ಕುಲಭೂಷಣ್ ತೀರ್ಪು: ಪಾಪ ಪಾಕಿಸ್ತಾನವೆಂದ ಬಿಜೆಪಿ ಸಚಿವ!

Published : Jul 18, 2019, 04:39 PM ISTUpdated : Jul 18, 2019, 06:29 PM IST
ಕುಲಭೂಷಣ್ ತೀರ್ಪು: ಪಾಪ ಪಾಕಿಸ್ತಾನವೆಂದ ಬಿಜೆಪಿ ಸಚಿವ!

ಸಾರಾಂಶ

ಕುಲಭೂಷಣ್ ಜಾಧವ್ ತೀರ್ಪು ಪಾಕ್ ಪರ ಬಂದಿದೆಯೇ? ತೀರ್ಪಿನ ಕುರಿತು ಪಾಕಿಸ್ತಾನದ ಪರ ಬ್ಯಾಟ್ ಬೀಸಿದ ಬಿಜೆಪಿ ಸಚಿವ| ಪಾಕ್ ಪರ ಸಚಿವ ಗಿರಿರಾಜ್ ಸಿಂಗ್ ಬ್ಯಾಟಿಂಗ್| ತೀರ್ಪು ಇಂಗ್ಲಿಷ್‌ನಲ್ಲಿರುವುದರಿಂದ ಪಾಕಿಸ್ತಾನೀಯರಿಗೆ ಅರ್ಥವಾಗಿಲ್ಲ'| ಇದರಲ್ಲಿ ನಿಮ್ಮ ಅವರ ತಪ್ಪೇನಿಲ್ಲ ಬಿಡಿ ಎಂದ ಗಿರಿರಾಜ್|

ನವದೆಹಲಿ(ಜು.18): ಕುಲಭೂಷಣ್ ಜಾಧವ್ ಕುರಿತಾಧ ಐಸಿಜೆ ತೀರ್ಪು ಭಾರತದ ಪರವಾಗಿ ಬಂದಿದೆ ಎಂಬುದು ಇಡೀ ಜಗತ್ತಿಗೆ ಗೊತ್ತಿರುವ ಸಂಗತಿ. ಆದರೆ ತೀರ್ಪನ್ನು ತನ್ನ ವಾದಕ್ಕೆ ಸಂದ ಜಯ ಎಂದು ಪಾಕಿಸ್ತಾನ ಹೇಳಿಕೊಂಡು ಓಡಾಡುತ್ತಿದೆ.

ಐಸಿಜೆ ತೀರ್ಪು ತನ್ನ ಪರ ಬಂದಿದ್ದು, ಜಾಧವ್ ಪ್ರಕರಣವನ್ನು ಪುನರ್ ಪರಿಶೀಲಿಸುವುದಾಗಿ ಪಾಕಿಸ್ತಾನ ಹೇಳಿದೆ. ಪಾಕಿಸ್ತಾನದ ಪ್ರತಿಕ್ರಿಯೆಯನ್ನು ಅಣಕಿಸಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಐಸಿಜೆ ತೀರ್ಪು ಇಂಗ್ಲಿಷ್‌ನಲ್ಲಿರುವುದರಿಂದ ಪಾಕ್‌ಗೆ ತೀರ್ಪು ಅರ್ಥವಾಗಿಲ್ಲ ಎಂದು ಕುಹಕವಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಗಿರಿರಾಜ್ ಸಿಂಗ್, ಐಸಿಜೆ ತೀರ್ಪನ್ನು ತನ್ನ ಪರ ಎಂಬ ಪಾಕ್‌ ವಾದ ತಪ್ಪಲ್ಲ. ಕಾರಣ ತೀರ್ಪು ಇಂಗ್ಲಿಷ್‌ನಲ್ಲಿರುವುದರಿಂದ ಪಾಕಿಸ್ತಾನೀಯರಿಗೆ ತೀರ್ಪು ಅರ್ಥವಾಗಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಭಾರತದ ಪರ ತೀರ್ಪು ನೀಡಿರುವ ಐಸಿಜೆ, ಪಾಕಿಸ್ತಾನ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿದ್ದು, ಕೂಡಲೇ ಭಾರತೀಯ ರಾಯಭಾರಿಗೆ ಜಾಧವ್ ಭೇಟಿಯಾಗಲು ಅವಕಾಶ ನೀಡಬೇಕು ಎಂದು ಸೂಚನೆ ನೀಡಿದೆ.

ಅಲ್ಲದೇ ಜಾಧವ್ ಗಲ್ಲುಶಿಕ್ಷೆಯನ್ನು ಅಮಾನತುಗೊಳಿಸಿರುವ ಐಸಿಜೆ, ಪ್ರಕರಣದ ಮರವಿಚಾರಣೆ ಮಾಡಬೇಕೆಂದು ಪಾಕಿಸ್ತಾನಕ್ಕೆ ಸ್ಪಷ್ಟ ನಿದರ್ಶನ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು
ನೆತನ್ಯಾಹು ಪ್ರಧಾನಿ ಮೋದಿಗೆ ಕರೆ ಮಾಡಿ ಮಾತುಕತೆ: ಭಯೋತ್ಪಾದನೆ ವಿರುದ್ಧ ದೊಡ್ಡ ನಿರ್ಧಾರ!