
ಬೆಂಗಳೂರು[ನ.03]: ಡಿ. 1 ರಿಂದ 10 ರವರೆಗೆ ನೇಪಾಳದ ಕಠ್ಮಂಡು ಹಾಗೂ ಪೊಕಹಾರದಲ್ಲಿ ನಡೆಯಲಿರುವ 13ನೇ ತಂಡವನ್ನು ಸಜ್ಜುಗೊಳಿಸಲಾಗುತ್ತಿದೆ. ಇದಕ್ಕಾಗಿ ನ. 5 ರಿಂದ 26 ರವರೆಗೆ ನಡೆಯಲಿರುವ ರಾಷ್ಟ್ರೀಯ ಶಿಬಿರದಲ್ಲಿ ಕರ್ನಾಟಕದ ನಾಲ್ವರು ಆಟಗಾರರು ಸ್ಥಾನ ಪಡೆದಿದ್ದಾರೆ.
ಪ್ರೊ ಕಬಡ್ಡಿ ಫೈನಲ್: ಬೆಂಗಾಲ್ ವಾರಿಯರ್ಸ್ ಚಾಂಪಿಯನ್
ಶಿಬಿರದಲ್ಲಿ ಒಟ್ಟು 48 ಆಟಗಾರರು ಆಯ್ಕೆಯಾಗಿದ್ದಾರೆ. ಪ್ರೊ ಕಬಡ್ಡಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರನ್ನು ಶಿಬಿರಕ್ಕೆ ಆಯ್ಕೆ ಮಾಡಲಾಗಿದೆ. 7ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಯುವ ಹಾಗೂ ಅನುಭವಿ ಆಟಗಾರರು ಶಿಬಿರದಲ್ಲಿ ಸ್ಥಾನ ಪಡೆದಿದ್ದಾರೆ.
’ಸೂಪರ್ ಕ್ಯಾಚ್’ ಹಿಡಿದ ಹರ್ಮನ್ಪ್ರೀತ್ ಕೌರ್; ವಿಡಿಯೋ ವೈರಲ್
ರೈಲ್ವೇಸ್, ಸರ್ವೀಸಸ್, ಮಹಾರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ, ಹಿಮಾಚಲ ಪ್ರದೇಶ, ಬಿಹಾರ, ರಾಜಸ್ಥಾನ, ದೆಹಲಿ, ಉತ್ತರಾಖಂಡ್, ಮಧ್ಯಪ್ರದೇಶ, ಕೇರಳ, ಗುಜರಾತ್, ಪುದುಚೇರಿ, ತೆಲಂಗಾಣ, ಚಂಢೀಗಢ, ತಮಿಳುನಾಡು, ಪಂಜಾಬ್ ಹಾಗೂ ಆಂಧ್ರಪ್ರದೇಶದ ಆಟಗಾರರಿಗೆ ಶಿಬಿರದಲ್ಲಿ ಸ್ಥಾನ ನೀಡಲಾಗಿದೆ.
ಇದರಲ್ಲಿ ಸರ್ವೀಸಸ್ನ ತಾರಾ ರೈಡರ್ ನವೀನ್ ಕುಮಾರ್, ಡಿಫೆಂಡರ್ ಮಹೇಂದರ್ ಸಿಂಗ್, ವಿಕಾಸ್ ಖಂಡೋಲಾ, ಅನುಭವಿ ಆಟಗಾರ ಪ್ರದೀಪ್ ನರ್ವಾಲ್, ರಿಶಾಂಕ್ ದೇವಾಡಿಗ, ನಿತಿನ್ ತೋಮರ್, ರವೀಂದರ್ ಪೆಹಲ್ ಪ್ರಮುಖರಾಗಿದ್ದಾರೆ. ರಾಜ್ಯದಿಂದ ಪ್ರಶಾಂತ್ ಕುಮಾರ್ ರೈ, ತಮಿಳುನಾಡು ಮೂಲದ ಕರ್ನಾಟಕದ ಉದ್ಯೋಗಿ ಕೆ. ಪ್ರಪಂಜನ್, ಯುವ ಆಟಗಾರ ಸಚಿನ್ ವಿಠಲ ಹಾಗೂ ಜೆ. ದರ್ಶನ್ ಶಿಬಿರದಲ್ಲಿ ಸ್ಥಾನ ಗಿಟ್ಟಿಸುವಲ್ಲಿ ಯಶಸ್ವಿ ಯಾಗಿದ್ದಾರೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.