
ಚೆನ್ನೈ(ಜೂ.30): ಜಲಕ್ಷಾಮಕ್ಕೆ ತತ್ತರಿಸಿರುವ ಚೆನ್ನೈನಲ್ಲಿ ಈಗ ಹೋಟೆಲ್ ಉದ್ಯಮಿಗಳು ನೀರು ಉಳಿಸಲು ಬೇರೆ ಬೇರೆ ಮಾರ್ಗೋಪಾಯ ಹುಡುಕಿಕೊಳ್ಳಲು ಆರಂಭಿಸಿದ್ದಾರೆ.
ನೀರಿನ ಕೊರತೆ: ಚೆನ್ನೈಗೆ ಬೇರೆ ಜಿಲ್ಲೆಗಳಿಂದ ರೈಲಿನಲ್ಲಿ ನೀರು
ನೀರು ಬಳಕೆ ಕಡಿಮೆ ಮಾಡುವುದೊಂದೇ ಪರಿಹಾರ ಎಂಬ ನಿರ್ಧಾರಕ್ಕೆ ಬಂದಿರುವ ಚೆನ್ನೈನ ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳು ಈಗ ವೈವಿಧ್ಯಮಯ ಪ್ಲೇಟ್ಗಳನ್ನು ಬಳಕೆ ಮಾಡುವ ಬದಲು ಬಾಳೆ ಎಲೆಯನ್ನು ಬಳಸಲು ಶುರು ಮಾಡಿವೆ. ದರ್ಶಿನಿಗಳಂಥ ಸಣ್ಣ-ಪುಟ್ಟಹೋಟೆಲ್ಗಳಿಂದ ಸ್ಟಾರ್ ಹೋಟೆಲ್ಗಳಲ್ಲೂ ಬಾಲೆ ಎಲೆಯನ್ನೇ ಬಳಸುತ್ತಿವೆ. ಗ್ರಾಹಕರ ಮನವೊಲಿಸಲು ಹೋಟೆಲ್ ಮಾಲೀಕರು, ಆಡಳಿತ ಮಂಡಳಿ ‘ನೀರು ಉಳಿತಾಯಕ್ಕಾಗಿ ಬಾಳೆ ಎಲೆ ಬಳಕೆ ಮಾಡಲಾಗುತ್ತಿದೆ, ಗ್ರಾಹಕರು ಸಹಕರಿಸಬೇಕು’ ಎಂದು ಫಲಕಗಳನ್ನು ಹಾಕಿದ್ದಾರೆ.
ನೀರಿನ ಸಮಸ್ಯೆ: Work From Homeಗೆ ಸೂಚಿಸಿದ ಕಂಪನಿಗಳು
ತಮಿಳುನಾಡು, ಕೇರಳ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ಬಾಳೆ ಎಲೆ ಊಟ ಸಂಪ್ರದಾಯವಾಗಿದ್ದು, ಅದೇ ಮಾದರಿಯಲ್ಲಿ ಸೇವೆ ಒದಗಿಸಲಾಗುತ್ತಿದೆ ಎಂದು ಹೋಟೆಲ್ ಉದ್ಯಮಿಗಳು ಹೇಳಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.