'ಬಿಹಾರಕ್ಕೆ ಮಿಡಿದ ಮೋದಿ 52 ಇಂಚಿನ ಎದೆ, ಕರ್ನಾಟಕ ವಿಚಾರದಲ್ಲಿ ಕಲ್ಲುಬಂಡೆ ಆಗಿದ್ದೇಕೆ?'

By Web DeskFirst Published Oct 1, 2019, 1:28 PM IST
Highlights

ಬಿಹಾರಕ್ಕೆ ಎಲ್ಲಾ ರೀತಿಯ ಪರಿಹಾರ ನೀಡಲು ಸಿದ್ಧ ಎಂದ ಮೋದಿ| ಮೋದಿ ಟ್ವೀಟ್ ಬೆನ್ನಲ್ಲೇ ಕೆರಳಿದ ಕನ್ನಡಿಗರ| ಬಿಹಾರದ ಪ್ರವಾಹ ಕಾಣಿಸ್ತು, ಕರ್ನಾಟಕಕ್ಕೆ ಯಾಕೆ ಪರಿಹಾರ ನೀಡಿಲ್ಲ?

ಬೆಂಗಳೂರು[ಅ.01]: ಕಳೆದ ನಾಲ್ಕು ದಿನಗಳಿಂದ ಒಂದೇ ಸಮನೆ ಸುರಿಯುತ್ತಿರುವ ಮಳೆಗೆ ಬಿಹಾರ ತತ್ತರಿಸಿದೆ. 20ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಅನೇಕರು ತಮ್ಮ ಮನೆ, ಜಾನುವಾರುಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ. ಹೀಗಿರುವಾಗ ಸಿಎಂ ನಿತೀಶ್ ಕುಮಾರ್ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪಿಎಂ ಮೋದಿ ಬೇಕಾದ ಸಕಲ ನೆರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಪ್ರಧಾನಿ ಮೋದಿ ಈ ಟ್ವೀಟ್ ಮಾಡಿರುವ ಬೆನ್ನಲ್ಲೇ ಕೇಂದ್ರದ ವಿರುದ್ಧ ಕನ್ನಡಿಗರ ಆಕ್ರೋಶ ವ್ಯಕ್ತವಾಗಿದೆ.

ಹೌದು ಪ್ರವಾಹಕ್ಕೀಡಾಗಿರುವ ಬಿಹಾರಕ್ಕೆ ನೆರವು ನೀಡುವುದಾಗಿ ಪ್ರಧಾನಿ ಟ್ವೀಟ್ ಮಾಡಿದ್ದಾರೆ. 'ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಳಿ ರಾಜ್ಯದಲ್ಲುಂಟಾಗಿರುವ ಪ್ರವಾಹದ ಕುರಿತು ಮಾಹಿತಿ ಪಡೆದುಕೊಂಡೆ. ಏಜೆನ್ಸಿಗಳು ಪ್ರವಾಹ ಸಂಸತ್ರಸ್ತರ ರಕ್ಷಣೆಗಾಗಿ ಸ್ಥಳೀಯ ಆಡಳಿತ ಮಂಡಳಿಯೊಂದಿಗೆ ಕೈಜೋಡಿಸಿವೆ. ಕೇಂದ್ರ ಸರ್ಕಾರ ಕೂಡಾ ರಾಜ್ಯಕ್ಕೆ ಎಲ್ಲಾ ರೀತಿಯ ಸಹಾಯ ಮಾಡಲಿದೆ' ಎಂದಿದ್ದಾರೆ.

Spoke to Bihar CM Ji regarding the flood situation in parts of the state. Agencies are working with local administration to assist the affected. Centre stands ready to provide all possible further assistance that may be required.

— Narendra Modi (@narendramodi)

ಬಿಹಾರ ಪ್ರವಾಹಕ್ಕೆ ಕೇಂದ್ರ ಸರ್ಕಾರ ಸಹಾಯದ ಭರವಸೆ ನೀಡಿರುವುದು ಶ್ಲಾಘನೀಯ. ಆದರೆ ಇದೇ ರೀತಿ ಕರ್ನಾಟಕದಲ್ಲೂ ಭೀಕರ ಪ್ರವಾಹ ಎದುರಾಗಿದ್ದು, ಜನರು ಸಂಕಷ್ಟಕ್ಕೀಡಾಗಿದ್ದಾರೆ. ಹೀಗಿದ್ದರೂ ಕೇಂದ್ರ ಸರ್ಕಾರ ಈವರೆಗೆ ಯಾವುದೇ ಪರಿಹಾರ ಘೋಷಿಸಿಲ್ಲ. ಸರ್ಕಾರದ ಈ ನಡೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. 

ಕರ್ನಾಟಕದಿಂದ 25 ಬಿಜೆಪಿ ಸಂಸದರು ಗೆದ್ದು ಲೋಕಸಭೆ ಪ್ರವೇಶಿಸಿದ್ದಾರೆ, ಕರ್ನಾಟಕದಿಂದ ರಾಜ್ಯಸಭಾ ಸದಸ್ಯೆಯಾಗಿ ಆಯ್ಕೆಯಾಗಿರುವ ಪ್ರಸ್ತುತ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಕೂಡಾ ರಾಜ್ಯಕ್ಕೇ ಭೇಟಿ ನೀಡಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಸಿಎಂ ಯಡಿಯೂರಪ್ಪ ಸೇರಿದಂತೆ ರಾಜ್ಯದ ಪ್ರಭಾವಿ ನಾಯಕರು ಕೂಡಾ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದರು. ಹೀಗಿದ್ದರೂ ಯಾವುದೇ ಕೇಂದ್ರ ಮಾತ್ರ ಮೌನ ವಹಿಸಿದೆ. ಗುಜರಾತ್, ಬಿಹಾರ್ ರಾಜ್ಯದ ನೆರವಿಗೆ ಧಾವಿಸಿದ್ದು, ಕರ್ನಾಟಕವನ್ನು ಕಡೆಗಣಿಸಿದೆ.

ಬಿಹಾರ ಪ್ರವಾಹದ ಬಗ್ಗೆ ಮಿಡಿದ ಅವರ 52 ಇಂಚಿನ ಎದೆ, ಕರ್ನಾಟಕದ ನೆರೆ ಸಂತ್ರಸ್ತರ ಬಗ್ಗೆ ಕಲ್ಲುಬಂಡೆ ಆಗಿದ್ದು ಯಾಕೆ?
ಇದು 25 ಸಂಸದರನ್ನು ಆಯ್ಕೆ ಮಾಡಿ ಕಳಿಸಿದ ಕರ್ನಾಟಕದ ಬಗ್ಗೆ ತಾತ್ಸಾರವೇ?
ಇಲ್ಲ ಅವರ ಬಗ್ಗೆ ದ್ವೇಷವೇ? pic.twitter.com/jb8lEmPr85

— Siddaramaiah (@siddaramaiah)

ಸದ್ಯ ಕೇಂದ್ರದ ಈ ನಡೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಮಂದಿ ಖಂಡಿಸಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಬಿಹಾರ ಪ್ರವಾಹದ ಬಗ್ಗೆ ಮಿಡಿದ ಮೋದಿ ಅವರ 52 ಇಂಚಿನ ಎದೆ, ಕರ್ನಾಟಕದ ನೆರೆ ಸಂತ್ರಸ್ತರ ಬಗ್ಗೆ ಕಲ್ಲುಬಂಡೆ ಆಗಿದ್ದು ಯಾಕೆ? ಇದು 25 ಸಂಸದರನ್ನು ಆಯ್ಕೆ ಮಾಡಿ ಕಳಿಸಿದ ಕರ್ನಾಟಕದ ಬಗ್ಗೆ ತಾತ್ಸಾರವೇ? ಇಲ್ಲ ಯಡಿಯೂರಪ್ಪ ಅವರ ಬಗ್ಗೆ ದ್ವೇಷವೇ?#NamoMissing' ಎಂದು ಪ್ರಶ್ನಿಸಿದ್ದಾರೆ.

ಮೋದಿಜಿ ನೀವು ಕೂಡ ಹಿಂದಿನ ಕೆಲ ಪ್ರಧಾನಿಗಳ ಹಾಗೆ ಕರ್ನಾಟಕವನ್ನ ನಿರ್ಲಕ್ಷ್ಯ ಮಾಡ್ತೀರಾ ಅಂತ ನಿಜಕ್ಕೂ ಅಂದುಕೊಂಡಿರಲಿಲ್ಲ.
ಪ್ರೀತಿಯ ನರೇಂದ್ರ ಮೋದಿಜಿ ನಮ್ಮ ಕನ್ನಡಿಗರ ಹೃದಯ ವೈಶಾಲ್ಯತೆಯನ್ನ ದೌರ್ಬಲ್ಯಾ ಅಂದುಕೊಳ್ಳಬೇಡಿ..
ಒಮ್ಮೆ ನಮ್ಮ ಕೂಗು‌ ಕೇಳಿ..
ಇಂತಹ ಕಠಿಣ ಪರಿಸ್ಥಿತಿಯಲ್ಲಿ ಜನರ ಸಹನೆ ಪರೀಕ್ಷಿಸಬೇಡಿ..🙏🙏

— ಶಕುಂತಲ ನಟರಾಜ್ Shakunthala (@ShakunthalaHS)

2009ನಲ್ಲಿ ಇದೇ ನೆರೆ ಉಂಟಾಗಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಸಂಕಷ್ಟಕ್ಕೆ ಸಿಲುಕಿದ್ದಾಗ ಆಗಿನ ಪ್ರಧಾನಮಂತ್ರಿ ಡಾ ಮನಮೋಹನ್ ಸಿಂಗ್ ಅವರು 2 ದಿನಗಳ ಕಾಲ ವೈಮಾನಿಕ ಸಮೀಕ್ಷೆ ನಡೆಸಿ 2000 ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದರು.
ಆದರೆ ಈಗ ಉಂಟಾಗಿರುವ ಜಲಪ್ರಳಯ 2009ಕ್ಕಿಂತಲೂ ಹತ್ತು ಪಟ್ಟು ಹೆಚ್ಚು ಹಾನಿಯನ್ನು ಉಂಟು ಮಾಡಿದೆ. pic.twitter.com/BESL7at1dp

— Patriot (@WahModiGWah)

Respected Modi ji, even North Karnataka is badly affected by Floods! Lakhs of people have lost thr homes and going through hell! Pls give time to our CM as well. Karnataka people have always given you immense love & respect. Pls don't hurt us, it's a humble request pls help us🙏

— Monica G (@MonicaGRaju)

ಮಾನ್ಯ ಪ್ರಧಾನಿಗಳೇ.. ಆಂಧ್ರ ಪ್ರದೇಶದ ಗೋದಾವರಿಯಲ್ಲಿ ನೆರೆ ಬಂದಾಗ ಪ್ರತಿಕ್ರಿಯೆ ನೀಡಿದ್ರಿ.
ನಿನ್ನೆ ಮೊನ್ನೆ ಬಿಹಾರ ನೆರೆ ಬಂದಾಗ ಇವತ್ತು ಪ್ರತಿಕ್ರಿಯೆ ನೀಡಿದ್ರಿ.
ಆದರೆ ಎರಡು ತಿಂಗಳ ಹಿಂದೆ ಕರ್ನಾಟಕ ನೆರೆ ಪ್ರವಾಹದಿಂದ ತತ್ತರಿಸಿದ್ರು ಇಂದಿಗೂ ಚೇತರಿಸಿಕೊಂಡಿಲ್ಲ ನೀವು ಇಂದಿಗೂ ಪ್ರತಿಕ್ರಿಯಿಸಿಲ್ಲ what about Karnataka,kannadiga

— ಶರಣ್ ಕನ್ನಡಿಗ (@sharankannadiga)

We the people of faced lot of problems.. And we lost property homes everything and evel small kids and people's. But you won't say anything , even a single twit ..?? Sorry to say this u have done a mistake plz apologize UttarKarnataka peoples pic.twitter.com/QMicNlYyq6

— Shivaraj Badiger🇮🇳 (@siddubadiger94)

What we did to you Mr. ? People voted & select 25 MP's for not bcoz they're doing good, they believe in you.But you ignored like others,You north Indians always ignored
Why should we paid if you are ignoring like this.

— sanJay V shaRanu😊 (@SharanuV)

There is a state called Karnataka
You made the same tweet for Karnataka
It's 50+ days we are still waiting for flood relief

— ಆದರ್ಶ Adarsh (@adarsh_938)

Only for vote u need Karnataka but not for anything else. Even after so many tweets n complain still there is no response. Lost trust !

— Shreyas Jamadagni (@shreyasjamdagni)

ಇನ್ನು ಮೋದಿ ಟ್ವೀಟ್ ಗೆ ಅನೇಕ ಮಂದಿ ಕಮೆಂಟ್ ಮಾಡಿದ್ದು, ಕರ್ನಾಟಕದ ಕುರಿತಾಗಿ ಯಾಕಿಷ್ಟು ಅಸಡ್ಡೆ? ಕರ್ನಾಟಕ ಕೂಡಾ ಭಾರತದ ರಾಜ್ಯ. ಇಲ್ಲಿನ ಪ್ರವಾಹ ನಿಮಗೆ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

click me!