಿಗೆ ರೋಹಿತ್‌ಗೆ ತಂಡ ಜವಾ​ಬ್ದಾರಿ ವಹಿ​ಸ​ಲಾ​ಗಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!