ಸಿಎಂ ಕನಸು ಕಂಡ ಡಿಸಿಎಂ ಪರಮೇಶ್ವರ್‌ಗೆ ಸಿದ್ದರಾಮಯ್ಯ ಟಾಂಗ್

Nov 18, 2018, 1:22 PM IST

ಡಾ. ಜಿ ಪರಮೇಶ್ವರ್ ಸಿಎಂ ಆಗಲು ಸಿದ್ಧ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ 'ಕಾಂಗ್ರೆಸ್‌ನಲ್ಲಿ ಸಿಎಂ ಆಗೋ ಅರ್ಹತೆ ಬಹಳ‌ ಜನರಿಗಿದೆ. ಅವರು ಕೂಡಾ ಒಬ್ಬರು, ಅವರು ಹೇಳಿದ್ದರಲ್ಲಿ ತಪ್ಪೇನಿದೆ? ಸದ್ಯ ಸಿಎಂ ಬದಲಾವಣೆ ವಿಚಾರ ಇಲ್ಲ, ಯಾಕೆ‌ಂದ್ರೆ ಆ ಸೀಟು ಖಾಲಿ ಇಲ್ಲ’ ಎನ್ನುವ ಮೂಲಕ ಡಿಸಿಎಂ ಪರಂಮೇಶ್ವರ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.