ಅಸಮರ್ಥ ಮೋದಿಯನ್ನು ಸದಾ ಸಮರ್ಥಿಸಿ: ರಾಹುಲ್ ಟ್ವೀಟ್‌ಗೆ ಜೈಶಂಕರ್ ಕಸಿವಿಸಿ!

Published : Oct 01, 2019, 01:29 PM IST
ಅಸಮರ್ಥ ಮೋದಿಯನ್ನು ಸದಾ ಸಮರ್ಥಿಸಿ: ರಾಹುಲ್ ಟ್ವೀಟ್‌ಗೆ ಜೈಶಂಕರ್ ಕಸಿವಿಸಿ!

ಸಾರಾಂಶ

ಅಬ್ ಕಿ ಬಾರ್ ಟ್ರಂಪ್ ಸರ್ಕಾರ್ ಎಂದಿದ್ದ ಪ್ರಧಾನಿ ಮೋದಿ| ಹೌಡಿ ಮೋದಿ ಕಾರ್ಯಕ್ರಮದಲ್ಲಿ ಟ್ರಂಪ್ ಪರ ಪ್ರಧಾನಿ ಪ್ರಚಾರ?| ಅಮೆರಿಕದಲ್ಲಿ 2020ರಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆ| ಪ್ರಧಾನಿ ಮೋದಿ ಹೇಳಿಕೆಗೆ ಸ್ಪಷ್ಟನೆ ನೀಡಿದ ವಿದೇಶಾಂಗ ಸಚಿವ ಎಸ್.ಜೈಶಂಕರ್| ಅಧ್ಯಕ್ಷೀಯ ಚುನಾವಣೆ ಅಮೆರಿಕದ ಆಂತರಿಕ ವಿಚಾರ ಎಂದ ಜೈಶಂಕರ್| ‘ಭಾರತಕ್ಕೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾವುದೇ ಆಸಕ್ತಿ ಇಲ್ಲ’| ‘ಪ್ರಜಾಪ್ರಭುತ್ವಕ್ಕೆ ಮೋದಿ ತಂದೊಡ್ಡುವ ಸಮಸ್ಯೆಗಳನ್ನು ಹೀಗೆಯೇ ಮರೆಮಾಚಿ’| ಟ್ವಿಟ್ಟರ್’ನಲ್ಲಿ ಜೈಶಂಕರ್ ಕಾಲೆಳೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ|  ‘ಮೋದಿ ಅಸಮರ್ಥತೆಯನ್ನು ಸಮರ್ಥಿಸುವ ಕೆಲಸ ತುಂಬ ಚೆನ್ನಾಗಿ ಮಾಡುತ್ತಿದ್ದೀರಾ’| ಮೋದಿಗೆ ರಾಜತಾಂತ್ರಿಕತೆಯ ಬಗ್ಗೆ ಪಾಠ ಮಾಡುವಂತೆ ಜೈಶಂಕರ್’ಗೆ ಸಲಹೆ|

ನವದೆಹಲಿ(ಅ.01): ಹೌಡಿ ಮೋದಿ ಕಾರ್ಯಕ್ರಮದಲ್ಲಿ ಅಬ್ ಬಾರ್ ಟ್ರಂಪ್ ಸರ್ಕಾರ್ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸ್ಪಷ್ಟನೆ ನೀಡಿದ್ದಾರೆ.

ಪ್ರಧಾನಿ ಮೋದಿ ಪರ ಬ್ಯಾಟ್ ಬೀಸಿರುವ ಜೈಶಂಕರ್ ಕಾಲೆಳೆದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ಅಸಮರ್ಥತೆಯನ್ನು ಸಮರ್ಥಿಸುವ ಕೆಲಸ ತುಂಬ ಚೆನ್ನಾಗಿ ಮಾಡುತ್ತಿದ್ದೀರಾ ಎಂದು ವ್ಯಂಗ್ಯವಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರ ಅಸಮರ್ಥತೆಯನ್ನು ಮರೆಮಾಚಿದ್ದಕ್ಕೆ ಧನ್ಯವಾದಗಳು ಜೈಶಂಕರ್ ಎಂದು ಕುಹುಕವಾಡಿದ್ದಾರೆ.  ಪ್ರಜಾಪ್ರಭುತ್ವಕ್ಕೆ ಗಂಭೀರ ಸಮಸ್ಯೆ ತಂದೊಡ್ಡುವ ಮೋದಿ ಹೇಳಿಕೆಗಳು ಜೈಶಂಕರ್ ಮಧ್ಯಪ್ರವೇಶದಿಂದ ಮರೆಮಾಚುತ್ತವೆ ಎಂದು  ರಾಹುಲ್ ಹೇಳಿದ್ದಾರೆ.

ಆದರೆ ಸದಾ ಮೋದಿ ಅವರ ತಪ್ಪು ಹೇಳಿಕೆಗಳನ್ನು ಮರೆಮಾಚುವ ಬದಲು, ಅವರಿಗೆ ರಾಜತಾಂತ್ರಿಕತೆಯ ಬಗ್ಗೆ ಪಾಠ ಮಾಡಿದರೆ ಒಳಿತು ಎಂದು ಜೈಶಂಕರ್ ಅವರಿಗೆ ರಾಹುಲ್ ಸಲಹೆ ನೀಡಿದ್ದಾರೆ. 

ಹ್ಯೂಸ್ಟನ್’ನಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ‘ಅಬ್ ಕಿ ಬಾರ್ ಟ್ರಂಪ್ ಸರ್ಕರ್’ ಘೋಷಣೆ ಬಳಿಸಿದ್ದರು. 2020ರಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಪರ ಪ್ರಧಾನಿ ಮೋದಿ ಪ್ರಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ
ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ