702 ಟ್ವಿಟರ್ ಖಾತೆ ಬ್ಲಾಕ್, ಕುಸಿತ ಕಂಡ ಕೊಹ್ಲಿ‌ ರ‍್ಯಾಂಕ್‌; ಫೆ.10ರ ಟಾಪ್ 10 ಸುದ್ದಿ!

By Suvarna NewsFirst Published Feb 10, 2021, 4:34 PM IST
Highlights

ಪ್ರಚೋದನಕಾರಿ ಪೋಸ್ಟ್ ಹಾಕಿದ 700ಕ್ಕೂ ಹೆಚ್ಚು ಟ್ವಿಟರ್ ಅಕೌಂಟ್‌ಗಳನ್ನು ಬ್ಲಾಕ್ ಮಾಡಲಾಗಿದೆ. 49 ಸಕೆಂಡ್‌ನಲ್ಲಿ 10 ಮಂದಿ ನೀರುಪಾಲು ಉತ್ತರಾಖಂಡ್ ದುರಂತದ ಕೊನೆ ಕ್ಷಣ ವಿಡಿಯೋ ಬಹಿರಂಗ. ದಿನದಿಂದ ದಿನಕ್ಕೆ ತೈಲ ದರ ಹೆಚ್ಚುತ್ತಲೇ ಇದೆ. ಕುಣಿದು ಕುಪ್ಪಳಿಸಿದ ಸನ್ನಿ ಲಿಯೋನ್, ಲೈಸೆನ್ಸ್ ನೀವಕರಣಕ್ಕೂ ಅಧಾರ್ ಕಾರ್ಡ್ ಸೇರಿದಂತೆ ಫೆಬ್ರವರಿ 10ರ ಟಾಪ್ 10 ನ್ಯೂಸ್ ವಿವರ ಇಲ್ಲಿವೆ.

ಸರ್ಕಾರದ ಆದೇಶಕ್ಕೆ ತಲೆಬಾಗಿದ ಟ್ವಿಟರ್: 702 ಅಕೌಂಟ್‌ಗಳು ಪರ್ಮನೆಂಟ್ ಬ್ಯಾನ್!...

ನೂತನ ಕೃಷಿ ಕಾಯ್ದೆಗಳ ವಿರುದ್ಧ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ ಮೈಕ್ರೋ ಬ್ಲಾಗಿಂಗ್ ಸೈಟ್‌ ಟ್ವಿಟರ್‌ ಬಳಸಿಕೊಂಡು ಪ್ರಚೋದನಾಕಾರಿ ಪೋಸ್ಟ್‌ಗಳು ಮಾಡಲಾಗುತ್ತಿದೆ. ಹೀಗಿರುವಾಗ ಇಂತಹ ಪೋಸ್ಟ್‌ಗಳಿಗೆ ಕಡಿವಾಣ ಹಾಕುವಂತೆ ಕೇಂದ್ರ ಸರ್ಕಾರ ಟ್ವಿಟರ್‌ ಸಂಸ್ಥೆಗೆ ನೋಟೀಸ್ ಕಳುಹಿಸಿತ್ತು. ಇದರ ಬೆನ್ನಲ್ಲೇ ಟ್ವಿಟರ್ ಇಂತಹ ಪ್ರಚೋದನಾಕಾರಿ ಪೋಸ್ಟ್‌ ಇರುವ ಅಕೌಂಟ್‌ಗಳನ್ನು ಬ್ಲಾಕ್ ಹಾಗೂ ನಿಷ್ಕ್ರಿಯ ಮಾಡಲಾರಂಭಿಸಿದೆ. 

ಬ್ಯಾಡ್‌ಬಾಯ್ ಸಲ್ಮಾನ್ ಖಾನ್ ಮದುವೆಯಾಗಲು ಪಾಕಿಸ್ತಾನದಿಂದ ಬಂದವಳ ಕತೆ!...

ಸೋಮಿ ಅಲಿ ಎಂಬ ಚಂದದ ನಟಿಯ ಹೆಸರನ್ನು ನೀವು ಕೇಳಿರಬಹುದು, ಈಕೆಯ ನಟನೆಯನ್ನೂ ನೋಡಿರಬಹುದು. ಈಕೆಯ ಕತೆ ಸ್ವಾರಸ್ಯಕರವಾಗಿದೆ, ಹಾಗೇ ದುರಂತಮಯವೂ ಆಗಿದೆ. ಹಾಗೇ ಸ್ಫೂರ್ತಿಯುತವೂ ಆಗಿದೆ.

ಹೀಗಿತ್ತು ಉತ್ತರಾಖಂಡ್ ದುರಂತದ ಕೊನೇ ಕ್ಷಣ, 49 ಸೆಕೆಂಡ್‌ನಲ್ಲಿ 10 ಮಂದಿ ನೀರುಪಾಲು!...

ಉತ್ತರಾಖಂಡ್ ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ನೋಡ ನೋಡುತ್ತಿದ್ದಂತೆಯೇ ಉಕ್ಕಿ ಹರಿದು ಬಂದ ನೀರಿನಿಂದಾಗಿ ಅಣೆಕಟ್ಟುಗಳು ಧ್ವಂಸಗೊಂಡರೆ, ಅತ್ತ ಗಂಗಾ ವಿದ್ಯುತ್ ಯೋಜನೆ ಕಾಮಗಾರಿಗೂ ಹಾನಿಯುಂಟಾಗಿತ್ತು. ಇದಕ್ಕೂ ಮಿಗಿಲಾಗಿ 197ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, ಇನ್ನೂ ಅನೇಕ ಮಂದಿ ಸುರಂಗದಲ್ಲಿ ಸಿಕ್ಕಾಕೊಂಡಿದ್ದಾರೆ. ಇವನ್ನು ಹೊರ ತೆಗೆಯಲು ರಕ್ಷಣಾ ಕಾರ್ಯ ಇನ್ನೂ ಮುಂದುವರೆದಿದೆ

ಸೋಲಿನ ಬೆನ್ನಲ್ಲೇ ICC ಟೆಸ್ಟ್ ‌ರ‍್ಯಾಂಕ್‌ನಲ್ಲಿ ಭಾರಿ ಬದಲಾವಣೆ; ಕುಸಿತ ಕಂಡ ಕೊಹ್ಲಿ!...

ಇಂಗ್ಲೆಂಡ್ ವಿರುದ್ಧದ ಭಾರತ ತಂಡದ ಸೋಲು, ಸೌತ್ ಆಫ್ರಿಕಾ ವಿರುದ್ಧ ಪಾಕಿಸ್ತಾನದ ಗೆಲುವು ಐಸಿಸಿ ಟೆಸ್ಟ್ ರ‍್ಯಾಂಕ್‌‌ನಲ್ಲಿ ಭಾರಿ ಬದಲಾವಣೆಯಾಗಿದೆ. ನಾಯಕ ವಿರಾಟ್ ಕೊಹ್ಲಿ ರ‍್ಯಾಂಕ್‌ ಕುಸಿತ ಕಂಡಿದ್ದರೆ, ಇಂಗ್ಲೆಂಡ್ ನಾಯಕ ಜೋ ರೂಟ್ ಭರ್ಜರಿ ಬಡ್ತಿ ಪಡೆದಿದ್ದಾರೆ. 

ಎಷ್ಟು ತಿರುಚಿದ್ರೂ ಸತ್ಯ ಬದಲಾಗಲ್ಲ ಎಂದು ಜಂಪ್ ಮಾಡಿದ್ರು ಸನ್ನಿ...

ಸನ್ನಿ ಲಿಯೋನ್ ಕೇರಳದಲ್ಲಿದ್ದಾಗ ವಂಚನೆ ಕೇಸ್ ಎದುರಿಸಿದ್ರು. ನಟಿ ಈಗೇನು ಹೇಳ್ತಿದ್ದಾರೆ..? ಇಲ್ಲಿ ನೋಡಿ

ಮತ್ತೆ ತೈಲ ದರ ಏರಿಕೆ ಬರೆ, ಗ್ರಾಹಕ ಕಂಗಾಲು!...

ದಿನದಿಂದ ದಿನಕ್ಕೆ ತೈಲ ದರ ಹೆಚ್ಚುತ್ತಲೇ ಇದೆ. ಪೈಸೆ ಲೆಕ್ಕದಲ್ಲಿ ಏರುತ್ತಿರುವ ಪೆಟ್ರೋಲ್ ದರ ಗ್ರಾಹಕರ ಜೇಬು ಸುಡುತ್ತಿದೆ. ಪೆಟ್ರೋಲ್‌ ಬಾಂಬ್‌ಗೆ ವಾಹನ ಸವಾರರು ಬೆಚ್ಚಿ ಬಿದ್ದಿದ್ದಾರೆ. 

ಆನ್‌ಲೈನ್ ಮೂಲಕ ಡ್ರೈವಿಂಗ್ ಲೈಸೆನ್ಸ್ ನವೀಕರಣ,ತಿದ್ದುಪಡಿಗೆ ಆಧಾರ್ ಕಡ್ಡಾಯ!...

ಆಧಾರ್ ಕಾರ್ಡ್ ಮಹತ್ವದ ದಾಖಲೆಯಾಗಿದೆ. ಹಲವು ಸರ್ಕಾರಿ ದಾಖಲೆಗಳು, ಗುರುತಿನ ಚೀಟಿ ಸೇರಿದಂತೆ ಅತ್ಯವಶ್ಯಕ ಕಾರ್ಯಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಇದೀಗ ಡ್ರೈವಿಂಗ್ ಲೆೈಸೆನ್ಸ್ ನವೀಕರಣ ಹಾಗೂ ತಿದ್ದುಪಡಿಗೆ ಆಧಾರ್ ಕಡ್ಡಾಯ ಮಾಡಲಾಗಿದೆ.

ವಾರಕ್ಕಿನ್ನು ನಾಲ್ಕೇ ದಿನ ಕೆಲ್ಸ, ಯಾರಿಗೆ ಅನ್ವಯ? ದಿನಕ್ಕೆಷ್ಟು ಗಂಟೆ ದುಡೀಬೇಕು?...

ಈಗ ಕೆಲವು ಕಂಪನಿಗಳು ವಾರಕ್ಕೆ ಆರು ದಿನ ಹಾಗೂ ಐದು ದಿನಗಳವರೆಗೆ ಕೆಲಸ ಮಾಡಿಸಿಕೊಳ್ಳುತ್ತಿವೆ. ಆದರೆ, ಹೊಸ ಕಾರ್ಮಿಕ ಸಂಹಿತೆ ಜಾರಿಯಾದರೆ ವಾರಕ್ಕೆ ನಾಲ್ಕೇ ದಿನ ಕೆಲಸ ಮಾಡಬೇಕಾಗಬಹುದು. ಹಾಗಂತ ಇದು ಒತ್ತಾಯದ ಕ್ರಮವಲ್ಲ. ಉದ್ಯೋಗಿಗಳು ಮತ್ತು ಉದ್ಯೋಗದಾತರ ಆಯ್ಕೆಗೆ ಬಿಟ್ಟದ್ದಾಗಿದೆ.

ಏರಿಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಕೆಲ್ಸಾ ಖಾಲಿ ಇವೆ, 10 ಲಕ್ಷ ರೂ. ವೇತನ...

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕೆಲವು ಪ್ರಮುಖ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ 21 ಕೊನೆಯ ದಿನವಾಗಿದೆ. ಆಸಕ್ತರು ಕೂಡಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಫೋನ್‌ ಬಳಸಲ್ಲ ಎಂದ ರಶ್ಮಿಕಾ; ಹಾಗಾದ್ರೆ ಫೋಟೋ ಅಪ್ಲೋಡ್ ಮಾಡ್ತಿರೋದು ಯಾರು?...

ಪೊಗರು ಚಿತ್ರದ ಪ್ರೆಸ್‌ಮೀಟ್‌ನಲ್ಲಿ ಮಾತನಾಡಿದ ರಶ್ಮಿಕಾ ಮಂದಣ್ಣ, ತಾವು ಫೋನ್ ಬಳಸಲು ಇಷ್ಟ ಪಡುವುದಿಲ್ಲ, ಫೋನ್‌ ಇಲ್ಲದೇ ಜೀವನ ಮಾಡುತ್ತೇನೆ ಎಂದು ಹೇಳಿದ್ದಾರೆ. ಈಗ ಕಾಲದಲ್ಲಿ ಪೋನ್‌ ಇಲ್ಲದ ನಟಿಯರೂ ಇರ್ತಾರಾ? ಇನ್‌ಸ್ಟಾಗ್ರಾಂನಲ್ಲಿ ಅಷ್ಟಕ್ಕೂ ಅವರ ಫೋಟೋ, ಸ್ಟೇಟಸ್‌ಗಳನ್ನು  ಪೋಸ್ಟ್‌ ಮಾಡುತ್ತಿರುವುದು ಯಾರು?

click me!